ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಷಯ ತೃತೀಯ : ಬಂಗಾರದೊಡವೆ ಬೇಕೇ? ನೀರೇ...

By Staff
|
Google Oneindia Kannada News

Beautiful hands wearing golden banglesಬೆಂಗಳೂರು : ಅಕ್ಷಯ ತೃತೀಯದ ಸಂದರ್ಭದಲ್ಲಿ ಬಂಗಾರ ಖರೀದಿಸಿದರೇ, ವರ್ಷವಿಡೀ ಬದುಕು ಅಕ್ಷಯವಾಗುತ್ತದೆ ಎಂಬುದೊಂದು ನಂಬಿಕೆ. ಈ ನಂಬಿಕೆ ಬಳಸಿಕೊಂಡು, ವ್ಯಾಪಾರಿಗಳು ಜೇಬುತುಂಬಿಸಿಕೊಳ್ಳುತ್ತಿದ್ದಾರೆ.

ಈ ವರ್ಷ ಏ.19ರ ಮಧ್ಯಾಹ್ನ 2.22ಕ್ಕೆ ಅಕ್ಷಯ ತೃತೀಯ ಆರಂಭವಾಗಿದ್ದು, ಏ. 20ರ ರಾತ್ರಿ 8ಗಂಟೆ ತನಕ ಮುಂದುವರೆಯಲಿದೆ. ಹೀಗಾಗಿ ನಗರದ ವಿವಿಧ ಚಿನ್ನದ ಮಳಿಗೆಗಳು ತುಂಬಿ ತುಳುಕುತ್ತಿವೆ. ಗ್ರಾಹಕರು ಮುಗಿಬಿದ್ದು ಚಿನ್ನ ಖರೀದಿಸುತ್ತಿದ್ದಾರೆ.

ಇಂದು(ಏ.20) ಬಸವಜಯಂತಿ ಪ್ರಯುಕ್ತ ಸಾರ್ವಜನಿಕ ರಜೆ ಇದೆ. ಈ ಪರಿಣಾಮ ಆಭರಣ ಖರೀದಿಯ ಭರಾಟೆ ಇನ್ನಷ್ಟು ಹೆಚ್ಚಿದೆ.

ಅಕ್ಷಯ ತೃತೀಯ ದೂರವಿದ್ದಾಗಲೇ, ಮಾಧ್ಯಮಗಳಲ್ಲಿ ಅಬ್ಬರದ ಪ್ರಚಾರ ಮಾಡಿ ನಗರದ ವಿವಿಧ ಆಭರಣ ಮಳಿಗೆಗಳು ಗ್ರಾಹಕರ ಸೆಳೆದಿವೆ. ಆಕರ್ಷಕ ಕೊಡುಗೆ ಮತ್ತು ರಿಯಾಯಿತಿಗಳನ್ನು ಅವು ಗ್ರಾಹಕರಿಗೆ ನೀಡುತ್ತಿವೆ. ಈ ವರ್ಷ ದೇಶದಲ್ಲಿ 35ರಿಂದ 40ಟನ್‌ ಚಿನ್ನ ಮಾರಾಟವಾಗುವ ನಿರೀಕ್ಷೆ ಇದೆ ಎಂದು ಅಂದಾಜಿಸಲಾಗಿದೆ.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X