ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಅಕ್ಷಯ ತೃತೀಯ : ಬಂಗಾರದೊಡವೆ ಬೇಕೇ? ನೀರೇ...
ಬೆಂಗಳೂರು : ಅಕ್ಷಯ ತೃತೀಯದ ಸಂದರ್ಭದಲ್ಲಿ ಬಂಗಾರ ಖರೀದಿಸಿದರೇ, ವರ್ಷವಿಡೀ ಬದುಕು ಅಕ್ಷಯವಾಗುತ್ತದೆ ಎಂಬುದೊಂದು ನಂಬಿಕೆ. ಈ ನಂಬಿಕೆ ಬಳಸಿಕೊಂಡು, ವ್ಯಾಪಾರಿಗಳು ಜೇಬುತುಂಬಿಸಿಕೊಳ್ಳುತ್ತಿದ್ದಾರೆ.
ಈ ವರ್ಷ ಏ.19ರ ಮಧ್ಯಾಹ್ನ 2.22ಕ್ಕೆ ಅಕ್ಷಯ ತೃತೀಯ ಆರಂಭವಾಗಿದ್ದು, ಏ. 20ರ ರಾತ್ರಿ 8ಗಂಟೆ ತನಕ ಮುಂದುವರೆಯಲಿದೆ. ಹೀಗಾಗಿ ನಗರದ ವಿವಿಧ ಚಿನ್ನದ ಮಳಿಗೆಗಳು ತುಂಬಿ ತುಳುಕುತ್ತಿವೆ. ಗ್ರಾಹಕರು ಮುಗಿಬಿದ್ದು ಚಿನ್ನ ಖರೀದಿಸುತ್ತಿದ್ದಾರೆ.
ಇಂದು(ಏ.20) ಬಸವಜಯಂತಿ ಪ್ರಯುಕ್ತ ಸಾರ್ವಜನಿಕ ರಜೆ ಇದೆ. ಈ ಪರಿಣಾಮ ಆಭರಣ ಖರೀದಿಯ ಭರಾಟೆ ಇನ್ನಷ್ಟು ಹೆಚ್ಚಿದೆ.
ಅಕ್ಷಯ ತೃತೀಯ ದೂರವಿದ್ದಾಗಲೇ, ಮಾಧ್ಯಮಗಳಲ್ಲಿ ಅಬ್ಬರದ ಪ್ರಚಾರ ಮಾಡಿ ನಗರದ ವಿವಿಧ ಆಭರಣ ಮಳಿಗೆಗಳು ಗ್ರಾಹಕರ ಸೆಳೆದಿವೆ. ಆಕರ್ಷಕ ಕೊಡುಗೆ ಮತ್ತು ರಿಯಾಯಿತಿಗಳನ್ನು ಅವು ಗ್ರಾಹಕರಿಗೆ ನೀಡುತ್ತಿವೆ. ಈ ವರ್ಷ ದೇಶದಲ್ಲಿ 35ರಿಂದ 40ಟನ್ ಚಿನ್ನ ಮಾರಾಟವಾಗುವ ನಿರೀಕ್ಷೆ ಇದೆ ಎಂದು ಅಂದಾಜಿಸಲಾಗಿದೆ.
(ದಟ್ಸ್ ಕನ್ನಡ ವಾರ್ತೆ)
Story first published: Friday, April 20, 2007, 5:30 [IST]