ಬಡವರ ಕಿಡ್ನಿ ಸಮಸ್ಯೆಗಳಿಗೆ ಮಣಿಪಾಲ್ ಆಸ್ಪತ್ರೆ ಸ್ಪಂದನ
ಬೆಂಗಳೂರು : ಮಣಿಪಾಲ್ ಆಸ್ಪತ್ರೆಯಲ್ಲಿ ‘ವಿಶ್ವ ಮೂತ್ರಪಿಂಡ ದಿನಾಚರಣೆ’ ಹಿನ್ನೆಲೆಯಲ್ಲಿ , ಉಚಿತ ಡಯಾಲಿಸಿಸ್ ಸೇವೆಗೆ ಚಾಲನೆ ನೀಡಲಾಯಿತು.
ಶ್ರೀಮತಿ ಪ್ರೇಮಾದೇವಿ ಮಳಿಮಠ್ ಸ್ಮರಣಾರ್ಥ ಉಚಿತ ಡಯಾಲಿಸಿಸ್ ಸೇವೆಯನ್ನು ಆರಂಭಿಸಲಾಗಿದ್ದು, ಆರ್ಥಿಕವಾಗಿ ಹಿಂದುಳಿದ ರೋಗಿಗಳು, ಸೇವೆಯ ಪ್ರಯೋಜನ ಪಡೆಯಬಹುದು. ಈ ಯೋಜನೆಯನ್ನು, ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಣಿಪಾಲ್ ಹೆಲ್ತ್ ಸಿಸ್ಟಮ್ ಸಿಇಓ ಮಾತನಾಡಿ, ಪ್ರಾಯೋಜಕತ್ವದಲ್ಲಿ ಡಯಾಲಿಸಿಸ್ ಸೇವೆಯನ್ನು ನೀಡುವ ಮತ್ತೊಂದು ಹೊಸ ಯೋಜನೆಯನ್ನು ಸದ್ಯದಲ್ಲಿಯೇ ಅನುಷ್ಠಾನಗೊಳಿಸುತ್ತೇವೆ. ಕಾರ್ಪೋರೇಟ್ ಸಂಸ್ಥೆಗಳು ಪ್ರಾಯೋಜಕತ್ವಕ್ಕೆ ಮುಂದೆ ಬರಬೇಕು ಎಂದು ಕೋರಿದರು.
ಕಿಡ್ನಿ ಸಮಸ್ಯೆ ಹೆಚ್ಚಳ : 2050ರ ವೇಳೆಗೆ ಕಿಡ್ನಿ ಸಮಸ್ಯೆಗಳಿಂದ 36ಮಿಲಿಯನ್ ಜನ ಸಾಯುವ ಸಾಧ್ಯತೆಗಳಿವೆ. ಪ್ರತಿದಿನ 600ಜನರು ಕಿಡ್ನಿ ಸಮಸ್ಯೆಯಿಂದ ಭಾರತದಲ್ಲಿ ಸಾಯುತ್ತಿದ್ದಾರೆ. ಗಂಟೆಗೆ 25ಜನ ಸಾಯುತ್ತಿದ್ದಾರೆ ಎಂದು ಸಮೀಕ್ಷಾ ವರದಿಯಾಂದು ಹೇಳಿರುವ ಅಂಶ ಇಲ್ಲಿ ಉಲ್ಲೇಖನೀಯ.
(ದಟ್ಸ್ ಕನ್ನಡ ವಾರ್ತೆ)