ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಬಿ ಬೆನ್ನಿಗೆ ತಾರಾದಂಡು, ರೈತರು ನೂರುಅಡಿ ದೂರ!

By Staff
|
Google Oneindia Kannada News

ಮಂಡ್ಯ : ಕಾಂಗ್ರೆಸ್‌ ಸಂಸದ ಹಾಗೂ ರೆಬಲ್‌ ಸ್ಟಾರ್‌ ಅಂಬರೀಷ್‌ ಕಾವೇರಿ ಹೋರಾಟದ ಕಣಕ್ಕೆ ಶುಕ್ರವಾರ (ಫೆ. 23) ಧುಮುಕಳಿದ್ದಾರೆ. ಅವರಿಗೆ ಸಾಥ್‌ ನೀಡಲು ರಿಯಲ್‌ ಸ್ಟಾರ್‌, ಕ್ರೇಜಿ ಸ್ಟಾರ್‌ ಹಾಗೂ ಚಾಲೆಂಜಿಗ್‌ ಸ್ಟಾರ್‌ ತಯಾರಾಗಿದ್ದಾರೆ.

ಕಾವೇರಿ ಚಳವಳಿಗೆ ಹೊಸ ರೂಪ ನೀಡಲು ಅಂಬರೀಷ್‌, ಇಂದು ಮಧ್ಯಾಹ್ನ 3ಗಂಟೆಗೆ ಮಂಡ್ಯಕ್ಕೆ ಅಗಮಿಸಲಿದ್ದಾರೆ. ಇಲ್ಲಿನ ನಂದಾ ಚಿತ್ರಮಂದಿರದಿಂದ ಪ್ರತಿಭಟನಾಕಾರರ ಸಭೆ ನಡೆಯುವ ವಿಶ್ವೇಶ್ವರಯ್ಯ ಕ್ರೀಡಾಂಗಣದವರೆಗೆ, ಅಂಬರೀಷ್‌ ನೇತೃತ್ವದಲ್ಲಿ ಸಾವಿರಾರು ಮಂದಿ ಪಾದಯಾತ್ರೆ ಕೈಗೊಳ್ಳಲಿದ್ದಾರೆ.

ಅಂಬರೀಷ್‌ ಅವರನ್ನು ಬೆಂಬಲಿಸಿ ನಟ ಉಪೇಂದ್ರ, ರವಿಚಂದ್ರನ್‌ ಹಾಗೂ ದರ್ಶನ್‌ ತೂಗುದೀಪ್‌ ಸೇರಿದಂತೆ ಅನೇಕ ನಟ ನಟಿಯರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಕವಲು ದಾರಿಯಲ್ಲಿ ಕಾವೇರಿ ಹೋರಾಟ : ಅಂಬರೀಷ್‌ ಹೋರಾಟಕ್ಕೆ ಮುನ್ನವೇ ಅಪಸ್ವರ ಕೇಳಿ ಬರುತ್ತಿದೆ. ಕಾವೇರಿ ಹೋರಾಟಕ್ಕೆ ಕಾಂಗ್ರೆಸ್‌ನ ರಾಜಕೀಯ ಬಣ್ಣ ಬೆರೆಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ರೈತ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ಜಿ. ಮಾದೇಗೌಡ ಮತ್ತು ರೈತ ಸಂಘದ ಅಧ್ಯಕ್ಷ ಪುಟ್ಟಣ್ಣಯ್ಯ ಗುಡುಗಿದ್ದಾರೆ.

ರೈತರ ಹಿತರಕ್ಷಣಾ ವೇದಿಕೆ ಬ್ಯಾನರ್‌ನಡಿ ಹೋರಾಟ ರೂಪಿಸಿದರೆ ನಾವು ಬೆಂಬಲಿಸುತ್ತೇವೆ. ಇಲ್ಲದಿದ್ದರೆ, ದೂರ ಉಳಿಯುತ್ತೇವೆ ಎಂದು ರೈತ ಮುಖಂಡರು ಈಗಾಗಲೇ ಸ್ಪಷ್ಪಪಡಿಸಿದ್ದಾರೆ.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X