ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಣಗಿ ಬಾಳಪ್ಪನವರಿಗೆ ಧಾರವಾಡದಲ್ಲಿ ಅಕ್ಕರೆಯ ಸನ್ಮಾನ

By Staff
|
Google Oneindia Kannada News

ಧಾರವಾಡ : ಧಾರವಾಡ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್‌ ಪದವಿ ಪಡೆದ ಖ್ಯಾತ ರಂಗಕರ್ಮಿ ಏಣಗಿ ಬಾಳಪ್ಪ ಅವರನ್ನು ನಗರದಲ್ಲಿ ಸನ್ಮಾನಿಸಲಾಯಿತು.

ಪುರಸ್ಕಾರ್‌ ಸಂಸ್ಥೆ , ಸಾಧನಕೇರಿ ವಿದ್ಯಾಭಿವೃದ್ಧಿ ಸಂಸ್ಥೆ ಹಾಗೂ ನಾಗರೀಕ ಸಂರಕ್ಷಣಾ ಸಮಿತಿ ಜಂಟಿಯಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದವು. ಸನ್ಮಾನ ಸ್ವೀಕರಿಸಿ ಮಾತನಾಡಿದ ಏಣಿ ಬಾಳಪ್ಪ, ತಾವು 1928ರಲ್ಲಿ ರಂಗ ಪ್ರವೇಶ ಮಾಡಿದ ದಿನಗಳನ್ನು ನೆನೆದರು. ಕಲಾವಿದರು ತಮ್ಮ ನೋವುಗಳನ್ನು ನುಂಗಿಕೊಂಡು ಜನತೆಗೆ ನಲಿವನ್ನು ನೀಡಬೇಕು ಎಂದು ಹೇಳಿದರು.

ಏಣಗಿ ಬಾಳಪ್ಪನವರ ಮನೆ ‘ರಜತಗಿರಿ’ಯಲ್ಲಿ ನಡೆದ ಈ ಸಮಾರಂಭದಲ್ಲಿ ಕಾದಂಬರಿಕಾರ ಸುದರ್ಶನ್‌ ದೇಸಾಯಿ, ವಸಂತ್‌ ಅರ್ಕಾಚಾರ್‌, ಎಸ್‌ .ಎಸ್‌. ಚಿಕ್ಕ ಮಠ, ವೆಂಕಟೇಶ ದೇಸಾಯಿ, ಮುಕ್ತಂ ಸಾಬ್‌ ಗುಡ್ಡುಭಾಯಿ, ರವಿ ಕಗ್ಗನ್ನನವರ್‌ ಮುಂತಾದವರು ಭಾಗವಹಿಸಿದ್ದರು.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X