ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಏಣಗಿ ಬಾಳಪ್ಪನವರಿಗೆ ಧಾರವಾಡದಲ್ಲಿ ಅಕ್ಕರೆಯ ಸನ್ಮಾನ
ಧಾರವಾಡ : ಧಾರವಾಡ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಪಡೆದ ಖ್ಯಾತ ರಂಗಕರ್ಮಿ ಏಣಗಿ ಬಾಳಪ್ಪ ಅವರನ್ನು ನಗರದಲ್ಲಿ ಸನ್ಮಾನಿಸಲಾಯಿತು.
ಪುರಸ್ಕಾರ್ ಸಂಸ್ಥೆ , ಸಾಧನಕೇರಿ ವಿದ್ಯಾಭಿವೃದ್ಧಿ ಸಂಸ್ಥೆ ಹಾಗೂ ನಾಗರೀಕ ಸಂರಕ್ಷಣಾ ಸಮಿತಿ ಜಂಟಿಯಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದವು. ಸನ್ಮಾನ ಸ್ವೀಕರಿಸಿ ಮಾತನಾಡಿದ ಏಣಿ ಬಾಳಪ್ಪ, ತಾವು 1928ರಲ್ಲಿ ರಂಗ ಪ್ರವೇಶ ಮಾಡಿದ ದಿನಗಳನ್ನು ನೆನೆದರು. ಕಲಾವಿದರು ತಮ್ಮ ನೋವುಗಳನ್ನು ನುಂಗಿಕೊಂಡು ಜನತೆಗೆ ನಲಿವನ್ನು ನೀಡಬೇಕು ಎಂದು ಹೇಳಿದರು.
ಏಣಗಿ ಬಾಳಪ್ಪನವರ ಮನೆ ‘ರಜತಗಿರಿ’ಯಲ್ಲಿ ನಡೆದ ಈ ಸಮಾರಂಭದಲ್ಲಿ ಕಾದಂಬರಿಕಾರ ಸುದರ್ಶನ್ ದೇಸಾಯಿ, ವಸಂತ್ ಅರ್ಕಾಚಾರ್, ಎಸ್ .ಎಸ್. ಚಿಕ್ಕ ಮಠ, ವೆಂಕಟೇಶ ದೇಸಾಯಿ, ಮುಕ್ತಂ ಸಾಬ್ ಗುಡ್ಡುಭಾಯಿ, ರವಿ ಕಗ್ಗನ್ನನವರ್ ಮುಂತಾದವರು ಭಾಗವಹಿಸಿದ್ದರು.
(ದಟ್ಸ್ ಕನ್ನಡ ವಾರ್ತೆ)
Comments
Story first published: Thursday, January 25, 2007, 5:30 [IST]