ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದು ವೈಕುಂಠದ ಬಾಗಿಲು ತೆರೆದಿದೆ; ಸದ್ದಾಂಗೆ ಪ್ರವೇಶ?

By Staff
|
Google Oneindia Kannada News

Vaikunta Ekadashiಬೆಂಗಳೂರು : ಶನಿವಾರ ವೈಕುಂಠ ಏಕಾದಶಿ... ವೈಕುಂಠದ ಬಾಗಿಲಲ್ಲಿಂದು ಸುಸ್ವಾಗತದ ಫಲಕ!

ಧನುರ್‌ ಮಾಸದ ಈ ಪುಣ್ಯದಿನ ನಮ್ಮನ್ನಗಲಿದವರೆಲ್ಲರೂ ವೈಕುಂಠ ಸೇರುತ್ತಾರೆ ಎಂಬ ನಂಬಿಕೆ ಧರ್ಮವಂತರಲ್ಲಿದೆ(ಇಂದಷ್ಟೇ ಗಲ್ಲಿಗೇರಿಸಲ್ಪಟ್ಟ, ಸದ್ದಾಂ ಸಹಾ ವೈಕುಂಠಕ್ಕೆ ಹೋದನೇನೋ ಗೊತ್ತಿಲ್ಲ! ). ಏಕಾದಶಿಗಳಲ್ಲೇ ಅತ್ಯಂತ ಪುಣ್ಯದ ಏಕಾದಶಿ ವೈಕುಂಠ ಏಕಾದಶಿ. ರಾಜ್ಯದ ವಿವಿಧ ವಿಷ್ಣು ದೇವಾಲಯಗಳಲ್ಲಿ ವಿಶೇಷ ಪೂಜೆ-ಪುನಸ್ಕಾರಗಳು ನಡೆಯುತ್ತಿವೆ.

ದೇವಸ್ಥಾನಗಳಲ್ಲಿ ಇಂದು ವೈಕುಂಠದ ಬಾಗಿಲುಗಳನ್ನು ನಿರ್ಮಿಸಲಾಗಿದ್ದು, ಆ ಬಾಗಿಲುಗಳ ಮೂಲಕ ಹಾದು ಬರುವವರಿಗೆ ಪುಣ್ಯ ಮತ್ತು ಮೋಕ್ಷ ಪ್ರಾಪ್ತಿಯಾಗುತ್ತದೆ. ಇಂದು ಮಧ್ಯರಾತ್ರಿವರೆಗೆ ವೈಕುಂಠದ ಬಾಗಿಲು ತೆರೆದಿರುತ್ತದೆ ಎಂದು ಪುರಾಣಗಳು ಹೇಳುತ್ತವೆ. ಗರುಡನ ರೂಪದಲ್ಲಿ ಮಹಾವಿಷ್ಣು, ತನ್ನ ಭಕ್ತರಿಗೆ ಇಂದು ದರ್ಶನ ನೀಡಲಿದ್ದಾನೆ ಎನ್ನುತ್ತಾರೆ ಶಿರಾದ ಜ್ಯೋತಿಷಿ ಸುಧೀಂದ್ರ ಜೋಯಿಸ್‌.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X