ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸತೀಶನ ವಯಸ್ಸು 30, ಹತ್ಯೆ ಮಾಡಿದ ಮಕ್ಕಳ ಸಂಖ್ಯೆ 38!
ನೋಯಿಡಾ : ಒಂದಲ್ಲ ಎರಡಲ್ಲ 38ಮಕ್ಕಳು ಈ ಲೋಕದಿಂದ ಕಣ್ಮರೆಯಾಗಿದ್ದಾರೆ! ಈ ಎಲ್ಲದರ ಹಿಂದಿರುವ ಕಲಿಯುಗದ ರಕ್ಕಸ, ಈಗ ಪೊಲೀಸರ ಅತಿಥಿ.
ಉತ್ತರ ಪ್ರದೇಶದ ಈ ವಿಕೃತ ಮತ್ತು ಕ್ರೂರ ವ್ಯಕ್ತಿಯ ಹೆಸರು ಸತೀಶ್(30) ಅಲಿಯಾಸ್ ಸುರೇಂದ್ರ. ಮಕ್ಕಳಿಗೆ ಚಾಕಲೇಟ್ ಆಸೆ ತೋರಿಸಿ, ಕರೆತರುತ್ತಿದ್ದ ಈತ ಲೈಂಗಿಕವಾಗಿ ಹಿಂಸಿಸಿ, ನಂತರ ಕೊಂದು ಸುಮ್ಮನಾಗಿಬಿಡುತ್ತಿದ್ದ. ಹೊಸ ಬೇಟೆಗೆ ತಯಾರಿ ನಡೆಸುತ್ತಿದ್ದ. ಹೆಣ್ಣು ಮಕ್ಕಳನ್ನು ಅತ್ಯಾಚಾರ ಮಾಡಿ, ಗೋಣಿಚೀಲದಲ್ಲಿ ಹೆಣ ಕಟ್ಟಿ ಮೋರಿಗೆ ಎಸೆಯುತ್ತಿದ್ದ. ಕೆಲವು ಶವಗಳನ್ನು ತನ್ನ ಮನೆಯಲ್ಲೂ ಹೂಳುತ್ತಿದ್ದ.
ಅವನ ಮನೆಯಲ್ಲಿ ಪತ್ತೆಯಾಗಿರುವ ಗೋಣಿ ಚೀಲದಲ್ಲಿ ಮೂಳೆಗಳ ರಾಶಿಯೇ ಇದೆ. ಕೊಳೆತ ಶವಗಳು, ಅಸ್ತಿಪಂಜರಗಳು ಪತ್ತೆಯಾಗಿವೆ. ಉದ್ಯಮಿಯಾಬ್ಬರ ಮನೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಸತೀಶ್ ಮಾನಸಿಕ ಅಸ್ವಸ್ಥ ಎನ್ನಲಾಗಿದೆ.
ಸತೀಶನಂತವರು ನಮ್ಮ ಮಧ್ಯೆಯೂ ಇರಬಹುದು ಹುಷಾರ್!
(ಏಜನ್ಸೀಸ್)
Comments
Story first published: Saturday, December 30, 2006, 23:53 [IST]