ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಅಂಬೇಡ್ಕರ್ ಪ್ರತಿಮೆ ವಿರೂಪ : ಹುಬ್ಬಳ್ಳಿಯಲ್ಲೂ ಹಿಂಸೆ!
ಹುಬ್ಬಳ್ಳಿ : ಕಾನ್ಪುರದಲ್ಲಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಪ್ರತಿಮೆಗೆ ನಡೆದ ಅಪಚಾರ ವಿರೋಧಿಸಿ, ಹುಬ್ಬಳ್ಳಿಯಲ್ಲಿ ದಲಿತ ಸಂಘಟನೆಗಳು ನಡೆಸಿದ ಪ್ರತಿಭಟನೆ ಹಿಂಸಾರೂಪ ಪಡೆದು, 8ಕೆಎಸ್ಆರ್ಟಿಸಿ ಬಸ್ಗಳು ಭಸ್ಮಗೊಂಡಿವೆ. ಪರಿಸ್ಥಿತಿ ಶುಕ್ರವಾರ ಶಾಂತಗೊಂಡಿದೆ.
ರಸ್ತೆ ತಡೆಗೆ ಮುಂದಾದ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ನಡೆದ ಮಾತಿನ ಚಕಮಕಿ ಸಂದರ್ಭದಲ್ಲಿ ಕಲ್ಲು ತೂರಾಟ ನಡೆಯಿತು. ಹಿರಿಯ ಅಧಿಕಾರಿಗಳು ಮಧ್ಯೆ ಪ್ರವೇಶಿಸಿ ವಾತಾವರಣವನ್ನು ತಿಳಿಗೊಳಿಸಿದ್ದಾರೆ.
ದೇಶದ ವಿವಿಧೆಡೆ ಹಿಂಸೆ : ಅಂಬೇಡ್ಕರ್ ಪ್ರತಿಮೆಯನ್ನು ವಿರೋಪಗೊಳಿಸಿದ ಘಟನೆ ಖಂಡಿಸಿ ಮಹಾರಾಷ್ಟ್ರದಲ್ಲಿ ಹಿಂಸಾಚಾರ ಗುರುವಾರ ಸ್ಫೋಟಿಸಿದೆ. 100ಕ್ಕೂ ಅಧಿಕ ಬಸ್ಗಳು, ಎರಡು ರೈಲುಗಳಿಗೆ ಪ್ರತಿಭಟನಾಕಾರರು ಗುರುವಾರ ಬೆಂಕಿ ಹಚ್ಚಿ ತಮ್ಮ ಆಕ್ರೋಶವನ್ನು ತೀರಿಸಿಕೊಂಡಿದ್ದಾರೆ. ಪರಿಸ್ಥಿತಿ ಹತೋಟಿಗೆ ತೆಗೆದುಕೊಳ್ಳಲು ನಡೆಸಲಾದ ಗೋಲಿಬಾರ್ನಲ್ಲಿ ನಾಲ್ವರು ಬಲಿಯಾಗಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
Comments
Story first published: Friday, December 1, 2006, 23:53 [IST]