ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ಕನ್ನಡ ಡಿಂಡಿಮ
ಬೆಂಗಳೂರು : ಸುವರ್ಣ ಕರ್ನಾಟಕ ರಾಜ್ಯೋತ್ಸವ ಆಚರಣೆಗೆ ನಗರದ ಚಿನ್ನಸ್ವಾಮಿ ಕ್ರೀಡಾಂಗಣ ಸಜ್ಜಾಗಿದೆ. ಬುಧವಾರ ಸಂಜೆ 6ಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಜ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ.
35ರಿಂದ 40ಸಾವಿರ ಮಂದಿ ಈ ಸಮಾರಂಭದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಸಮಾರಂಭದ ಉದ್ಘಾಟನೆಗೂ ಮುನ್ನ ಅಂದರೆ ಸಂಜೆ 5ಕ್ಕೆ ವೈಮಾನಿಕ ಪ್ರದರ್ಶನ ನಡೆಯಲಿದೆ. ರಾಜ್ಯಪಾಲ ಟಿ.ಎನ್.ಚತುರ್ವೇದಿ ರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆವಹಿಸುವರು. ನಾಡಿನ ವಿವಿಧ ಕ್ಷೇತ್ರಗಳ ಗಣ್ಯರು, ಅಧಿಕಾರಿಗಳು, ಜನಪ್ರತಿನಿಧಿಗಳು ಪಾಲ್ಗೊಳ್ಳುವರು.
ಸಮಾರಂಭದ
ವಿಶೇಷಗಳು
ಹೀಗಿವೆ
:
- ಸಮಾರಂಭ ನಡೆಯಲಿರುವ ವೇದಿಕೆಯ ಉದ್ದ 100ಅಡಿ. ಅಗಲ 60ಅಡಿ.
- 3500 ವಿದ್ಯಾರ್ಥಿಗಳು ಮತ್ತು 500 ಕಲಾವಿದರಿಂದ ಸಮೂಹ ನೃತ್ಯಕ್ಕೆ ಹೆಜ್ಜೆ.
- ಕಲಾವಿದೆ ಮಾಯಾರಾವ್ ನಿರ್ದೇಶನದಲ್ಲಿ ನೃತ್ಯ ರೂಪಕ(ಸುವರ್ಣ ಕರ್ನಾಟಕ).
- ಗತ ಇತಿಹಾಸದ ಘಟನೆಗಳನ್ನು ನೆನಪಿಸುವ ಲೇಸರ್ ಪ್ರದರ್ಶನ.
- ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಗೀತೆಗೆ ನಟ ಶಿವರಾಜ ಕುಮಾರ್ರಿಂದ ಹೆಜ್ಜೆ.
- ಬಾಣ ಬಿರುಸುಗಳಿಂದ ಸಂಭ್ರಮ ಆಚರಣೆ.
- ರಾಜ್ಯೋತ್ಸವ ಮತ್ತು ಏಕೀಕರಣ ಪ್ರಶಸ್ತಿ ಪ್ರದಾನ.
- ಪಾಸ್ ಇದ್ದವರಿಗಷ್ಟೇ ಪ್ರವೇಶ.
(ದಟ್ಸ್ ಕನ್ನಡ ವಾರ್ತೆ)
Comments
Story first published: Tuesday, October 31, 2006, 23:53 [IST]