ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ಕನ್ನಡ ಡಿಂಡಿಮ

ಬೆಂಗಳೂರು : ಸುವರ್ಣ ಕರ್ನಾಟಕ ರಾಜ್ಯೋತ್ಸವ ಆಚರಣೆಗೆ ನಗರದ ಚಿನ್ನಸ್ವಾಮಿ ಕ್ರೀಡಾಂಗಣ ಸಜ್ಜಾಗಿದೆ. ಬುಧವಾರ ಸಂಜೆ 6ಕ್ಕೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ರಾಜ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ.

35ರಿಂದ 40ಸಾವಿರ ಮಂದಿ ಈ ಸಮಾರಂಭದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಸಮಾರಂಭದ ಉದ್ಘಾಟನೆಗೂ ಮುನ್ನ ಅಂದರೆ ಸಂಜೆ 5ಕ್ಕೆ ವೈಮಾನಿಕ ಪ್ರದರ್ಶನ ನಡೆಯಲಿದೆ. ರಾಜ್ಯಪಾಲ ಟಿ.ಎನ್‌.ಚತುರ್ವೇದಿ ರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆವಹಿಸುವರು. ನಾಡಿನ ವಿವಿಧ ಕ್ಷೇತ್ರಗಳ ಗಣ್ಯರು, ಅಧಿಕಾರಿಗಳು, ಜನಪ್ರತಿನಿಧಿಗಳು ಪಾಲ್ಗೊಳ್ಳುವರು.

ಸಮಾರಂಭದ ವಿಶೇಷಗಳು ಹೀಗಿವೆ :

  • ಸಮಾರಂಭ ನಡೆಯಲಿರುವ ವೇದಿಕೆಯ ಉದ್ದ 100ಅಡಿ. ಅಗಲ 60ಅಡಿ.
  • 3500 ವಿದ್ಯಾರ್ಥಿಗಳು ಮತ್ತು 500 ಕಲಾವಿದರಿಂದ ಸಮೂಹ ನೃತ್ಯಕ್ಕೆ ಹೆಜ್ಜೆ.
  • ಕಲಾವಿದೆ ಮಾಯಾರಾವ್‌ ನಿರ್ದೇಶನದಲ್ಲಿ ನೃತ್ಯ ರೂಪಕ(ಸುವರ್ಣ ಕರ್ನಾಟಕ).
  • ಗತ ಇತಿಹಾಸದ ಘಟನೆಗಳನ್ನು ನೆನಪಿಸುವ ಲೇಸರ್‌ ಪ್ರದರ್ಶನ.
  • ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಗೀತೆಗೆ ನಟ ಶಿವರಾಜ ಕುಮಾರ್‌ರಿಂದ ಹೆಜ್ಜೆ.
  • ಬಾಣ ಬಿರುಸುಗಳಿಂದ ಸಂಭ್ರಮ ಆಚರಣೆ.
  • ರಾಜ್ಯೋತ್ಸವ ಮತ್ತು ಏಕೀಕರಣ ಪ್ರಶಸ್ತಿ ಪ್ರದಾನ.
  • ಪಾಸ್‌ ಇದ್ದವರಿಗಷ್ಟೇ ಪ್ರವೇಶ.
ಸುವರ್ಣ ಕರ್ನಾಟಕದ ಅಂಗವಾಗಿ ರಾಜ್ಯದಲ್ಲಿ ನಡೆಯಲಿರುವ ಚಟುವಟಿಕೆಗಳ ಮಾಹಿತಿಗಾಗಿ ಭೇಟಿ ನೀಡಿ - http://www.suvarnakarnataka.kar.nic.in/index.asp

(ದಟ್ಸ್‌ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+