ರಾಜಕೀಯ ದ್ವೇಷ : ಗುಲ್ಬರ್ಗ ಜಿ.ಪಂ.ಸದಸ್ಯನ ಕಗ್ಗೊಲೆ

ರಾಜಕೀಯ ದ್ವೇಷ : ಗುಲ್ಬರ್ಗ ಜಿ.ಪಂ.ಸದಸ್ಯನ ಕಗ್ಗೊಲೆ
ಮಂಗಲಗಿ ಗ್ರಾಮದಲ್ಲಿ ಉದ್ವಿಗ್ನ ಸ್ಥಿತಿ, ರಾಜಶೇಖರ ಮಾಲಿ ಪಾಟೀಲ ಹತ್ಯೆ ಬಗ್ಗೆ ವಿಶೇಷ ತನಿಖೆ

ಗುಲ್ಬರ್ಗ : ರಾಜಕೀಯ ವೈಷಮ್ಯದಿಂದ, ಚಿತ್ತಾಪುರ ತಾಲ್ಲೂಕು ಕಾಳಗಿ ಜಿಲ್ಲಾ ಪಂಚಾಯತಿ ಸದಸ್ಯ ರಾಜಶೇಖರ ಮಾಲಿ ಪಾಟೀಲ(45) ಹತ್ಯೆಗೀಡಾಗಿದ್ದಾರೆ. ಈ ಪರಿಣಾಮ ಸೋಮವಾರ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ಮೃತರ ಸ್ವಗ್ರಾಮ ಮಂಗಲಗಿಯಲ್ಲಿ ಈ ಕೊಲೆ ನಡೆದಿದೆ. ಭಾನುವಾರ ರಾತ್ರಿ ರಾಜಶೇಖರ ಮಾಲಿ ಪಾಟೀಲ ಬಹಿರ್ದೆಸೆಗೆ ತೆರಳುತ್ತಿದ್ದಾಗ, 10-15 ಜನರ ಗುಂಪೊಂದು ದಾಳಿ ನಡೆಸಿದೆ. ತೀವ್ರವಾಗಿ ಗಾಯಗೊಂಡ ಮಾಲಿಪಾಟೀಲರನ್ನು ಗುಲ್ಬರ್ಗಾದ ಬಸವೇಶ್ವರ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯದಲ್ಲಿ ಅಸುನೀಗಿದ್ದಾರೆ.

ಮಾಲಿಪಾಟೀಲ ಜಾತ್ಯತೀತ ಜನತಾದಳ ಸದಸ್ಯರಾಗಿದ್ದರು. ಗ್ರಾಮದ ಮಧ್ಯ ವೃತ್ಯದಲ್ಲಿ ಈ ಘಟನೆ ನಡೆದಿದೆ. ರಾಜಕೀಯ ವೈಷಮ್ಯವೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+