ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಮಾರನಿಗೆ ಎಂ.ಪಿ.ಪ್ರಕಾಶ್‌ರಿಂದ ‘ಜೈ’, ಸಿಂಧ್ಯಾರಿಂದ ‘ಛೇ’

By Staff
|
Google Oneindia Kannada News

ಕುಮಾರನಿಗೆ ಎಂ.ಪಿ.ಪ್ರಕಾಶ್‌ರಿಂದ ‘ಜೈ’, ಸಿಂಧ್ಯಾರಿಂದ ‘ಛೇ’
ಕೋಮುವಾದ ಎಂಬುದು ಕೇವಲ ಒಂದು ಮನಸ್ಥಿತಿ -ಎಂ.ಪಿ.ಪ್ರಕಾಶ್‌

ಬೆಂಗಳೂರು : ವಿಶ್ವಾಸ ಮತಯಾಚನೆ ಸಂದರ್ಭದಲ್ಲಿ ಎಲ್ಲರಿಗೂ ಆಶ್ಚರ್ಯ ಮೂಡಿಸಿದ ಜೆಡಿಎಸ್‌ ನಾಯಕ ಎಂ.ಪಿ.ಪ್ರಕಾಶ್‌, ಕುಮಾರಸ್ವಾಮಿ ಅವರನ್ನು ಜೆಡಿಎಸ್‌ಎಲ್‌ಪಿ ನಾಯಕರಾಗಿ ಒಪ್ಪಿಕೊಂಡಿದ್ದೇನೆ ಎಂದು ಹೇಳಿದ್ದಾರೆ.

ಜೆಡಿಎಸ್‌-ಬಿಜೆಪಿ ಮೈತ್ರಿ ಸರ್ಕಾರ ವಿಶ್ವಾಸ ಮತಯಾಚಿಸುವ ಸಂದರ್ಭದಲ್ಲಿ ನಡೆದ ಚರ್ಚೆಯಲ್ಲಿ ಪ್ರಕಾಶ್‌ ಈ ರೀತಿ ಅಭಿಪ್ರಾಯಪಟ್ಟಿದ್ದಾರೆ.

ಎಚ್‌.ಡಿ.ದೇವೇಗೌಡ ಅವರ ಅನುಯಾಯಿ ಎಂದು ಹೇಳುತ್ತಾ ಬಂದಿರುವ ಅವರು, ಬದಲಾದ ಸಂದರ್ಭದಲ್ಲಿ ಕುಮಾರಸ್ವಾಮಿ ಅವರನ್ನು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕನೆಂದು ಒಪ್ಪಿಕೊಳ್ಳಬೇಕಾಗಿ ಬಂದಿದೆ. ಇದರ ಹೊರತು ಬೇರೆ ಆಯ್ಕೆ ಇಲ್ಲ ಎಂದು ಹೇಳಿದರು.

ಪಕ್ಷದ ಬಹುತೇಕ ಶಾಸಕರು ಕುಮಾರಸ್ವಾಮಿ ಅವರೊಂದಿಗಿದ್ದಾರೆ, ಅವರ ನಾಯಕತ್ವ ಒಪ್ಪಿಕೊಂಡಿದ್ದಾರೆ. ಇತ್ತೀಚೆಗೆ ನಡೆದ ರಾಜಕೀಯ ಬೆಳವಣಿಗೆಗಳು ನನಗೆ ಇನ್ನೂ ಅರ್ಥವಾಗಿಲ್ಲ. ಆದರೆ ಇವೆಲ್ಲವುಗಳನ್ನು ಮರೆಯಲು ಸಾಧ್ಯವಿದೆ ಎಂದು ಮಾರ್ಮಿಕವಾಗಿ ಅಭಿಪ್ರಾಯಪಟ್ಟರು.

ಚರ್ಚೆಯಲ್ಲಿ ಮಾತನಾಡಿದ ಇನ್ನೋರ್ವ ಜೆಡಿಎಸ್‌ ನಾಯಕ ಪಿ.ಜಿ.ಆರ್‌.ಸಿಂಧ್ಯಾ, ನನ್ನ ಮಟ್ಟಿಗೆ ಈಗಲೂ ಎಂ.ಪಿ.ಪ್ರಕಾಶ್‌ ಅವರೇ ಜೆಡಿಎಸ್‌ಎಲ್‌ಪಿ ನಾಯಕ. ಕುಮಾರಸ್ವಾಮಿ ಅಲ್ಲ ಎಂದು ಹೇಳಿದ್ದು ಗಮನಾರ್ಹವಾಗಿತ್ತು.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X