ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಖುರಾನಾ ಅಶಿಸ್ತಿಗೆ ಅಮಾನತ್ತೇ ಸೂಕ್ತ ಕ್ರಮ’: ಬಿಜೆಪಿ

By Staff
|
Google Oneindia Kannada News

‘ಖುರಾನಾ ಅಶಿಸ್ತಿಗೆ ಅಮಾನತ್ತೇ ಸೂಕ್ತ ಕ್ರಮ’: ಬಿಜೆಪಿ
ಷೋಕಾಸ್‌ ನೋಟಿಸ್‌ ಕೈಸೇರಿದ ಬಳಿಕ ಪ್ರತಿಕ್ರಿಯಿಸುವೆ- ಮದನ್‌ಲಾಲ್‌

ನವದೆಹಲಿ: ಬಿಜೆಪಿ ಹಿರಿಯ ನಾಯಕ ಮದನ್‌ಲಾಲ್‌ ಖುರಾನಾ ಅವರನ್ನು ಅಶಿಸ್ತಿನ ಕಾರಣದಿಂದಾಗಿ ಪಕ್ಷದಿಂದ ಅಮಾನತುಗೊಳಿಸಲಾಗಿದೆ.

ಖುರಾನಾ ದಿಲ್ಲಿ, ಪಂಜಾಬ್‌ ಮತ್ತು ಜಮ್ಮು-ಕಾಶ್ಮೀರ ರಾಜ್ಯಗಳಲ್ಲಿ ಪಕ್ಷದ ಉಸ್ತುವಾರಿ ವಹಿಸಿಕೊಂಡಿದ್ದರು. ಗುಜರಾತಿನಲ್ಲಿ ನಡೆದ ಅಮಾನುಷ ನರಮೇಧದಲ್ಲಿ ಕಳಂಕಿತರಾದವರು ಮುಕ್ತವಾಗಿ ಅಧಿಕಾರ ಅನುಭವಿಸುತ್ತಿದ್ದಾರೆ. ಅವರನ್ನು ಶಿಕ್ಷಿಸದ ಹೊರತು ಸಿಖ್‌ ವಿರೋಧಿ ದಂಗೆ ಸಂತ್ರಸ್ತರಿಗೆ ನ್ಯಾಯ ದೊರಕಿಸಿ ಕೊಡಲು ಸಾಧ್ಯವಾಗದು, ಎನ್ನುವುದರ ಮೂಲಕ ಅಡ್ವಾಣಿ ನಿಷ್ಠರ ಗುಂಪಿನ ಮೇಲೆ ಪ್ರಹಾರ ಮಾಡಿದ್ದರು. ಪಕ್ಷದ ಆತಂರಿಕ ವಿಷಯಗಳನ್ನು ಸಾರ್ವಜನಿಕ ವೇದಿಕೆ ಮತ್ತು ಮಾಧ್ಯಮಗಳಲ್ಲಿ ಚರ್ಚಿಸುವ ಮೂಲಕ ಅಶಿಸ್ತು ತೋರಿದ್ದಾರೆ ಎಂದು ಬಿಜೆಪಿ ಆಕ್ರೋಶಗೊಂಡಿತ್ತು.

ಪ್ರತಿಕ್ರಿಯೆ : ತಮ್ಮ ವಿರುದ್ಧ ಇಲ್ಲ ಸಲ್ಲದ ವರದಿ ಪ್ರಕಟಿಸಲಾಗಿದ್ದು, ಇದರ ವಿರುದ್ಧ ಯಾವುದೇ ಕ್ರಮ ಕೈಗೊಂಡರೂ ತಾವು ಎದುರಿಸಲು ಸಿದ್ಧವಿರುವುದಾಗಿ ಮದನ್‌ಲಾಲ್‌ ಹೇಳಿದ್ದಾರೆ. ಅಮಾನತು ಶಿಕ್ಷೆಗೆ ಗುರಿಯಾಗಿರುವ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅವರು, ಪಕ್ಷ ನೀಡಿದ ಷೋಕಾಸ್‌ ನೋಟಿಸ್‌ ಕೈಸೇರಿದ ನಂತರ ಈ ಬಗ್ಗೆ ಪ್ರತಿಕ್ರಿಯಿಸುವುದಾಗಿ ತಿಳಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X