ಸಕ್ರೀಯ ಕ್ರಿಕೆಟ್ಗೆ ಬಿ.ಕೆ. ವೆಂಕಟೇಶ್ ಪ್ರಸಾದ್ ಬೈಬೈ
ಸಕ್ರೀಯ
ಕ್ರಿಕೆಟ್ಗೆ
ಬಿ.ಕೆ.
ವೆಂಕಟೇಶ್
ಪ್ರಸಾದ್
ಬೈಬೈ
ಕ್ರಿಕೆಟ್
ಅಕಾಡೆಮಿ
ತರಬೇತುದಾರರಾಗಿ
ಮುಂದುವರೆಯುವುದು
ನನ್ನ
ಅಭಿಲಾಷೆ
-ಪ್ರಸಾದ್
ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ, ವೆಂಕಟೇಶ್ಪ್ರಸಾದ್ ತಮ್ಮ ಸಹ ಆಟಗಾರರಾದ ಸಚಿನ್ ತೆಂಡೂಲ್ಕರ್, ಅನಿಲ್ಕುಂಬ್ಳೆ, ರಾಹುಲ್ದ್ರಾವಿಡ್ ಸಮ್ಮುಖದಲ್ಲಿ ನಿವೃತ್ತಿಯನ್ನು ಪ್ರಕಟಿಸಿದರು.
ಮೂವತ್ತೆೈದು ವರ್ಷದ ಪ್ರಸಾದ್, 33 ಟೆಸ್ಟ್ ಪಂದ್ಯದಲ್ಲಿ 96 ವಿಕೆಟ್ಗಳನ್ನು ಗಳಿಸಿದ್ದರು. ಅಲ್ಲದೇ 63ರನ್ಗಳಿಗೆ 6ವಿಕೆಟ್ಪಡೆದದ್ದು, ವೃತ್ತಿ ಜೀವನದ ಮಹತ್ವದ ಸಾಧನೆಯಲ್ಲಿ ಒಂದಾಗಿದೆ. 161 ಏಕದಿನ ಪಂದ್ಯಗಳಲ್ಲಿ ಪಾಲ್ಗೊಂಡಿರುವ ಅವರು, 196 ವಿಕೆಟ್ಗಳ ಜೊತೆಗೆ ಪಾಕಿಸ್ತಾನದ ವಿರುದ್ಧ ನಡೆದ ಪಂದ್ಯದಲ್ಲಿ 27ರನ್ಗೆ 5 ವಿಕೆಟ್ ಪಡೆದು ಹೆಮ್ಮೆಯನ್ನು ದಕ್ಕಿಸಿಕೊಂಡಿದ್ದರು.
ಪ್ರಸ್ತುತ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಸಾದ್, ಆ ವೃತ್ತಿಯಲ್ಲಿ ಮುಂದುವರಿಯುವ ಅಭಿಲಾಷೆಯನ್ನು ವ್ಯಕ್ತಪಡಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು