ಬಿಎಂಟಿಸಿ ಬಾಗಿಲು ತೆಗೆಯೋ ಡ್ರೆೃವರಪ್ಪ ; ಉಹುಂ, ಅದಾತನ ಕೈಲಿಲ್ಲ!
ಬೆಂಗಳೂರು : ಇನ್ನು ಮುಂದೆ ಚಲಿಸುವ ಬಸ್ಗಳಿಂದ ಎಲ್ಲೆಂದರಲ್ಲಿ ಪ್ರಯಾಣಿಕರು ಜಿಗಿಯಲು ಸಾಧ್ಯವಾಗದು. 'ಬಾಗಿಲು ತೆಗೆಯೋ ಡ್ರೆೃವರಪ್ಪ" ಎಂದು ಬಸ್ ಚಾಲಕನ ಬೇಡಿದರೂ ಫಲವಿಲ್ಲ. ಕಾರಣ ಅದವನ ಕೈಯಲ್ಲಿಲ್ಲ. ಬಸ್ ನಿಲ್ಲದ ಹೊರತು ಬಾಗಿಲು ಬಾಯಿ ಬಡಿದುಕೊಂಡರೂ ತೆರೆದುಕೊಳ್ಳುವುದಿಲ್ಲ!
ಹೊಸ ತಂತ್ರಜ್ಞಾನದ ಸುರಕ್ಷಿತ ಬಾಗಿಲುಗಳನ್ನು ನಗರ ಸಾರಿಗೆಯ ಬಸ್ಗಳಿಗೆ ಅಳವಡಿಸಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ನಿರ್ಧರಿಸಿದೆ.
ಪ್ರಯಾಣಿಕರು ರಸ್ತೆಯಲ್ಲಿ ಸಂಚರಿಸುವ ಬಸ್ಗಳಿಂದ ಇಳಿಯಲು ಹಾಗೂ ಹತ್ತಲು ಹೋಗಿ ಕೆಳಕ್ಕೆ ಉರುಳಿ ಅಪಘಾತ ಸಂಭವಿಸಿದ ಪ್ರಕರಣಗಳು ಸಾಕಷ್ಟಿವೆ. ಈ ನಿಟ್ಟಿನಲ್ಲಿ ಸುರಕ್ಷಿತ ಬಾಗಿಲುಗಳು ಪರಿಣಾಮಕಾರಿ. ಇನ್ನು ವಾರದೊಳಗೆ ಸುಮಾರು 2500 ಬಿಎಂಟಿಸಿ ಮತ್ತು 1000 ಖಾಸಗಿ ಬಸ್ಗಳು ಈ ಸುರಕ್ಷಿತ ಬಾಗಿಲನ್ನು ಹೊಂದಲಿವೆ.
ಹೊಸ ಬಾಗಿಲುಗಳು ವಿಶಿಷ್ಟ ಲಾಕಿಂಗ್ ವ್ಯವಸ್ಥೆಯನ್ನು ಹೊಂದಿದ್ದು, ಎಲೆಕ್ಟ್ರಾನಿಕ್ ತಂತ್ರಜ್ಞಾನವನ್ನು ಹೊಂದಿದೆ. ಬಸ್ನ ಎಂಜಿನ್ ನಿಂತ ತಕ್ಷಣ ಬಾಗಿಲು ತೆರೆಯಲಿದೆ. ಎಂಜಿನ್ ಕಾರ್ಯ ಆರಂಭಿಸಿದಾಗ ಬಾಗಿಲು ತೆರೆಯಲು ಸಾಧ್ಯವಾಗುವುದಿಲ್ಲ. ಅಂದರೆ ಚಲಿಸುವ ಬಸ್ನ ಬಾಗಿಲನ್ನು ಯಾವುದೇ ಕಾರಣಕ್ಕೂ ತೆರೆಯುವುದು ಅಸಾಧ್ಯ. ರಾಷ್ಟ್ರದಲ್ಲಿಯೇ ಹೊಸ ತಂತ್ರಜ್ಞಾನದ ಸುರಕ್ಷಿತ ಬಾಗಿಲನ್ನು ಹೊಂದುತ್ತಿರುವ ಪ್ರಪ್ರಥಮ ನಗರ ಎನ್ನುವ ಪ್ರಖ್ಯಾತಿಗೆ ಬೆಂಗಳೂರು ಪಾತ್ರವಾಗಲಿದೆ.
ಸಂಪೂರ್ಣ ಸುರಕ್ಷಿತವಾಗಿರುವ ಈ ಬಾಗಿಲುಗಳು ಮಾತಾಡುತ್ತವೆ! ಬಾಗಿಲು ತೆರೆದುಕೊಳ್ಳುವಾಗ ಮತ್ತು ಮುಚ್ಚುವಾಗ ಪ್ರಯಾಣಿಕರಿಗೆ ಇಂಗ್ಲೀಷ್ ಮತ್ತು ಕನ್ನಡ ಭಾಷೆಯಲ್ಲಿ ಎಚ್ಚರಿಕೆ ನೀಡುವುದು ಮತ್ತೊಂದು ವಿಶೇಷ. ಒಂದು ಸುರಕ್ಷಿತ ಬಾಗಿಲನ್ನು ಅಳವಡಿಸಲು 15 ಸಾವಿರ ರೂ. ವೆಚ್ಚವಾಗಲಿದೆ.
-
ಏಪ್ರಿಲ್ 5ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
RCB vs CSK: ಆರ್ಸಿಬಿ ಕಡೆಯಿಂದ ಅಭಿಮಾನಿಗಳಿಗೆ ವಿಶೇಷ ಸಂದೇಶ: ಇಂದಿನ ಪಂದ್ಯಕ್ಕೂ ಮುನ್ನ ಇದು ಗಮನದಲ್ಲಿರಲಿ -
ರಿಷಬ್ ಸಮಯ ಬಂದಾಗ ಮಾತಾಡ್ತೀನಿ ಅಂದ: ಅನ್ಫಾಲೋ, ಗೆಳೆಯರಲ್ಲಿ ಬಿರುಕು ವದಂತಿ ಬಗ್ಗೆ ಪ್ರಮೋದ್ ಶೆಟ್ಟಿ ಪ್ರತಿಕ್ರಿಯೆ -
ಖೇಲೋ ಇಂಡಿಯಾ ಬುಡಕಟ್ಟು ಕ್ರೀಡಾಕೂಟ: 23 ಚಿನ್ನದ ಪದಕ ಗೆದ್ದು ಸಮಗ್ರ ಚಾಂಪಿಯನ್ ಪಟ್ಟ ಅಲಂಕರಿಸಿದ ಕರ್ನಾಟಕ -
ಇಂಧನ ಪೂರೈಕೆ ಕೊರತೆ ಭೀತಿ: 2026ರಲ್ಲಿ ನೀವು ಖರೀದಿಸಬಹುದಾದ ಟಾಪ್ ಎಲೆಕ್ಟ್ರಿಕ್ ಸ್ಕೂಟರ್ ಗಳು ಇಲ್ಲಿವೆ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ನಿಮ್ಮ ಮನೆಯ ಸೀಲಿಂಗ್ ಫ್ಯಾನ್ನಲ್ಲಿ ಧೂಳು ತುಂಬಿದೆಯೇ? ನಿಮಿಷಗಳಲ್ಲಿ ಸ್ವಚ್ಛಗೊಳಿಸಲು ಇಲ್ಲಿವೆ 'ಸೀಕ್ರೆಟ್' ಟಿಪ್ಸ್ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO -
Jobs: ಹೈಕೋರ್ಟ್ನಲ್ಲಿ ಕೆಲಸ ಬೇಕೆ? 70 ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿ -
Bengaluru Rent: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 6 ಪ್ರಮುಖ ಪ್ರದೇಶಗಳು -
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ












Click it and Unblock the Notifications