‘ಸಿಇಟಿ ಮಾತುಕತೆ’ಯಲ್ಲಿ ಬೆಳ್ಳಿಗೆರೆ ! ಕಾಮೆಡ್-ಕೆ ಶುಲ್ಕ ನೀತಿ ಸಡಿಲಿಕೆ
‘ಸಿಇಟಿ
ಮಾತುಕತೆ’ಯಲ್ಲಿ
ಬೆಳ್ಳಿಗೆರೆ
!
ಕಾಮೆಡ್-ಕೆ
ಶುಲ್ಕ
ನೀತಿ
ಸಡಿಲಿಕೆ
ಇನ್ನೂ
ಬಾಕಿ
ಇದೆ
ಮತ್ತೊಂದು
ಸುತ್ತಿನ
ಮಾತುಕತೆ.
ಬಗೆಹರಿಯದ
ಸೀಟು
ಹಂಚಿಕೆ
ಕಥೆ.
ಕಾಮೆಡ್-ಕೆ ಪ್ರತಿನಿಧಿಗಳು ಹಾಗೂ ಸರ್ಕಾರದ ನಡುವಣ ಮಾತುಕತೆ ಮುಖ್ಯಮಂತ್ರಿ ಧರ್ಮಸಿಂಗ್ ನೇತೃತ್ವದಲ್ಲಿ ಆ.25ರ ಬುಧವಾರ ನಡೆಯಿತು. ಶುಲ್ಕ ನೀತಿಗೆ ಸಂಬಂಧಿಸಿದಂತೆ ಉಭಯತ್ರರೂ ರಾಜಿಗೆ ಬಂದಿದ್ದು - ಮಧ್ಯಮವರ್ಗದವರು, ಹಿಂದುಳಿದವರು ಹಾಗೂ ಬಡ ವಿದ್ಯಾರ್ಥಿಗಳಿಗೆ ಶುಲ್ಕ ರಿಯಾಯಿತಿ ನೀಡಲು ಕಾಮೆಡ್-ಕೆ ಸಮ್ಮತಿಸಿದೆ. ಕೈಗಾರಿಕಾ ಸಚಿವ ಪಿಜಿಆರ್ ಸಿಂಧ್ಯಾ ಸಭೆಯ ನಂತರ ಈ ವಿಷಯವನ್ನು ಸುದ್ದಿಗಾರರಿಗೆ ತಿಳಿಸಿದರು.
ಸೀಟು ಹಂಚಿಕೆ ಸಂಬಂಧ ಶೇ.75 : 25 ಅನುಪಾತಕ್ಕೆ ಸರ್ಕಾರ ಬದ್ಧವಾಗಿದೆ. ಈ ಸಂಬಂಧ ಕಾಮೆಡ್-ಕೆ ಜೊತೆ ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ ಎಂದು ಸಿಂಧ್ಯಾ ಹೇಳಿದರು. ಮಾತುಕತೆಯ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲು ಅವರು ನಿರಾಕರಿಸಿದರು.
ಈ ನಡುವೆ ಉನ್ನತ ಶಿಕ್ಷಣಾಕಾಂಕ್ಷಿ ಸಿಇಟಿ ವಿದ್ಯಾರ್ಥಿಗಳ ಡೋಲಾಯಮಾನ ಸ್ಥಿತಿ ಮುಂದುವರೆದಿದೆ. ಆಗಸ್ಟ್ 19ರಿಂದ ಸಿಇಟಿ ಕೌನ್ಸೆಲಿಂಗ್ ಸ್ಥಗಿತಗೊಂಡಿದೆ. ಕೌನ್ಸೆಲಿಂಗ್ ಮುಂದುವರಿಕೆ ಅಥವಾ ಹೊಸದಾಗಿ ಕೌನ್ಸೆಲಿಂಗ್ ನಡೆಸುವ ಬಗ್ಗೆ ಅಭ್ಯರ್ಥಿಗಳಿಗೆ ಯಾವುದೇ ಮಾಹಿತಿ ಲಭ್ಯವಿಲ್ಲ .
(ಪಿಟಿಐ)
ಮುಖಪುಟ / ವಾರ್ತೆಗಳು