ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಷಯ ಪಾತ್ರೆ ಯಶಸ್ಸಿನ ಹಿನ್ನೆಲೆಯಲ್ಲಿ ಇಸ್ಕಾನ್‌ನಿಂದ ‘ಅಕ್ಷಯ ವಸ್ತ್ರ’

By Staff
|
Google Oneindia Kannada News

ಅಕ್ಷಯ ಪಾತ್ರೆ ಯಶಸ್ಸಿನ ಹಿನ್ನೆಲೆಯಲ್ಲಿ ಇಸ್ಕಾನ್‌ನಿಂದ ‘ಅಕ್ಷಯ ವಸ್ತ್ರ’
ಹಂತಹಂತವಾಗಿ 1 ಲಕ್ಷ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಿಸುವ ಗುರಿ

ಬೆಂಗಳೂರು : ಬಡ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಿಸುವ ‘ಅಕ್ಷಯ ವಸ್ತ್ರ ’ ಎನ್ನುವ ನೂತನ ಯೋಜನೆಯನ್ನು ಬೆಂಗಳೂರಿನ ಅಂತರರಾಷ್ಟ್ರೀಯ ಕೃಷ್ಣ ಪ್ರಜ್ಞಾ ಕೇಂದ್ರ (ಇಸ್ಕಾನ್‌) ಪ್ರಾರಂಭಿಸಿದೆ.

ಕೃಷ್ಣ ಜನ್ಮಾಷ್ಟಮಿ (ಸೆ.6) ದಿನದಿಂದ ಇಸ್ಕಾನ್‌ನ ‘ಅಕ್ಷಯ ವಸ್ತ್ರ ’ ಯೋಜನೆ ಪ್ರಾರಂಭಗೊಳ್ಳಲಿದೆ. ಅಂದು 7500 ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಿಸಲಾಗುವುದು. ಹಂತಹಂತವಾಗಿ 1 ಲಕ್ಷ ಬಡ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಿಸುವ ಗುರಿಯನ್ನು ಇಸ್ಕಾನ್‌ ಹೊಂದಿದೆ ಎಂದು ಇಸ್ಕಾನ್‌ ಅಧ್ಯಕ್ಷ ಮಧುಪಂಡಿತ ದಾಸ್‌ ತಿಳಿಸಿದ್ದಾರೆ.

‘ಅಕ್ಷಯ ವಸ್ತ್ರ ’ ಯೋಜನೆಯ ಔಪಚಾರಿಕ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ (ಆ.13) ಅವರು ಮಾತನಾಡುತ್ತಿದ್ದರು. ಪೀಣ್ಯದ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ 250 ಮಕ್ಕಳಿಗೆ ಸಮವಸ್ತ್ರ ವಿತರಿಸಲಾಯಿತು.

ಮಕ್ಕಳಿಗೆ ಅವರ ಬಾಲ್ಯವನ್ನು ಪೂರ್ಣಪ್ರಮಾಣದಲ್ಲಿ ದೊರಕಿಸಿಕೊಡುವುದು ನಮ್ಮ ಗುರಿ. ಅದಕ್ಕಾಗಿ ‘ಅಕ್ಷಯ ವಸ್ತ್ರ ’ ಯೋಜನೆಯನ್ನು ಪ್ರಾರಂಭಿಸಲಾಗುತ್ತಿದೆ. ಈಗಾಗಲೇ ‘ಅಕ್ಷಯ ಪಾತ್ರೆ’ ಕಾರ್ಯಕ್ರಮದ ಮೂಲಕ 60 ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಇಸ್ಕಾನ್‌ ಮಧ್ಯಾಹ್ನದ ಬಿಸಿಯೂಟ ನೀಡುತ್ತಿದೆ ಎಂದು ಮಧುಪಂಡಿತ ದಾಸ್‌ ಹೇಳಿದರು.

ಉಳ್ಳವರು ಬಡ ಶಾಲಾ ಮಕ್ಕಳಿಗೆ ಬಟ್ಟೆಗಳನ್ನು ಕೊಡುಗೆಯಾಗಿ ನೀಡಬೇಕು ಎಂದು ಕರೆನೀಡಿದ ಮಧುಪಂಡಿತ ದಾಸ್‌- ಶಾಲೆಗಳು ಬಟ್ಟೆ ಸಂಗ್ರಹಣಾ ಕೇಂದ್ರಗಳನ್ನು ಆರಂಭಿಸುವಂತೆ ಸೂಚಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X