ಮುಳುಗಿಸದಿರು ಓ ಸಾಗರವೆ ಗಣೇಶಭಾಗ್ ರೈತರ ತುತ್ತಿನ ಗದ್ದೆಗಳನ್ನು !
ಮುಳುಗಿಸದಿರು ಓ ಸಾಗರವೆ ಗಣೇಶಭಾಗ್ ರೈತರ ತುತ್ತಿನ ಗದ್ದೆಗಳನ್ನು !
ಒಂದೆಡೆ ಭೂಮಿ ಕೊರೆತ, ಇನ್ನೊಂದೆಡೆ ತುತ್ತಿನ ಚೀಲಕ್ಕೇ ಕನ್ನ ...
ಅಂಕೋಲಾದ ಬಾವಿಕೆರೆ ಪಂಚಾಯ್ತಿ ವ್ಯಾಪ್ತಿಯ ಗಣೇಶ್ಭಾಗ್ನ ಬತ್ತದ ಪೈರು ಇದೀಗ ಉಪ್ಪು ನೀರಿನ ಕಾಟ ಅನುಭವಿಸುತ್ತಿದೆ. ಅಧಿಕ ಮಳೆಯಿಂದಾಗಿ ಸಮುದ್ರ ಉಕ್ಕೇರುತ್ತಿದ್ದು , ಉಪ್ಪು ನೀರಿನ ದಾಳಿಗೆ ಸುಮಾರು 1000 ಎಕರೆ ಭತ್ತದ ಗದ್ದೆ ತುತ್ತಾಗುವ ಆತಂಕದಲ್ಲಿ ರೈತರು ಮುಳುಗಿದ್ದಾರೆ.
ಒಂದೆಡೆ ವಾರ್ಷಿಕ ನಕ್ಷತ್ರಿಕ ಕಡಲ ಕೊರೆತದ ಭೀತಿ. ಇನ್ನೊಂದೆಡೆ ಕೈಗೆ ಸಿಗಬೇಕಾದ ಭತ್ತದ ಬೆಳೆ ಕಡಲಪಾಲಾಗುವ ಆತಂಕ. ಇವುಗಳ ನಡುವೆ ಗಣೇಶಭಾಗ್ನ ರೈತರು ನಿದ್ದೆ ಕಳಕೊಂಡಿದ್ದಾರೆ. ಸುಮಾರು 500 ಕುಟುಂಬಗಳು ಈ ಸಂಕಟ ಅನುಭವಿಸುತ್ತಿವೆ.
ಕಳೆದ 10 ದಿನಗಳಿಂದ ಭೂಸವಕಳಿ ವ್ಯಾಪಕವಾಗಿದೆ. ಈ ನಡುವೆ ಕಿಮೀಗಟ್ಟಲೆ ನದಿ ದಂಡೆಯನ್ನು ಸಮುದ್ರ ಕ್ರಮಿಸಿದ್ದು ಭತ್ತದ ಹೊಲಗಳಿಗೆ ತೀರಾ ಹತ್ತಿರದಲ್ಲಿದೆ. ನದಿ ದಂಡೆಯ ನೂರಾರು ಮರಗಿಡಗಳು ಕಡಲ ಪಾಲಾಗಿವೆ. 8-10 ಅಡಿ ಭೂ ಸವಕಳಿ ಸಂಭವಿಸಿದೆ.
ಈ ಪ್ರದೇಶದ ಜನರು ಜೀವನೋಪಾಯಕ್ಕಾಗಿ ಭತ್ತದ ಬೆಳೆಯನ್ನೇ ನಂಬಿಕೊಂಡಿದ್ದು , ಬೆಳೆ ಕಡಲ ಪಾಲಾದಲ್ಲಿ ವರ್ಷಪೂರ್ತಿಯ ತುತ್ತಿಗೆ ಸಂಚಕಾರ ಒದಗಲಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications