ರಾಜ್ಯದ 13ಲೋಕಸಭೆ, 104ವಿಧಾನಸಭೆ ಕ್ಷೇತ್ರದ ಮತದಾನ ಆರಂಭ
ರಾಜ್ಯದ
13ಲೋಕಸಭೆ,
104ವಿಧಾನಸಭೆ
ಕ್ಷೇತ್ರದ
ಮತದಾನ
ಆರಂಭ
ವೋಟು
ಚಲಾಯಿಸಲಿರುವ
1.59
ಕೋಟಿ
ಮತದಾರರು
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ವೀರಪ್ಪ ಮೊಯಿಲಿ ಹಾಗೂ ಬಂಗಾರಪ್ಪ, ನಟ ಅಂಬರೀಷ್, ರಾಜ ಮನೆತನದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಸೇರಿದಂತೆ ಅನೇಕ ಘಟಾನುಘಟಿಗಳ ರಾಜಕೀಯ ಭವಿಷ್ಯವನ್ನು ರಾಜ್ಯದ ಮತದಾರರು ಸೋಮವಾರ ಮತಯಂತ್ರದಲ್ಲಿ ದಾಖಲಿಸುತ್ತಿದ್ದಾರೆ.
ಮೊದಲ ಹಂತದ ಮತದಾನದಲ್ಲಿ ವ್ಯಾಪಕ ಹಿಂಸಾಚಾರ ನಡೆದ ಕಾರಣ, ಈ ಬಾರಿ ಎಲ್ಲ ಕ್ಷೇತ್ರಗಳಲ್ಲೂ ಬಿಗಿ ಭದ್ರತೆ ಮಾಡಲಾಗಿದೆ. ಶಾಂತಿಪಾಲನೆ ಕರ್ತವ್ಯದಲ್ಲಿ 38 ಸಾವಿರಕ್ಕೂ ಹೆಚ್ಚು ಪೊಲೀಸರು ಭಾಗವಹಿಸಿದ್ದಾರೆ. ಬೆಳಗ್ಗೆ 7ಕ್ಕೆ ಪ್ರಾರಂಭವಾಗಿರುವ ಮತದಾನ ಸಂಜೆ 5ರವರೆಗೂ ನಡೆಯುವುದು.
ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ, ಚಿಕ್ಕಮಗಳೂರು, ಉಡುಪಿ, ಮಂಗಳೂರು, ಶಿವಮೊಗ್ಗ, ಉತ್ತರ ಕನ್ನಡ, ಧಾರವಾಡ ದಕ್ಷಿಣ, ಧಾರವಾಡ ಉತ್ತರ, ಬೆಳಗಾವಿ ಹಾಗೂ ಚಿಕ್ಕೋಡಿ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ಇದೇ ವೇಳೆಯಲ್ಲಿ 11 ರಾಜ್ಯಗಳ 136 ಲೋಕಸಭಾ ಕ್ಷೇತ್ರಗಳ ಮತದಾನವೂ ನಡೆಯುತ್ತಿದೆ.
(ಇನ್ಫೋ ವಾರ್ತೆ)
ಮುಖಪುಟ / ಕುರುಕ್ಷೇತ್ರ-2004