ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮಲ್ಯ ಪಕ್ಷದಿಂದ ಶಿವಮೊಗ್ಗ ಕುರುಕ್ಷೇತ್ರಕಣಕ್ಕೆ ಹಾಸ್ಯನಟ ದೊಡ್ಡಣ್ಣ
ಮಲ್ಯ
ಪಕ್ಷದಿಂದ
ಶಿವಮೊಗ್ಗ
ಕುರುಕ್ಷೇತ್ರಕಣಕ್ಕೆ
ಹಾಸ್ಯನಟ
ದೊಡ್ಡಣ್ಣ
ಮಾರ್ಚ್
16ರೊಳಗೆ
ಜನತಾ
ಪಕ್ಷದ
ಅಭ್ಯರ್ಥಿಗಳ
ಪಟ್ಟಿ
ರೆಡಿ
ಬಿಜೆಪಿಯಿಂದ ಬಂಗಾರಪ್ಪ ಹಾಗೂ ಕಾಂಗ್ರೆಸ್ನಿಂದ ಆಯನೂರು ಮಂಜುನಾಥ್ ಸ್ಪರ್ಧಿಸುತ್ತಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ, ತನ್ನ ಅಭ್ಯರ್ಥಿಯನ್ನಾಗಿ ದೊಡ್ಡಣ್ಣನವರ ಹೆಸರನ್ನು ಜನತಾ ಪಕ್ಷ ಗುರುವಾರ ಪ್ರಕಟಿಸಿತು. ಪಕ್ಷದ ಅಧ್ಯಕ್ಷ ವಿಜಯ್ ಮಲ್ಯ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಇತ್ತೀಚೆಗಷ್ಟೇ ಜನತಾ ಪಕ್ಷವನ್ನು ತೊರೆದು ಕಾಂಗ್ರೆಸ್ ಸೇರಿದ ಆಯನೂರು ಮಂಜುನಾಥ್ ಅವರ ನಡಾವಳಿಯ ಕುರಿತು ವಿಜಯ್ ಮಲ್ಯ ತೀವ್ರ ಆಸಮಾಧಾನ ವ್ಯಕ್ತಪಡಿಸಿದರು. ಆಯನೂರು ಮಂಜುನಾಥ್ ಜನತಾ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದರು.
ಆಯನೂರು ಮಂಜುನಾಥ್ ಹಾಗೂ ಬಂಗಾರಪ್ಪನವರ ತುರುಸಿನ ಸ್ಪರ್ಧೆಯಲ್ಲಿ ದೊಡ್ಡಣ್ಣ ಗೆಲ್ಲುವ ಕುರಿತು ವಿಜಯ್ ಮಲ್ಯ ವಿಶ್ವಾಸ ವ್ಯಕ್ತಪಡಿಸಿದರು. ತಮ್ಮ ಅಭ್ಯರ್ಥಿಯನ್ನು ಡಾರ್ಕ್ ಹಾರ್ಸ್ ಎಂದು ಮಲ್ಯ ಬಣ್ಣಿಸಿದರು.
(ಪಿಟಿಐ)
ಮುಖಪುಟ / ವಾರ್ತೆಗಳು
Comments
Story first published: Saturday, November 24, 2001, 5:30 [IST]