ವಿಜಯಶಾಂತಿ ಕೈಯಲ್ಲಿ ಕಮಲ ಧ್ವಜ !
ವಿಜಯಶಾಂತಿ ಕೈಯಲ್ಲಿ ಕಮಲ ಧ್ವಜ !
ಪಾತ್ರ ಬದಲಿಸಲೇಬೇಕಾದ ಅನಿವಾರ್ಯತೆ ತೆಲುಗು ಚಿತ್ರರಂಗದ ಕಿರಣ್ಬೇಡಿ ವಿಜಯಶಾಂತಿಗೆ ಒದಗಿದೆ. ಆಕೆ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆಗಳು ಹೆಚ್ಚಿವೆ. ಟಿಕೆಟ್ಟು ಪಕ್ಕಾ ಆಗಿದೆ. ಉಳಿದಿರುವುದು ವಿಜಯಕ್ಕಾಗಿ ಶಾಂತಿ ಮತದಾರರ ಬಾಗಿಲು ತಟ್ಟುವುದು ಮಾತ್ರ.
- ದಟ್ಸ್ಕನ್ನಡ ಬ್ಯೂರೊ
ಮುಂಬರುವ ಲೋಕಸಭಾ ಚುನಾವಣೆಗಳಲ್ಲಿ ಜನಪ್ರಿಯ ತೆಲುಗು ನಟಿಯನ್ನು ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸುವುದರೊಂದಿಗೆ, ವಿಜಯಶಾಂತಿ ಸ್ಪರ್ಧಾತ್ಮಕ ರಾಜಕೀಯಕ್ಕಿಳಿಯುವ ಮುಹೂರ್ತ ನಿರ್ಧಾರವಾದಂತಾಗಿದೆ. ಹಾಗೆ ನೋಡಿದರೆ ವಿಜಯಶಾಂತಿ ಬಿಜೆಪಿಯಾಂದಿಗೆ ಗುರ್ತಿಸಿಕೊಂಡು ತುಂಬಾ ದಿನಗಳೇ ಕಳೆದಿದ್ದವು. ಆದರೆ, ವಿಜಯಶಾಂತಿ ಹದಿನಾರಾಣೆ ರಾಜಕಾರಣಿಯಾಗುತ್ತಿರುವುದು ಈಗಲೇ.
ತೆಲಂಗಾಣ ಕ್ಷೇತ್ರದಿಂದ ವಿಜಯಶಾಂತಿ ಅವರನ್ನು ಕಣಕ್ಕಿಳಿಸಲು ಬಿಜೆಪಿ ಚಿಂತಕರ ಚಾವಡಿ ಉದ್ದೇಶಿಸಿದೆ. ಮೆಹಬೂಬ್ನಗರ ಮತ್ತು ವಾರಂಗಲ್ ಕ್ಷೇತ್ರಗಳಲ್ಲೂ ವಿಜಯಶಾಂತಿ ಸ್ಪರ್ಧಿಸಬಹುದಾದ ಇನ್ನೆರಡು ಸಂಭವನೀಯ ಕ್ಷೇತ್ರಗಳು.
ತೆಲಂಗಾಣ ಪ್ರದೇಶದಲ್ಲಿ ನಕ್ಸಲರ ಉಪಟಳ ಹೆಚ್ಚಿನ ಪ್ರಮಾಣದಲ್ಲಿದ್ದು , ಕ್ರಾಂತಿ ಕನ್ಯೆಯ ಪಾತ್ರಗಳಲ್ಲಿ ಮಿಂಚಿರುವ ವಿಜಯಶಾಂತಿಗೆ ಈ ಪ್ರದೇಶದಲ್ಲಿ ಅಪಾರ ಜನಪ್ರಿಯತೆಯೂ ಇದೆ. ನೊಂದ ಜನರ ಕಣ್ಣೊರೆಸುವ ಹಾಗೂ ಸ್ವತಃ ಕಷ್ಟನಷ್ಟಗಳಿಗೊಳಗಾಗಿ ಆನಂತರ ಸಿಡಿದೇಳುವ ಪಾತ್ರಗಳ ವಿಜಯಶಾಂತಿ ಸಿನಿಮಾಗಳು ತೆಲುಗು ಮಂದಿಗೆ ಅಚ್ಚುಮೆಚ್ಚು . ಈ ಮೆಚ್ಚುಗೆಯನ್ನೇ ಓಟುಗಳನ್ನಾಗಿ ಪರಿವರ್ತಿಸುವ ಚಿಂತನೆ ಬಿಜೆಪಿಯದು.
ಆಂಧ್ರದಲ್ಲಿ ಬಿಜೆಪಿ ಸ್ಥಿತಿಗತಿ ಅಷ್ಟೇನೂ ಚೆನ್ನಾಗಿಲ್ಲ . ಒಂದೆಡೆ ಹುರಿದುಮುಕ್ಕುವ ತೆಲುಗುದೇಶಂ, ಇನ್ನೊಂದೆಡೆ ಬೇರುಗಳ ಸಡಿಲಿಸದ ಕಾಂಗ್ರೆಸ್ ನಡುವೆ ಬಿಜೆಪಿ ನೆಲೆ ಕಂಡುಕೊಳ್ಳಲು ಹೆಣಗುತ್ತಿದೆ. ಇಂಥದೊಂದು ಹೋರಾಟದ ಸಂದರ್ಭದಲ್ಲಿ - ಸ್ಪರ್ಧಾಳುವಾಗಿ ಮಾತ್ರವಲ್ಲದೆ, ಮುಂಬರುವ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಗಳ ಪ್ರಚಾರದ ಮುಂಚೂಣಿಯಲ್ಲಿಯೂ ವಿಜಯಶಾಂತಿ ಅವರನ್ನು ಬಳಸಿಕೊಳ್ಳಲು ಬಿಜೆಪಿ ಉದ್ದೇಶಿಸಿದೆ. ತೆಲುಗುದೇಶಂನ ಪ್ರಬಲ ಪೋಟಿಗೆ ಉತ್ತರಿಸಲು ವಿಜಯಶಾಂತಿ ಬಿಜೆಪಿಯ ‘ಆಯುಧ’ವಾಗಿ ಬಳಕೆಯಾಗಲಿದ್ದಾರೆ.
ಸ್ವತಃ ವಿಜಯಶಾಂತಿ ಇತ್ತೀಚಿನ ದಿನಗಳಲ್ಲಿ ವೃತ್ತಿ ರಾಜಕೀಯದ ಬಗೆಗೆ ಹೆಚ್ಚು ಒಲವು ವ್ಯಕ್ತಪಡಿಸುತ್ತಿದ್ದಾರೆ. ಯುವ ನಟ ನಟಿಯರ ಪ್ರವಾಹದಲ್ಲಿ ತಮ್ಮ ವರ್ಚಸ್ಸು ದಿನದಿಂದ ದಿನಕ್ಕೆ ಕುಗ್ಗುತ್ತಿರುವುದನ್ನು ವಿಜಯಶಾಂತಿ ಮನಗಂಡಿದ್ದಾರೆ. ಈ ಕಾರಣದಿಂದಾಗಿ ಪಾತ್ರ ಬದಲಿಸಲೇಬೇಕಾದ ಅನಿವಾರ್ಯತೆ ಅವರಿಗಿದೆ.
ಇತ್ತೀಚೆಗಷ್ಟೇ ಬಿಜೆಪಿ ಅಧ್ಯಕ್ಷ ವೆಂಕಯ್ಯನಾಯ್ಡು ಹಾಗೂ ವಿಜಯಶಾಂತಿ ಚೆನ್ನೈನಲ್ಲಿ ರಾಜಕೀಯ ಸಾಧ್ಯಾಸಾಧ್ಯತೆಗಳ ಕುರಿತು ಚರ್ಚಿಸಿದ್ದಾರೆ. ಕೇಂದ್ರ ಸಚಿವ ಬಂಡಾರು ದತ್ತಾತ್ರೇಯ, ಆಂಧ್ರದ ಬಿಜೆಪಿ ಅಧ್ಯಕ್ಷ ಎನ್.ಇಂದ್ರಸೇನ ರೆಡ್ಡಿ ಹಾಗೂ ಬಿಜೆಪಿ ಯುವ ಮೋರ್ಚ ಅಧ್ಯಕ್ಷ ಜಿ.ಕಿಶನ್ ರೆಡ್ಡಿ ಈ ಸಮಾಲೋಚನೆಯಲ್ಲಿ ಭಾಗವಹಿಸಿದ್ದರು ಎನ್ನಲಾಗಿದೆ.
ಸದರಿ ರಾಜಕೀಯ ಲೆಕ್ಕಾಚಾರಗಳ ಗರ ತಪ್ಪದಿದ್ದರೆ- ವಿಜಯಶಾಂತಿ ಓಟು ಕೇಳಲು ತೆಲುಗರ ಮನೆಮನೆಗೆ ಬರುವ ದಿನಗಳು ದೂರವಿಲ್ಲ . ಹಾಗಾದಲ್ಲಿ ಆಂಧ್ರದ ರಾಜಕಾರಣದ ಕಣ ಇನ್ನಷ್ಟು ರಂಗೇರಲಿದೆ. ಬಿಜೆಪಿ ಪಾಲಿಗೆ ಆಕೆ ಮಾತೃರೂಪಿಯಾದಾಳೋ ಅಥವಾ ಮರೀಚಿಕೆಯಾದಳೋ...... ಉತ್ತರ ಹತ್ತಿರದಲ್ಲೇ ಇದೆ.
ಮುಖಪುಟ / ವಾಟ್ಸ್ ಹಾಟ್
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications