ದಳ ನಾಯಕರ ಒಂದು ಗುಂಪು ಸೋನಿಯಾಗೆ ಇಂದು ಶರಣು
ದಳ ನಾಯಕರ ಒಂದು ಗುಂಪು ಸೋನಿಯಾಗೆ ಇಂದು ಶರಣು
ಇದು ಅವಕಾಶವಾದಿ ರಾಜಕಾರಣ ಎಂದು ಬಿ.ಸೋಮಶೇಖರ್ ಪ್ರತಿಕ್ರಿಯೆ
ಈ ಮೂಲಕ ಪ್ರಗತಿಪರ ದಳದಲ್ಲಿದ್ದ 14 ಶಾಸಕರ ಪೈಕಿ 11 ಮಂದಿ ಕಾಂಗೈಯಲ್ಲಿ ಲೀನವಾಗಲಿದ್ದಾರೆ. ಈ ನಾಯಕರುಗಳು ಇಂದು (ಫೆ18) ಸೋನಿಯಾ ಗಾಂಧಿ ಸಮ್ಮುಖದಲ್ಲಿ , ನವದೆಹಲಿಯಲ್ಲಿ ಕಾಂಗ್ರೆಸ್ಗೆ ಸೇರುವ ಕಾರ್ಯಕ್ರಮವಿದೆ. ಜನತಾದಳದ ವಿಲೀನ ಪ್ರಕ್ರಿಯೆ ಮರೀಚಿಕೆಯಾಗಿದ್ದು , ಹೆಗಡೆ ಮರಣದ ಬಳಿಕ ಈ ಬಣ ಕಳೆಗುಂದಿತ್ತು. . ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಬೇಸತ್ತ ರಾಜಕಾರಣಿಗಳ ಪಕ್ಷಾಂತರ ಕಾರ್ಯ ಮುಂದುವರಿದಿದೆ.
‘ಇದೊಂದು ದುರದೃಷ್ಟಕಾರಿ ಬೆಳವಣಿಗೆ. ಅವಕಾಶವಾದಿ ರಾಜಕಾರಣದ ಒಂದು ಮುಖ. ಇದರಿಂದ ಒಂದು ಪಕ್ಷವನ್ನು ದುರ್ಬಲಗೊಳಿಸಲು ಸಾಧ್ಯವಿಲ್ಲ ’ ಎಂದು ಪ್ರಗತಿಪರ ದಳದ ಶಾಸಕಾಂಗ ಪಕ್ಷದ ನಾಯಕ ಸೋಮಶೇಖರ್ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಮುಖಪುಟ / ವಾರ್ತೆಗಳು












Click it and Unblock the Notifications