ಹೂವು ತಂದ ಸುಪುತ್ರನ ಅಗಲಿಕೆಗೆ ರೋದಿಸುತ್ತಿರುವ ಉತ್ತರಕನ್ನಡ
ಹೂವು ತಂದ ಸುಪುತ್ರನ ಅಗಲಿಕೆಗೆ ರೋದಿಸುತ್ತಿರುವ ಉತ್ತರಕನ್ನಡ
ಶಾಲೆ ಕಾಲೇಜುಗಳಿಗೆ ರಜೆ, ರಾಜ್ಯಾದ್ಯಂತ ಮೂರು ದಿನ ಶೋಕ
ರಾಮಕೃಷ್ಣ ಹೆಗಡೆ ಅವರ ಕುಟುಂಬದವರು ಪ್ರಸ್ತುತ ಸಿದ್ಧಾಪುರದ ದೊಡ್ಡಮನೆಯಲ್ಲಿ ನೆಲೆಸಿಲ್ಲ . ಆದರೆ ಹೆಗಡೆ ಅವರ ಹಿರಿಯ ಸೋದರ ಗಣೇಶ ಹೆಗಡೆ ಅವರ ಕುಟುಂಬ ಸಿದ್ಧಾಪುರದಲ್ಲಿ ವಾಸವಿದೆ. ಅವರಿಗೆ ಸಾವಿನ ಸುದ್ದಿ ತಿಳಿದಿದ್ದು ಸೋಮವಾರ ಸಂಜೆಯ ವೇಳೆಗೆ. ಆನಂತರ ಇಡೀ ಮನೆಯಲ್ಲಿ ಸ್ಮಶಾನ ಮೌನ. ‘ಏನು ಹೇಳಬೇಕೆಂದೇ ತಿಳಿಯುತ್ತಿಲ್ಲ’ ಎಂದು ಸುಮ್ಮನಾಗುತ್ತಾರೆ ಗಣೇಶ ಹೆಗಡೆ ಅವರ ಪುತ್ರ ಶಶಿಭೂಷಣ್.
ಸಿದ್ಧಾಪುರ ಪಟ್ಟಣದಲ್ಲಿ ಸ್ವಯಂ ಘೋಷಿತ ಬಂದ್ನ ವಾತಾವರಣವಿದೆ. ಸೋಮವಾರ ಮಧ್ಯಾಹ್ನವೇ ಅಂಗಡಿ ಮಳಿಗೆಗೆ ಮಾಲಿಕರು ಷಟರ್ ಎಳೆದರು. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಯಿತು. ಈ ಮೌನ ಮಂಗಳವಾರವೂ ಮುಂದುವರಿದಿದೆ. ಈ ನಡುವೆ, ಕರಾವಳಿ ಪ್ರದೇಶದಲ್ಲಿ ಮುಂದುವರೆದಿದ್ದ ಜನತಾ ಪಕ್ಷದ ‘ವಿಜಯ ಯಾತ್ರೆ’ ಹೆಗಡೆ ಅವರ ನಿಧನದಿಂದಾಗಿ ರದ್ದಾಗಿದೆ.
ಮೂರು ದಿನಗಳ ಶೋಕ
ಮಾಜಿ ಮುಖ್ಯಮಂತ್ರಿ ಹೆಗಡೆ ಅವರ ಗೌರವಾರ್ಥ ರಾಜ್ಯದ ಎಲ್ಲ ಶಾಲಾ ಕಾಲೇಜು, ಸರ್ಕಾರಿ ಕಚೇರಿ ಹಾಗೂ ನ್ಯಾಯಾಲಯಗಳಿಗೆ ರಾಜ್ಯ ಸರ್ಕಾರ ಒಂದು ದಿನದ ರಜೆ (ನ.13ರ ಮಂಗಳವಾರ) ಘೋಷಿಸಿದೆ. ಜ.14ರವರೆಗೂ ಶೋಕಾಚರಣೆ ನಡೆಸಲು ನಿರ್ಧರಿಸಿರುವ ಸರ್ಕಾರ- ಎಲ್ಲ ಮನರಂಜನಾ ಕಾರ್ಯಕ್ರಮಗಳು ಹಾಗೂ ಸಭೆ ಸಮಾರಂಭಗಳನ್ನು ರದ್ದುಪಡಿಸಿದೆ. ಸರ್ಕಾರಿ ಕಟ್ಟಡಗಳ ಮೇಲೆ ರಾಷ್ಟ್ರಧ್ವಜವನ್ನು ಅರ್ಧ ಮಟ್ಟದಲ್ಲಿ ಹಾರಿಸುವಂತೆಯೂ ಸರ್ಕಾರ ಆದೇಶ ಹೊರಡಿಸಿದೆ.
(ಇನ್ಫೋ ವಾರ್ತೆ)
ಪೂರಕ ಓದಿಗೆ-
ರಾಮಕೃಷ್ಣ ಹೆಗಡೆ : ಕಣ್ಮರೆಯಾದ ರಾಜಗುರು
ಮುಖಪುಟ / ವಾರ್ತೆಗಳು
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications