ಕವಯತ್ರಿಡಾ.ವಿನಯಾ‘ಬಾಯಾರಿಕೆ’ಗೆ ಪುತಿನ ಪುರಸ್ಕಾರ-02
ಕವಯತ್ರಿಡಾ.ವಿನಯಾ‘ಬಾಯಾರಿಕೆ’ಗೆ
ಪುತಿನ
ಪುರಸ್ಕಾರ-02
ನ.29ರಂದು
ಬರಹಗಾರರು-ಪ್ರಕಾಶಕರ
ಸಂಘ
ಅಸ್ತಿತ್ವಕ್ಕೆ
ಡಿಸೆಂಬರ್ ಕೊನೆಯ ವಾರದಲ್ಲಿ ಗದಗದಲ್ಲಿ ನಡೆಯುವ ಸಮಾರಂಭದಲ್ಲಿ ವಿನಯಾ ಅವರಿಗೆ ಪುತಿನ ಪ್ರಶಸ್ತಿ ಪ್ರದಾನ ಮಾಡಲಾಗುವುದು. 20 ಸಾವಿರ ರುಪಾಯಿ ನಗದು ಹಾಗೂ ಸ್ಮರಣಿಕೆಯನ್ನು ಪುರಸ್ಕಾರ ಒಳಗೊಂಡಿದೆ ಎಂದು ಪುತಿನ ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.
ಬರಹಗಾರರು, ಪ್ರಕಾಶಕರ ಸಂಘ
ಸಮಾನಾಸಕ್ತ ಬರಹಗಾರರು-ಪ್ರಕಾಶಕರನ್ನೊಳಗೊಂಡ ಕರ್ನಾಟಕದ ಬರಹಗಾರರು ಹಾಗೂ ಪ್ರಕಾಶಕರ ಸಂಘ ನವಂಬರ್ 29ರಂದು ಉದ್ಘಾಟನೆಗೊಳ್ಳಲಿದೆ.
ಪ್ರಕಟಣೆ, ಪ್ರಶಸ್ತಿ , ಬರಹಗಾರರ ಚಿಕಿತ್ಸೆಗೆ ನೆರವು ಮುಂತಾದ ಉದ್ದೇಶಗಳನ್ನು ಸಂಘ ಒಳಗೊಂಡಿದೆ. ವಯಸ್ಕರ ಶಿಕ್ಷಣ ಮತ್ತು ಗ್ರಂಥಾಲಯ ಸಚಿವ ಬಾಬುರಾವ್ ಚವ್ಹಾಣ್ ಸಂಘದ ಉದ್ಘಾಟನೆಯನ್ನು ನೆರವೇರಿಸುವರು ಎಂದು ಸಂಘದ ಅಧ್ಯಕ್ಷ ನಿಡಸಾಲೆ ಪುಟ್ಟಸ್ವಾಮಯ್ಯ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಬರಗೂರು ರಾಮಚಂದ್ರಪ್ಪ , ಗೊ.ರು.ಚನ್ನಬಸಪ್ಪ , ಡಾ.ಹಂಪನಾ ಸೇರಿದಂತೆ ವಿವಿಧ ಗಣ್ಯರು ಸಂಘದ ಸಲಹೆಗಾರರಾಗಿದ್ದಾರೆ ಎಂದು ಪುಟ್ಟಸ್ವಾಮಯ್ಯ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು