ಮುಂಬಯಿ ಮಾರುಕಟ್ಟೆ ಚಪ್ಪಲಿ ಮೇಲೆ ಮಹಾತ್ಮ ಗಾಂಧಿ ಚಿತ್ರ !
ಮುಂಬಯಿ ಮಾರುಕಟ್ಟೆ ಚಪ್ಪಲಿ ಮೇಲೆ ಮಹಾತ್ಮ ಗಾಂಧಿ ಚಿತ್ರ !
ದೇಶಭಕ್ತಿ ಮೆಟ್ಟಿನ ಮಟ್ಟಕ್ಕೆ ಮುಟ್ಟಿತೇ, ಶಿವ ಶಿವಾ
ದೆಹಲಿ ಮತ್ತು ಆಗ್ರಾದಲ್ಲಿ ಚಪ್ಪಲಿ ರಬ್ಬರುಗಳ ಮೇಲೆ ಗಾಂಧೀ ಮಹಾತ್ಮ ಇರುವ ನೋಟಿನ ಚಿತ್ರವನ್ನು ಅಚ್ಚುಹಾಕಲಾಗುತ್ತಿದೆ. ಹಾಗೆ ಅಚ್ಚು ಹಾಕಿಸಿಕೊಂಡ ರಬ್ಬರುಗಳಿಗೆ ಕುರ್ಲಾದಲ್ಲಿ ಪಟ್ಟಿ ಕಟ್ಟಲಾಗುತ್ತದೆ. ಸಿದ್ಧವಾದ ಚಪ್ಪಲಿ ಮುಂಬಯಿ ಮಾರುಕಟ್ಟೆಗೆ ಬರುತ್ತದೆ. ಈ ಸಲದ ದೀಪಾವಳಿ ವಿಶೇಷ ಏನು ಅಂತ ಮುಂಬಯಿಗರನ್ನು ಪ್ರಶ್ನಿಸಿದಲ್ಲಿ, ಸಿಗುವ ಉತ್ತರಗಳ ಪೈಕಿ ಗಾಂಧಿ ಮಹಾತ್ಮನ ಚಪ್ಪಲಿ ಕೂಡ ಒಂದಾಗಿರುವುದು ಸಾಂಸ್ಕೃತಿಕ ದುರಂತ.
ಕೊಳ್ಳುವ ಮಹಾತ್ಮರಾರು ಗೊತ್ತೆ?
ಮೊದಲೇ ಗಾಂಧಿ ಪದವನ್ನು ಬ್ರಾಂದಿ ಪ್ರಾಸಕ್ಕೆ ತಳಕು ಹಾಕುವ ಮಂಗ ಬುದ್ಧಿಯ ಕೆಲವು ಕಾಲೇಜು ಪಡ್ಡೆಗಳು ಗಾಂಧಿ ಮಹಾತ್ಮನ ಚಿತ್ರವಿರುವ ಚಪ್ಪಲಿಗಳ ಹಿಂದೆ ಬಿದ್ದಿದ್ದಾರೆ. ಕೆಲವರು ‘ನೂರು ರುಪಾಯಿ ಲಕ್ಷ್ಮಿ ನನ್ನ ಕಾಲ ಕೆಳಗೆ ಬಂದು ಬಿದ್ದಿದ್ದಾಳೆ’ ಅಂತ ಹೇಳಿಕೊಂಡು ಓಡಾಡುತ್ತಿದ್ದರೆ, ಇನ್ನು ಕೆಲವರು ‘ಬಾಪೂ ಮೇರೆ ಪೈದಲ್ ಪಡಾ ಹೈ’ ಅಂತ ಕಟಕಿಯಾಡುತ್ತಿದ್ದಾರೆ.
ಮಾರುಕಟ್ಟೆಯಲ್ಲಿ ಇಷ್ಟೆಲ್ಲ ಸಂಚಲನೆ ಹುಟ್ಟಿಸಿರುವ ಈ ವಿಲಕ್ಷಣ ಚಪ್ಪಲಿಗಳ ಬಗ್ಗೆ ಶಿವಸೇನೆಯವರೂ ಸೇರಿದಂತೆ ಇನ್ನೂ ಯಾರೂ ಚಕಾರವೆತ್ತದಿರುವುದು ಅಚ್ಚರಿಯ ಮಾತೇ ಸರಿ. ಇಂಥಾ ಚಪ್ಪಲಿಗಳನ್ನು ತರಿಸಿ ಮಾರುತ್ತಿರುವವರಿಗೆ ಯಾವುದರಲ್ಲಿ ಹೊಡೆಯಬೇಕು ಎಂದು ಗಾಂಧಿ ಮಹಾತ್ಮ ಹುಟ್ಟಿದ ದೇಶದ ಜನರಾದ ನೀವೇ ಹೇಳಿ.
(ಇನ್ಫೋ ವಾರ್ತೆ)
ಮುಖಪುಟ / ವಾಟ್ಸ್ ಹಾಟ್
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ












Click it and Unblock the Notifications