ಒಕ್ಕಲಿಗರ ಸಂಘದ ಅಧ್ಯಕ್ಷ ಗಾದಿಗೆ ಪ್ರೊ.ವೆಂಕಟಗಿರಿಗೌಡ

ಒಕ್ಕಲಿಗರ ಸಂಘದ ಅಧ್ಯಕ್ಷ ಗಾದಿಗೆ ಪ್ರೊ.ವೆಂಕಟಗಿರಿಗೌಡ
ಚುನಾವಣೆಯಲ್ಲಿ ಕೆಂಚಪ್ಪಗೌಡರ ಬಣದ ಮೇಲುಗೈ

ಬೆಂಗಳೂರು : ಕರ್ನಾಟಕ ಒಕ್ಕಲಿಗರ ಸಂಘದ ಅಧ್ಯಕ್ಷರಾಗಿ ಅರ್ಥಶಾಸ್ತ್ರಜ್ಞ ಹಾಗೂ ಮಾಜಿ ಸಂಸದ ಪ್ರೊ.ಕೆ.ವೆಂಕಟಗಿರಿ ಗೌಡ ಆಯ್ಕೆಯಾಗಿದ್ದಾರೆ.

ಸೋಮವಾರ (ಜು.28) ನಡೆದ ಸಂಘದ ಕಾರ್ಯಕಾರಿಣಿ ಸಭೆಯಲ್ಲಿ 19 ನಿರ್ದೇಶಕರ ಬೆಂಬಲದೊಂದಿಗೆ ಪ್ರತಿಸ್ಪರ್ಧಿ ಹಾಗೂ ಈ ಹಿಂದಿನ ಅಧ್ಯಕ್ಷರಾಗಿದ್ದ ಡಾ.ಸಿ.ವಿಠಲ್‌ ಅವರನ್ನು ಹಿಂದಿಕ್ಕಿ, ವೆಂಕಟಗಿರಿ ಗೌಡ ಗಾದಿಗೆ ಚುನಾಯಿತರಾದರು. 35 ನಿರ್ದೇಶಕರ ಪೈಕಿ ವಿಠಲ್‌ ಅವರನ್ನು 16 ನಿರ್ದೇಶಕರು ಬೆಂಬಲಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಎ.ಮಂಜು, ಉಪಾಧ್ಯಕ್ಷರಾಗಿ ಎಸ್‌.ಟಿ.ನಾರಾಯಣಗೌಡ ಹಾಗೂ ಎಂ.ಆಂಜನಪ್ಪ , ಜಂಟಿ ಕಾರ್ಯದರ್ಶಿಯಾಗಿ ಡಾ.ಹನುಮಂತೇಗೌಡ ಮತ್ತು ಖಜಾಂಚಿಯಾಗಿ ಬಿ.ಎಚ್‌.ಜಗದೀಶ್‌ ಆಯ್ಕೆಯಾಗಿದ್ದಾರೆ.

ಒಟ್ಟಾರೆಯಾಗಿ ಕೆಂಚಪ್ಪಗೌಡರ ಬಣ ಸಂಘದ ಚುನಾವಣೆಯಲ್ಲಿ ಮೇಲುಗೈ ಸಾಧಿಸಿದೆ. ಈ ಬಣ ಬೆಂಬಲ ಕೊಟ್ಟಿದ್ದರಿಂದ ಪ್ರೊ.ವೆಂಕಟಗಿರಿ ಗೌಡ ಅಧ್ಯಕ್ಷರಾದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+