ರಾಜ್ಯದಲ್ಲಿ ಎಂಎನ್ಸಿಗಳ ಬೀಡು, ವಜ್ರ ಗಣಿಗಾರಿಕೆಗೆ ಸ್ಪೀಡು
ರಾಜ್ಯದಲ್ಲಿ
ಎಂಎನ್ಸಿಗಳ
ಬೀಡು,
ವಜ್ರ
ಗಣಿಗಾರಿಕೆಗೆ
ಸ್ಪೀಡು
ಗಣಿಗಾರಿಕೆಗಾಗಿ
30
ಕಂಪೆನಿಗಳಿಗೆ
ಸರಕಾರದ
ಅನುಮತಿ
ಮುಂದಿನ ವರ್ಷದಿಂದ ರಾಜ್ಯದಲ್ಲಿ ವಜ್ರ ಹಾಗೂ ಚಿನ್ನದ ಗಣಿಗಾರಿಕೆ ಪ್ರಾರಂಭವಾಗಲಿದೆ. ಗಣಿಗಾರಿಕೆ ನಡೆಸಲು 30 ಕಂಪನಿಗಳಿಗೆ ರಾಜ್ಯ ಸರ್ಕಾರ ಸಮ್ಮತಿಸಿದೆ. ಈ ಕಂಪನಿಗಳಲ್ಲಿ ಬಹುರಾಷ್ಟ್ರೀಯ ಕಂಪನಿಗಳೂ ಸೇರಿವೆ ಎಂದು ಗಣಿ ಸಚಿವ ವಿ.ಮುನಿಯಪ್ಪ ತಿಳಿಸಿದ್ದಾರೆ. ಜುಲೈ 8ರ ಮಂಗಳವಾರ ನಡೆದ ಭೂಸರ್ವೇಕ್ಷಣ ಸಭೆಯನ್ನು ಉದ್ಘಾಟಿಸಿ ಸಚಿವರು ಮಾತನಾಡುತ್ತಿದ್ದರು.
ಬಹುರಾಷ್ಟ್ರೀಯ ಕಂಪನಿಗಳಾದ ಡೀಬೀರ್ಸ್ , ಎಸಿಸಿ ಲಿಂಕ್ಟನ್ ಸೇರಿದಂತೆ ವಿವಿಧ ಕಂಪನಿಗಳು ಗಣಿಗಾರಿಕೆಗೆ ಪೂರ್ವಭಾವಿ ಸಿದ್ಧತೆಗಳನ್ನು ಈಗಾಗಲೇ ಪ್ರಾರಂಭಿಸಿವೆ. ಪ್ರಸ್ತುತ ಗಣಿಗಾರಿಕೆಯಿಂದ ರಾಜ್ಯದ ಬೊಕ್ಕಸಕ್ಕೆ 170 ಕೋಟಿ ರುಪಾಯಿ ಆದಾಯವಿದ್ದು , ಇನ್ನೆರಡು ವರ್ಷಗಳಲ್ಲಿ ಆದಾಯದ ಪ್ರಮಾಣ 250 ಕೋಟಿ ರುಪಾಯಿಗೆ ಹೆಚ್ಚಲಿದೆ ಎಂದು ಮುನಿಯಪ್ಪ ಹೇಳಿದರು.
ಕುದುರೆಮುಖದಲ್ಲಿ ಗಣಿಗಾರಿಕೆಗೆ ಅವಕಾಶ ನೀಡುವುದಿಲ್ಲ . ಸುಪ್ರಿಂಕೋರ್ಟ್ ಆದೇಶದ ಪ್ರಕಾರ ಪ್ರಸ್ತುತ ನಡೆಯುತ್ತಿರುವ ಗಣಿಗಾರಿಕೆ ಅವಧಿ ಮುಗಿದ ನಂತರ ಗಣಿಗಾರಿಕೆಯನ್ನು ನಿಲ್ಲಿಸಲಾಗುವುದು ಎಂದು ಸಚಿವ ಮುನಿಯಪ್ಪ ಸ್ಪಷ್ಟಪಡಿಸಿದರು.
ಬಾಲಂಗೋಚಿ : ಗಣಿಗಾರಿಕೆಯಿಂದ ಒದಗುವ ಆದಾಯವನ್ನು ರಾಜ್ಯ ಸರ್ಕಾರ ಮಕ್ಕಳ ಬೆಳಗಿನ ಬಿಸಿ ಉಪಾಹಾರ ಯೋಜನೆ ರೂಪಿಸಲು ಬಳಸಬಹುದು! ಆ ಯೋಜನೆಯನ್ನು ‘ಭೂಮಿಗೆ ಕನ್ನ -ಮಕ್ಕಳಿಗೆ ಅನ್ನ’ ಅಥವಾ ‘ತಿಂಡಿಗಾಗಿ ಗುಂಡಿ’ ಎಂದು ಹೆಸರಿಸಬಹುದಾ ?
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು