ಕಿಗ್ಗದ ವರುಣ ದೇವರಿಗೆ ಪೂಜೆ ಸಲ್ಲಿಸಿದ ಕೃಷ್ಣ
ಶೃಂಗೇರಿ : ಕಿಗ್ಗದ ಋಷ್ಯಶೃಂಗ ದೇವಳದ ವರುಣ ದೇವರಿಗೆ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಭಾನುವಾರ (ಮಾರ್ಚ್ 16) ಪೂಜೆ ಸಲ್ಲಿಸಿದರು.
ಮೂರು ವರ್ಷದ ಹಿಂದೆ ತೋರಣ ಗಣಪತಿಗೆ ಪೂಜೆ ಮಾಡಿ, ರಾಜ್ಯದ ರಸ್ತೆಗಳ ಅಭಿವೃದ್ದಿಯನ್ನು ಹಸನಾಗಿ ಮಾಡಲು ಶಕ್ತಿ ಕೊಡುವಂತೆ ಪ್ರಾರ್ಥಿಸಿದೆ. ಆ ಪ್ರಾರ್ಥನೆ ಈಗ ಈಡೇರಿದೆ. ಮೂರು ವರ್ಷದ ನಂತರ ವರುಣ ದೇವರ ಮೊರೆಹೋಗಿದ್ದೇನೆ. ಈ ಬೇಡಿಕೆಯನ್ನೂ ಭಗವಂತ ಈಡೇರಿಸುತ್ತಾನೆಂಬ ನಂಬಿಕೆ ನನಗಿದೆ ಎಂದು ಕೃಷ್ಣ ಹೇಳಿದರು.
ಕಿಗ್ಗದಲ್ಲಿ ಪೂಜೆ ಮಾಡಿದ ನಂತರ ಶೃಂಗೇರಿಗೆ ಮರಳಿದ ಕೃಷ್ಣ, ಶಾರದಾ ಪೀಠದ ಭಾರತಿ ತೀರ್ಥ ಸ್ವಾಮೀಜಿಯನ್ನು ಭೇಟಿಯಾದರು. ರಾಜ್ಯದಲ್ಲಿ ಮಳೆ- ಬೆಳೆ ಚೆನ್ನಾಗಿ ಆಗಲೆಂದು ಪ್ರಾರ್ಥಿಸುವಂತೆ ಸ್ವಾಮೀಜಿಯನ್ನು ಕೇಳಿಕೊಂಡರು.ಕೃಷ್ಣ ಜೊತೆಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಡಿ.ಬಿ.ಚಂದ್ರೇಗೌಡ, ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್ನ ಪ್ರಧಾನ ವಿಪ್ ಆಗಿರುವ ಸಲೀಂ ಅಹಮದ್, ಕನ್ನಡ ಮತ್ತು ಸಂಸ್ಕೃತಿ ಸಚಿವೆ ರಾಣಿ ಸತೀಶ್, ಕರ್ನಾಟಕ ಆಗ್ರೋ ಇಂಡಸ್ಟ್ರೀಸ್ ಕಾರ್ಪೊರೇಷನ್ ಅಧ್ಯಕ್ಷ ಬಿ.ರಾಮಯ್ಯ ಮೊದಲಾದವರಿದ್ದರು.
ಶೃಂಗೇರಿಯ ಆದಿಚುಂಚನಗಿರಿ ಹೆಲಿಪ್ಯಾಡ್ನಲ್ಲಿ ಕೃಷ್ಣ ನೇತೃತ್ವದ ತಂಡ ಇದ್ದ ಹೆಲಿಕಾಫ್ಟರ್ ಇಳಿದಿತ್ತು.
(ಇನ್ಫೋ ವಾರ್ತೆ)
ಮುಖಪುಟ / ಕೃಷ್ಣಗಾರುಡಿ