ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬಿಜಾಪುರ ರೈತ ಸಮಾವೇಶಕ್ಕೆ ಅಣ್ಣಾ ಹಜಾರೆ
ಬಿಜಾಪುರ : ಕರ್ನಾಟಕ ರಾಜ್ಯ ರೈತರ ಸಂಘವು ಜನವರಿ 30ರಂದು ಬಿಜಾಪುರ ನಗರದಲ್ಲಿ ರೈತ ಸಮಾವೇಶವನ್ನು ಹಮ್ಮಿಕೊಂಡಿದೆ.
ಬರಕ್ಕೆ ಶಾಶ್ವತ ಪರಿಹಾರ ಮತ್ತು ರೈತರ ಕೃಷಿ ವಿದ್ಯುತ್ ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವ ನಿಟ್ಟಿನಲ್ಲಿ ಈ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ರೈತ ಸಂಘದ ಅಧ್ಯಕ್ಷ ಕೆ. ಎಸ್. ಪುಟ್ಟಣ್ಣಯ್ಯ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಶಾಶ್ವತ ಬರಿ ಪರಿಹಾರಕ್ಕಾಗಿ, ನಿರ್ವಸಿತರ ಪುನರ್ವಸತಿಗಾಗಿ ಮತ್ತು ಸಮರ್ಪಕ ವಿದ್ಯುತ್ ಪೂರೈಕೆಗಾಗಿ ವೈಜ್ಞಾನಿಕ ಕೃಷಿ, ದುಡಿಯುವ ಕ್ಷೇತ್ರವನ್ನು ಜ್ಞಾನ ಕ್ಷೇತ್ರ ಎಂದು ಘೋಷಿಸುವಂತೆ ಈ ಸಮಾವೇಶದಲ್ಲಿ ಒತ್ತಾಯಿಸಲಾಗುವುದು. ಸಮಾವೇಶದಲ್ಲಿ ಅಣ್ಣಾ ಹಜಾರೆ, ಚಿತ್ರರ್ದುಗದ ಮುರುಘ ರಾಜೇಂದ್ರ ಶರಣರು, ಸ್ವಾಮಿ ಅಗ್ನಿವೇಶ, ಲೋಕಸಭೆ ಮಾಜಿ ಅಧ್ಯಕ್ಷ ರಬಿರಾಯ ಮತ್ತಿತರ ಗಣ್ಯರು ಭಾಗವಹಿಸುವರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
Comments
Story first published: Thursday, January 23, 2003, 5:30 [IST]