Get Updates
Get notified of breaking news, exclusive insights, and must-see stories!

ಸುಬ್ರಹ್ಮಣ್ಯದಲ್ಲಿ ಕುಂಭದ್ರೋಣ: ಕುಮಾರಧಾರ ಜಲ ಸಮಾಧಿ

ಸುಬ್ರಹ್ಮಣ್ಯ : ಎರಡು ಮೂರು ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದಾಗಿ ನೆರೆ ನೀರು ಏರುತ್ತಿದ್ದು ಕುಮಾರಧಾರಾ ಸೇತುವೆ ಮುಳುಗಡೆಯಾಗಿದೆ. ಸುಬ್ರಹ್ಮಣ್ಯಕ್ಕೆ ಸಂಪರ್ಕ ಕಲ್ಪಿಸುವ ಈ ಸೇತುವೆಯ ಜಲ ಸಮಾಧಿಯಿಂದಾಗಿ ವಾಹನ ಸಂಚಾರಕ್ಕೆ ಅಡ್ಡಿಯಾಗಿದ್ದು ನೆರ ನೀರು ಇನ್ನೂ ಹೆಚ್ಚುವ ಭೀತಿಯಿದೆ.

ಗುರುವಾರ ರಾತ್ರಿ ಆರಂಭಗೊಂಡ ಮಳೆ ಒಂದೇ ಸಮನೆ ಸುರಿಯುತ್ತಿದ್ದು ಹಳ್ಳ ಕೊಳ್ಳಗಳೆಲ್ಲ ತುಂಬಿ ಹರಿಯುತ್ತಿವೆ. ಘಟ್ಟದ ಮೇಲಿನ ನೀರು ಕೂಡ ಕುಮಾರಧಾರಾ ನದಿಗೆ ಸೇರುತ್ತಿದ್ದು , ಶುಕ್ರವಾರದ ಮಧ್ಯಾಹ್ನದ ವೇಳೆಗೇ ಸೇತುವೆ ನೀರಿನಲ್ಲಿ ಮುಳುಗಿಹೋಯಿತು. ಮುಂಜಾಗ್ರತಾ ಕ್ರಮವಾಗಿ ಸೇತುವೆಯ ಎರಡೂ ಕಡೆಗಳಲ್ಲಿ ಗೇಟ್‌ ಹಾಕಿ ಪೊಲೀಸರು ವಾಹನ ಹಾಗೂ ಜನ ಸಂಚಾರವನ್ನು ತಡೆದಿದ್ದಾರೆ.

ಸೇತುವೆ ಮುಳುಗಡೆಯಿಂದ ಮಂಗಳೂರು, ಉಪ್ಪಿನಂಗಡಿ, ಧರ್ಮಸ್ಥಳ ಹಾಗೂ ಬೆಂಗಳೂರು ಕಡೆಯ ವಾಹನಗಳು ಸುಬ್ರಹ್ಮಣ್ಯಕ್ಕೆ ಬರಲಾಗುತ್ತಿಲ್ಲ . ಪಂಜ ಮಾರ್ಗದಲ್ಲೂ ಸೇತುವೆ ಮೇಲೆ ನೀರು ಏರುತ್ತಲೇ ಇದೆ.

ಸುಬ್ರಹ್ಮಣ್ಯದಲ್ಲಿ ನೂರಾರು ಯಾತ್ರಿಕರು ಮಳೆಯಿಂದಾಗಿ ತೊಂದರೆಗೆ ಸಿಲುಕಿದ್ದು , ಶಾಲಾ ಕಾಲೇಜು ವಿದ್ಯಾರ್ಥಿಗಳೂ ತೊಂದರೆ ಅನುಭವಿಸುತ್ತಿದ್ದಾರೆ. ಈ ನಡುವೆ ಮಳೆ ಪ್ರಾರಂಭವಾದಾಗಿನಿಂದ ವಿದ್ಯುತ್‌ ನಾಪತ್ತೆಯಾಗಿದೆ.

ಮಳೆ ಮಳೆ ಮಳೆ
ಕರಾವಳಿಯ ಬೆಳ್ತಂಗಡಿ, ಧರ್ಮಸ್ಥಳ, ಉಜಿರೆ ಮುಂತಾದೆಡೆಯೂ ಭಾರೀ ಮಳೆ ಸುರಿಯುತ್ತಿದೆ. ಮಳೆಯಿಂದಾಗಿ ಕೆಲವೆಡೆ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+