ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಅಯೋಧ್ಯೆಯ ವಿವಾದಿತ ಪ್ರದೇಶದ ಸಮೀಪ ಪೂಜೆ ಕೂಡದು- ಕೋರ್ಟ್
ನವದೆಹಲಿ : ಅಯೋಧ್ಯೆಯ ವಿವಾದಿತ ಪ್ರದೇಶದ ಬಳಿಯಿರುವ ಜಾಗದಲ್ಲಿ ಯಾವುದೇ ಪೂಜಾ ಕಾರ್ಯಗಳನ್ನು ನಡೆಸಲು ಸುಪ್ರಿಂಕೋರ್ಟ್ ಅನುಮತಿಯನ್ನು ನಿರಾಕರಿಸಿದೆ.
ರಾಮಚಂದ್ರಾಪುರಂ ಹಳ್ಳಿಯ ಪ್ಲಾಟ್ ನಂ.159/160ಗೆ ಬರುವ ಸರ್ಕಾರದ ಅಧೀನದಲ್ಲಿರುವ 67.73 ಎಕರೆ ಪ್ರದೇಶದಲ್ಲಿ , ಯಾರಿಂದಲೂ, ಶಿಲಾ ಪೂಜೆ, ಶಿಲಾ ದಾನ ಮತ್ತು ಭೂಮಿ ಪೂಜೆ ಸೇರಿದಂತೆ ಯಾವುದೇ ಧಾರ್ಮಿಕ ಕಾರ್ಯಗಳನ್ನು ನಡೆಸಲು ಮುಂದಿನ ಕೋರ್ಟ್ ತೀರ್ಪು ಬರುವವರೆಗೆ ಅವಕಾಶ ನೀಡಬಾರದು ಎಂದು ಕೋರ್ಟ್ ನಿರ್ದೇಶಿಸಿದೆ.
ಕೋರ್ಟ್ ತೀರ್ಪನ್ನು ಪರಿಶೀಲಿಸುತ್ತಿರುವುದಾಗಿ ವಿಶ್ವ ಹಿಂದೂ ಪರಿಷತ್ ಹೇಳಿದೆ. ಈ ಮುನ್ನ ಕೇಂದ್ರ ಸರಕಾರವು ಅಯೋಧ್ಯೆಯಲ್ಲಿನ ವಿವಾದ ರಹಿತ ಜಾಗದಲ್ಲಿ ಸಾಂಕೇತಿಕ ಭೂಮಿ ಪೂಜೆ ಮಾಡಲು ತನ್ನ ಅಡ್ಡಿಯಿಲ್ಲ ಎಂದು ಸುಪ್ರಿಂ ಕೋರ್ಟ್ಗೆ ಹೇಳಿಕೆ ನೀಡಿತ್ತು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...
Comments
Story first published: Wednesday, March 13, 2002, 5:30 [IST]