ಏನು ಮಾಯವೋ ಏನು ಮರ್ಮವೋ.. ಎಣ್ಣೆ ಇಲ್ಲದೆಉರಿವ ಚಿಗಳ್ಳಿ ಲಾಟೀನು!
ಬೆಂಗಳೂರು : ಇಪ್ಪತ್ತು ವರುಷಗಳಿಂದ 3 ಲಾಟೀನುಗಳು ನಿರಂತರ ಉರಿಯುತ್ತಲೇ ಇವೆ; ಎಣ್ಣೆಯೇ ಇಲ್ಲದೆ ! ಉತ್ತರ ಕನ್ನಡ ಜಿಲ್ಲೆಯ ಮುಂದಗೋಡು ಬಳಿಯ ಚಿಗಳ್ಳಿ ಈಗ ಪ್ರವಾಸೀ ತಾಣವಾಗಿ ಬೆಳೆಯುತ್ತಿರುವುದು ಈ ಕಾರಣಕ್ಕೇ. ‘ಲಾಟೀನು ಪವಾಡ’ಕ್ಕೆ ಮನಸೋತಿರುವ ರಾಜ್ಯ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ಲಾಟೀನುಗಳಿರುವ ದೇವಸ್ಥಾನದ ಅಭಿವೃದ್ಧಿಗೆ ಸರ್ಕಾರದ ನೆರವು ಕೊಡುವುದಾಗಿಯೂ ಭರವಸೆ ಕೊಟ್ಟಿದ್ದಾರೆ.
ಒಂದೆಡೆ ಜನರು ಎಣ್ಣೆ ಕೇಳದೆ ಉರಿಯುವ ಲಾಟೀನುಗಳ ನೋಡಲು ಮುಗಿ ಬೀಳುತ್ತಿದ್ದರೆ, ದಕ್ಷಿಣ ಕನ್ನಡದಲ್ಲಿ ವಿಚಾರವಾದಿಗಳ ಸಂಘ ಲಾಟೀನುಗಳನ್ನು ಮುಂದಿಟ್ಟುಕೊಂಡು ಸಂಶೋಧನೆಗೆ ತೊಡಗಿದೆ. ಸಂಘದ ಕಾರ್ಯದರ್ಶಿ ನರೇಂದ್ರ ನಾಯಕ್ ಇದರ ಮುಂದಾಳು.
ಯಾವುದೇ ಪವಾಡ ಬಯಲಾದ ಮರು ದಿನವೇ ಮಾಧ್ಯಮಗಳ ಕದ ತಟ್ಟಿ, ಹುಬ್ಬೇರಿಸಿ, ಸವಾಲೆಸೆಯುವ ನರೇಂದ್ರ ನಾಯಕ್ ಕಳೆದ ಒಂದು ತಿಂಗಳಿಂದ ಸದ್ದು ಮಾಡುತ್ತಿರುವ ಎಣ್ಣೆ ರಹಿತ ಲಾಟೀನುಗಳ ಬೆನ್ನಿಗೆ ಬಿದ್ದಿದ್ದಾರೆ. ಅವರ ವಾದವೇನಿದ್ದರೂ ವೈಜ್ಞಾನಿಕ ನೆಲೆಗಟ್ಟಿನಲ್ಲೇ.
ಲಾಟೀನನ್ನು ಉರಿಸುತ್ತಲೇ ನರೇಂದ್ರ ಹೇಳುತ್ತಾರೆ- ಯಾವುದೇ ಲಾಟೀನಾಗಲಿ ಎಣ್ಣೆ ತುಂಬಿಸಿದ ನಂತರ 48 ತಾಸು ಉರಿಯುತ್ತದೆ. ಭಕ್ತರು ಎಣ್ಣೆ ಇಲ್ಲದ ಲಾಟೀನುಗಳನ್ನು ನೋಡಿ, ಅಬ್ಬಾ ಎಂದು ಮನೆಗೆ ಹೋಗುತ್ತಾರೆ. ಆದರೆ ಅದರೊಳಗೆ ಎಣ್ಣೆ ಇದೆಯೋ ಇಲ್ಲವೋ ಅಂತ ಪರೀಕ್ಷಿಸುವ ಗೊಡವೆಗೆ ಹೋಗುವುದಿಲ್ಲ. ದೇವಸ್ಥಾನದ ಬಾಗಿಲು ಮುಚ್ಚಿದ ನಂತರ ಯಾರಾದರೂ ಎಣ್ಣೆ ತುಂಬಿಸಬಹುದಲ್ಲವೇ? ಇದೆಂಥ ಪವಾಡ? ಮಿನಿಸ್ಟರೂ ಇದನ್ನು ನಂಬುವರೆಂದರೆ ಎಂಥಾ ದುರಂತ. ಮೂರು ಲಾಟೀನುಗಳಲ್ಲಿ ಸರ್ಕಾರ ಒಂದನ್ನು ಪರೀಕ್ಷೆ ಮಾಡಲು ಕೊಡಲಿ. ಅಸಲಿಯತ್ತು ಬಯಲಾಗುತ್ತದೆ. ಖುದ್ದು ಹೋಗಿ, ದೇವಸ್ಥಾನದವರನ್ನು ಲಾಟೀನು ಕೊಡಿ ಅಂತ ಕೇಳಿದರೆ, ಅದಕ್ಕೆ ದೇವರ ಅಪ್ಪಣೆಯಿಲ್ಲ ಅನ್ನುತ್ತಾರೆ. ಇದು ಹುಂಬತನದ ಪರಮಾವಧಿ !
ಇದೇ ದಿನ ಶಿಕ್ಷಣ ತಜ್ಞ ಎಚ್.ನರಸಿಂಹಯ್ಯ, ‘ಪವಾಡಗಳನ್ನು ನಂಬದಿರಿ. ಶೂನ್ಯದಲ್ಲೇ ಏನನ್ನೋ ಸೃಷ್ಟಿಸುವುದು ಅವೈಜ್ಞಾನಿಕವಷ್ಟೇ ಅಲ್ಲ, ಅಕ್ಷರಶಃ ಅಸಾಧ್ಯ. ಅಂಥಾದರಲ್ಲಿ ಪುಟ್ಟಪರ್ತಿ ಸಾಯಿಬಾಬ ಅಂಥವರು ಏನೇನೋ ಪವಾಡ ಮಾಡುತ್ತಾರೆ ಅಂತ ಜನ ಹೇಳುತ್ತಾರೆ. ನನ್ನೆದುರಿಗೆ ಬಂದು ಅಂತದ್ದೇನನ್ನಾದರೂ ಯಾಕೆ ತೋರಿಸಬಾರದು?’ ಎಂದು ಸವಾಲೆಸೆದಿದ್ದಾರೆ.
ನರೇಂದ್ರ ನಾಯಕ್ ವಾದವನ್ನು ನೀವು ಅನುಮೋದಿಸುವಿರಾ? ನೀವೇನಾದರೂ ಇಂಥಾ ಪವಾಡಗಳನ್ನು ಕಂಡಿದ್ದೀರಾ? ತಕ್ಷಣ ಬರೆಯಿರಿ.
(ಇನ್ಫೋ ವಾರ್ತೆ)
ಮುಖಪುಟ / ಲೋಕೋಭಿನ್ನರುಚಿ
-
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Asha Bosle Net Worth: ದೇಶ-ವಿದೇಶಗಳಲ್ಲಿ ರೆಸ್ಟೊರೆಂಟ್ಸ್, ನೂರಾರು ಕೋಟಿ ಒಡತಿ ಆಶಾ ಭೋಸ್ಲೆ ಒಟ್ಟು ಆಸ್ತಿ ವಿವರ ಹೀಗಿದೆ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ












Click it and Unblock the Notifications