ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಉಡುಪಿಯಲ್ಲಿ ಪ್ರೇಮಿಗಳ ದಿನಾಚರಣೆಗೆ ಭಜರಂಗ ದಳದ ಅಪಸ್ವರ
ಉಡುಪಿ : ಭಾರತ ದೇಶದ ಸಂಸ್ಕೃತಿ- ಪರಂಪರೆಗೆ ವ್ಯಾಲೆಂಟೈನ್ಸ್ ಡೇ ಪರಿಕಲ್ಪನೆ ವಿರುದ್ಧವಾಗಿರುವುದರಿಂದ, ಈ ಆಚರಣೆಯನ್ನು ಕೈ ಬಿಡುವಂತೆ ಜಿಲ್ಲೆಯ ಎಲ್ಲ ಶಾಲಾ- ಕಾಲೇಜುಗಳ ಆಡಳಿತ ಮಂಡಳಿಗಳಿಗೆ ಭಜರಂಗ ದಳ ಮನವಿ ಮಾಡಿದೆ.
ವ್ಯಾಲೆಂಟೈನ್ ಎಂದರೆ ಯಾರು? ಆತನ ಇತಿಹಾಸ ಏನು? ಎಂಬುದನ್ನು ಅರಿಯದ ಮುಗ್ಧ ಯುವ ಜನತೆಯನ್ನು ಪ್ರೇಮಿಗಳ ದಿನ ಆಚರಣೆಯ ಹೆಸರಿನಲ್ಲಿ ದಾರಿ ತಪ್ಪಿಸಲಾಗುತ್ತಿದೆ. ಇಂಥ ಆಚರಣೆಗಳ ವಿರುದ್ಧ ಭಜರಂಗ ದಳ ಹೋರಾಡುತ್ತದೆ ಎಂದು ದಳದ ಜಿಲ್ಲಾ ಸಂಚಾಲಕ ರಾಧಾಕೃಷ್ಣ ತಿಳಿಸಿದ್ದಾರೆ.
ಮುಂಬಯಿಯಲ್ಲಿ ಶಿವ ಸೈನಿಕರ ವಿರೋಧ
ಪ್ರೇಮಿಗಳ ದಿನ ಆಚರಣೆಗೆ ಪ್ರತಿ ವರ್ಷದಂತೆ ಈ ವರ್ಷವೂ ಶಿವಸೇನಾ ಮುಖ್ಯಸ್ಥ ಬಾಳಾ ಠಾಕ್ರೆ ತಮ್ಮ ಕಡು ವಿರೋಧ ವ್ಯಕ್ತಪಡಿಸಿದ್ದಾರೆ. ಪ್ರೀತಿಯ ಬಗ್ಗೆ ವಿದೇಶಿಯರಿಂದ ಭಾರತೀಯರು ಏನನ್ನೂ ಕಲಿಯಬೇಕಿಲ್ಲ . ನಮ್ಮ ಸಂಸ್ಕೃತಿಗೆ ಈ ಆಚರಣೆ ಅಗತ್ಯವೂ ಇಲ್ಲ ಎಂದು ಠಾಕ್ರೆ ಗುಡುಗಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
Story first published: Monday, February 11, 2002, 5:30 [IST]