ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದ 10 ಪೊಲೀಸ್‌ ಅಧಿಕಾರಿಗಳಿಗೆ ರಾಷ್ಟ್ರಪತಿಗಳಪೊಲೀಸ್‌ ಪದಕ

By Staff
|
Google Oneindia Kannada News

ಬೆಂಗಳೂರು: ಭಾರತೀಯ ವಿಮಾನ ನಿಲ್ದಾಣ ಪ್ರಾಧಿ ಕಾರದ ಮುಖ್ಯ ಜಾಗೃತ ಅಧಿಕಾರಿ ಹಾಗೂ ಹೆಚ್ಚುವರಿ ಡಿಜಿಪಿ ಜೀಜಾ ಎಸ್‌.ಹರಿಸಿಂಗ್‌ ಅವರು ಅತ್ಯುತ್ತಮ ಸೇವೆಗಾಗಿ ನೀಡಲಾಗುವ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪೊಲೀಸ್‌ ಪದಕ ಗೌರವಕ್ಕೆ ಪಾತ್ರರಾಗಿದ್ದಾರೆ.

ಇದೇ ಸಂದರ್ಭದಲ್ಲಿ ರಾಜ್ಯದ ಇತರ 10 ಮಂದಿ ಪೊಲೀಸ್‌ ಅಧಿಕಾರಿಗಳು ರಾಷ್ಟ್ರಪತಿಗಳ ವಿಶಿಷ್ಟ ಮತ್ತು ಶ್ಲಾಘನೀಯ ಸೇವಾ ಪೊಲೀಸ್‌ ಪದಕ ಗೌರವ ಪಡೆದಿದ್ದಾರೆ. ಗಣರಾಜ್ಯೋತ್ಸವ ಸಂದರ್ಭದಲ್ಲಿ ನೀಡಲಾಗುವ ಈ ಪೊಲೀಸ್‌ ಪದಕಗಳನ್ನು ಶುಕ್ರವಾರ ಪ್ರಕಟಿಸಲಾಯಿತು.

ಪೊಲೀಸ್‌ ಪದಕ ವಿಜೇತರು :

ಐಜಿಪಿ ಸಿ.ಮೋತಿರಾಂ, ಡಿಐಜಿ (ಸಿಓಡಿ) ಎಂ.ಆರ್‌.ಪೂಜಾರ್‌, ರಾಜ್ಯ ವೈರ್‌ಲೆಸ್‌ ವಿಭಾಗದ ಎಸ್‌ಪಿ ಟಿ.ಆರ್‌.ನಾಯಕ್‌, ಸಹಾಯಕ ಕಮಾಂಡೆಂಟ್‌ ಎನ್‌.ಜಗದೀಶ್‌, ಬಾಗಲ ಕೋಟೆ ಡಿವೈಎಸ್‌ಪಿ ಯು.ಆರ್‌. ಪಂಗಮ್‌, ಕೆಎಸ್‌ಆರ್‌ಪಿ ಸಹಾಯಕ ಕಮಾಂಡೆಂಟ್‌ ಎಫ್‌.ಬಿ.ರೇವಣ್ಣನವರ್‌, ಕೆಎಸ್‌ಆರ್‌ಪಿ ಸಹಾಯಕ ಕಮಾಂಡೆಂಟ್‌ ವಿ.ಎಸ್‌.ನಾಯಕ್‌, ಮೈಸೂರು ಡಿವೈ ಎಸ್‌ಪಿ ಬಿ.ಬಿ.ಹೇರಾಜೆ ಮತ್ತು ದಾವಣಗೆರೆ ಗ್ರಾಮಾಂತರ ಡಿವೈಎಸ್‌ಪಿ ಸಿ.ಕೆ.ಬಸವರಾಜಪ್ಪ .

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X