ಬೆಂಗಳೂರಿನ ಕಲಾವಿದ ದೇವರಾಜ್ಗೆ ಕೇಜರಿವಾಲ್ ಪ್ರಶಸ್ತಿ
ಬೆಂಗಳೂರು : ಬೆಂಗಳೂರಿನ ದೇವರಾಜ್ ಸೇರಿದಂತೆ 6 ಕಲೆಗಾರರು ಈ ಬಾರಿಯ ಎಚ್.ಕೆ.ಕೇಜರಿವಾಲ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕರ್ನಾಟಕ ಚಿತ್ರಕಲಾ ಪರಿಷತ್ತು ಪ್ರಕಟಣೆ ಈ ವಿಷಯ ತಿಳಿಸಿದೆ. ಚಿತ್ರಕಲೆ ವಿಭಾಗದಲ್ಲಿ ದೇವರಾಜ್ ಜೊತೆಗೆ ಪ್ರಶಸ್ತಿಗೆ ಆಯ್ಕೆಯಾಗಿರುವ ಇತರರೆಂದರೆ, ರಾಜಶ್ರೀ ಬಿಸ್ವಾಸ್ (ಕೋಲ್ಕತ್ತ) ಮತ್ತು ರುಚಿಕಾ ಸಿಂಗ್ (ದೆಹಲಿ). ಶಿಲ್ಪಕಲೆ ವಿಭಾಗ : ದೇವಿದಾಸ್ (ಜಮ್ಮು ಮತ್ತು ಕಾಶ್ಮೀರ) ಮತ್ತು ಅದಿಪ್ ದತ್ತಾ (ಕೋಲ್ಕತ್ತ). ಗ್ರಾಫಿಕ್ ಕಲೆ- ಓಲಿ ಘೋಷ್ (ಕೋಲ್ಕತ್ತ).
ಶಿಲ್ಪಕಲೆ ಮತ್ತು ಚಿತ್ರಕಲೆ ಪ್ರಶಸ್ತಿಯು ತಲಾ 25 ಸಾವಿರ ರು ಹಾಗೂ ಗ್ರಾಫಿಕ್ ಕಲಾ ಪ್ರಶಸ್ತಿಯು 20 ಸಾವಿರ ರುಪಾಯಿ ನಗದನ್ನು ಒಲಗೊಂಡಿದೆ. ಈ ತಿಂಗಳ ಕೊನೆಯ ವಾರದಲ್ಲಿ ಚಿತ್ರಕಲಾ ಪರಿಷತ್ತಿನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು ಎಂದು ಪರಿಷತ್ತಿನ ಪ್ರಧಾನ ಕಾಯಂದರ್ಶಿ ನಂಜುಂಡರಾವ್ ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
ಅಹಿಂದ್ ಬಗ್ಗೆ ನಿಮಗೇನನಿಸುತ್ತೆ ?
ಮುಖಪುಟ / ಇವತ್ತು... ಈ ಹೊತ್ತು...