ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಪಾವಗಡದ ಮಣ್ಣಿನಡಿಯಲ್ಲಿ ಮಿರುಗುಟ್ಟುವ ವಜ್ರ ನಿಕ್ಷೇಪಗಳು !
ತುಮಕೂರು : ಇಲ್ಲಿನ ಪಾವಗಡದಲ್ಲಿ ವಜ್ರದ ನಿಕ್ಷೇಪ ಇರುವುದನ್ನು ಭಾರತೀಯ ಭೂ ವಿಜ್ಞಾನ ಸರ್ವೇಕ್ಷಣಾಲಯ ಪತ್ತೆ ಹಚ್ಚಿದೆ.
ಈ ವಿಷಯವನ್ನು ಬುಧವಾರದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ ಕಲ್ಲಿದ್ದಲು ಮತ್ತು ಗಣಿ ಖಾತೆ ರಾಜ್ಯ ಸಚಿವ ರವಿಶಂಕರ್ ಪ್ರಸಾದ್ ಪಾವಗಡದ ಕೆಲವು ಪ್ರದೇಶಗಳಿಂದ 32 ನಮೂನೆಯ ವಜ್ರ ಮಾದರಿಯನ್ನು ಸಂಗ್ರಹಿಸಲಾಗಿದೆ ಎಂದು ಹೇಳಿದರು.
ಗುಲ್ಬರ್ಗಾ ಮತ್ತು ರಾಯಚೂರಿನಲ್ಲಿಯೂ ವಜ್ರ ನಿಕ್ಷೇಪಗಳ ಸುಳಿವು ಸಿಕ್ಕಿದೆ. ರಾಜ್ಯದಲ್ಲಿ ಒಟ್ಟು 48 ಕಡೆ ವಿವಿಧ ಲೋಹಗಳ ಗಣಿಗಾರಿಕೆ ನಡೆಸುವುದಕ್ಕೆ ಅವಕಾಶ ಇರುವುದಾಗಿ ತಿಳಿದುಬಂದಿದೆ. ಕೋಲಾರದಲ್ಲಿಯೂ ಲೋಹದ ನಿಕ್ಷೇಪಗಳಿರುವುದು ವರದಿಯಾಗಿದೆ ಎಂದ ಸಚಿವರು, ಇದೇ ಸಂದರ್ಭದಲ್ಲಿ ಭಾರತ್ ಗೋಲ್ಡ್ ಮೈನ್ಸ್ ಮುಚ್ಚುವ ಹಂತದಲ್ಲಿದೆ ಎಂಬ ವಿಷಯವನ್ನು ಒಪ್ಪಿಕೊಂಡರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
Comments
Story first published: Thursday, November 29, 2001, 5:30 [IST]