ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬೆಳಗಾವಿಯ ಮಾಜಿ ಸಚಿವ ಎ.ಬಿ. ಜಕನೂರು ನಿಧನ
ಬೆಳಗಾವಿ : ರಾಜ್ಯದ ಮಾಜಿ ಸಚಿವ ಎ. ಬಿ. ಜಕನೂರು ಬುಧವಾರ ಪುಣೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 73 ವರ್ಷ ವಯಸ್ಸಾಗಿತ್ತು.
ಮಂಗಳವಾರ ಹೃದಯಾಘಾತ ಸಂಭವಿಸಿದ ನಂತರ ಅವರನ್ನು ಚಿಕಿತ್ಸೆಗಾಗಿ ಪುಣೆಯ ಆಸ್ಪತ್ರೆಗೆ ಸೇರಿಸಲಾಗಿತ್ತು. ಶಿರಹಟ್ಟಿ ಮೂಲದ ಅಣ್ಣಾರಾಯ ಬಾಳಪ್ಪ ಜಕನೂರು, ಎರಡು ಬಾರಿ ಕಾಗವಾಡ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.
1978-82ರ ಆರ್. ಗುಂಡೂರಾವ್ ಮಂತ್ರಿಮಂಡಲದಲ್ಲಿ ಮಾರುಕಟ್ಟೆ, ಬಂಧೀಖಾನೆ ಮತ್ತು ಕಾರ್ಮಿಕ ಖಾತೆಯ ರಾಜ್ಯ ಸಚಿವರಾಗಿದ್ದ ಜನಕನೂರು, ಡಿಸಿಸಿ ಬ್ಯಾಂಕ್ ಮತ್ತು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾಗಿಯೂ ದುಡಿದಿದ್ದರು. ಪಕ್ಷ ವಿರೋಧೀ ಚಟುವಟಿಕೆಯ ಆರೋಪದ ಮೇಲೆ ಇತ್ತೀಚೆಗೆ ಅವರನ್ನು ಕಾಂಗ್ರೆಸ್ನ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷಗಳ ಕಾಲ ಉಚ್ಚಾಟಿಸಲಾಗಿತ್ತು.
(ಇನ್ಫೋ ವಾರ್ತೆ)
Comments
Story first published: Thursday, July 12, 2001, 5:30 [IST]