Get Updates
Get notified of breaking news, exclusive insights, and must-see stories!

ಹೇಮಾವತಿ ರಾಜಕೀಯಕ್ಕಾಗಿ ಮಾತ್ರ - ಬಿ. ಸತ್ಯನಾರಾಯಣ

* ಚ.ಹ. ರಘುನಾಥ

ಗಾಯತ್ರಿ ಜಲಾಶಯದಿಂದ ಶಿರಾಕ್ಕೆ ನೀರನ್ನು ತರುವ ಹೋರಾಟ ರಾಜಕೀಯದ್ದಲ್ಲ , ಋಣದ ಹೋರಾಟ ಎನ್ನುತ್ತಾರೆ ಮಾಜಿ ಸಚಿವ ಬಿ. ಸತ್ಯನಾರಾಯಣ . ಸಣ್ಣ ಸತ್ತಿ ಎಂದೇ ಪರಿಚಿತರ ವಲಯದಲ್ಲಿ ಗುರ್ತಿಸಿಕೊಳ್ಳುವ ಅವರು, ಸಚಿವರಾಗಿದ್ದ ಕಾಲದಲ್ಲಿ ಶಿರಾ ಹಿಂದೆಂದೂ ಕಾಣದಷ್ಟು ವೇಗವಾಗಿ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯಿತು. ಆ ಯೋಜನೆಗಳು ಪೂರ್ಣಗೊಳ್ಳುವ ಮುನ್ನವೇ, ಸತ್ಯನಾರಾಯಣ ಅವರ ಅಧಿಕಾರಾವಧಿ ಮುಗಿಯಿತು. ಜನ, ಮತ್ತೆ ಅವರಲ್ಲಿ ವಿಶ್ವಾಸ ತೋರಲಿಲ್ಲ .

ಸೋಲು ತಮ್ಮನ್ನು ಕುಗ್ಗಿಸಿಲ್ಲ ಎಂದು ತೋರಿಸಿಕೊಳ್ಳುವ ಸಲುವಾಗಿಯೋ ಎಂಬಂತೆ, ಸತ್ಯನಾರಾಯಣ ಈಗ ತೋಟದ ಮನೆಯಿಂದ ಹೊರಗೆ ಬಂದಿದ್ದಾರೆ. ಗಾಯತ್ರಿ ಜಲಾಶಯದಿಂದ ಶಿರಾ ಜನತೆಗೆ ಕುಡಿಯಲು ನೀರು ತರುವ, ತಮ್ಮ ರಾಜಕೀಯ ಹೋರಾಟದ ಮಹತ್ವಾಕಾಂಕ್ಷೆಯ ಕೂಸನ್ನು ಮತ್ತೆ ಎತ್ತಿಕೊಂಡಿದ್ದಾರೆ. ಧರಣಿ, ಉಪವಾಸ ಸತ್ಯಾಗ್ರಹ, ಸುದ್ದಿಹೇಳಿಕೆಗಳ ಮೂಲಕ ಸಕ್ರಿಯ ರಾಜಕೀಯಕ್ಕಿಳಿದಿದ್ದಾರೆ. ಅವರನ್ನು ಮಾತನಾಡಿಸಿದ್ದು ಈ ಹಿನ್ನೆಲೆಯಲ್ಲಿ .

  • ಗಾಯತ್ರಿ ಕಾಮಗಾರಿ ಮುಂದುವರಿಸುವಂತೆ ಆಗ್ರಹಿಸಿ ನಡೆಸುತ್ತಿದ್ದ ಧರಣಿಯನ್ನು ಕೈ ಬಿಟ್ಟದ್ದು ಯಾಕೆ ? ಇದರಿಂದಾಗಿ, ಇಷ್ಟೂ ದಿನ ನೆಚ್ಚಿಕೊಂಡಿದ್ದ ನಿಲುವಿನಿಂದ ಹಿಂದೆ ಸರಿದಂತಾಗಲಿಲ್ಲವೇ?
ಉತ್ತರ - ಧರಣಿಯನ್ನ ನಿಲ್ಲಿಸಿದ್ದೇನೆ ಅಂದಮಾತ್ರಕ್ಕೆ ಹೋರಾಟವನ್ನ ಕೈಬಿಟ್ಟಿದ್ದೇನೆ ಎಂದರ್ಥವಲ್ಲ . ಇಷ್ಟಕ್ಕೂ ನನ್ನ ಹಂಬಲ ಶಿರಾ ಜನತೆಯ ಕುಡಿಯುವ ನೀರಿನ ಬವಣೆ ಕೊನೆಯಾಗಬೇಕೆಂಬುದು ಮಾತ್ರ. ಅದಕ್ಕಾಗಿ ನೀರು ಹೇಮಾವತಿಯಿಂದ ಬಂದರೂ ಸರಿಯೇ, ಗಾಯತ್ರಿಯಿಂದ ಬಂದರೂ ಸರಿಯೇ, ಸ್ವಾಗತಾರ್ಹ . ಮುಖ್ಯಮಂತ್ರಿಗಳು ಹೇಮಾವತಿ ಯೋಜನೆ ಜಾರಿಗೊಳಿಸುವುದಾಗಿ ಹೇಳಿದ್ದಾರೆ. ಅದರಿಂದಾಗಿ ಧರಣಿಯನ್ನು ವಾಪಸ್ಸು ಪಡೆದಿದ್ದೇನೆ. ಹೇಮಾವತಿ ಬರುವುದಾದರೆ, ತಾಲ್ಲೂಕಿನಲ್ಲಿ ಅಂತರ್ಜಲ ಮಟ್ಟ ಹೆಚ್ಚುತ್ತದೆ. ಸ್ವಲ್ಪ ಮಟ್ಟಿಗಿನ ಭೂಮಿಯೂ ಜಲಾನಯನ ಪ್ರದೇಶವಾಗುತ್ತದೆ. ಈ ಅನುಕೂಲಗಳಿಂದಾಗಿ, ಓರ್ವ ಜನ ಪ್ರತಿನಿಧಿಯಾಗಿ ನಾನು ಹೇಮಾವತಿಯನ್ನು ವಿರೋಧಿಸಲು ಸಾಧ್ಯವಿಲ್ಲ .

  • ಹೇಮಾವತಿ ಕಾರ್ಯ ಸಾಧ್ಯ ಎಂದು ನಂಬುತ್ತೀರಾ ? ಶಿರಾಕ್ಕೆ ಹೇಮಾವತಿ ಬರುತ್ತಾಳಾ ?
ಉ- ಹೇಮಾವತಿ ಕನಸಿನ ಮಾತು . ಹೇಮಾವತಿ ರಾಜಕೀಯಕ್ಕಾಗಿ ಮಾತ್ರ, ಕುಡಿಯಲಿಕ್ಕೆ ಅಲ್ಲ .

  • ಗಾಯತ್ರಿ ಹೋರಾಟದಲ್ಲಿ ನಿರೀಕ್ಷಿತ ಜನ ಬೆಂಬಲ ನಿಮಗೆ ಯಾಕೆ ಸಿಗಲಿಲ್ಲ ?
ಉ - ಮುಖ್ಯವಾಗಿ, ಕ್ಷೇತ್ರದ ಶಾಸಕರ ಬೆಂಬಲ ನನಗೆ ದೊರಕಲಿಲ್ಲ . ಅವರಿಗೆ ಇದರಲ್ಲೆಲ್ಲಾ ಆಸಕ್ತಿಯಿಲ್ಲ . ಜನತೆಯನ್ನು ಕೆಲವು ರಾಜಕಾರಣಿಗಳು ಹಾದಿ ತಪ್ಪಿಸುತ್ತಿದ್ದಾರೆ. ಜೊತೆಗೆ, ಅಧಿಕಾರಸ್ಥರೊಂದಿಗೆ ನಿಷ್ಠೂರ ಕಟ್ಟಿಕೊಳ್ಳಲು ಯಾರಿಗೆ ಮನಸ್ಸಿರುತ್ತದೆ.

  • ಗಾಯತ್ರಿ ವೈಫಲ್ಯದಲ್ಲಿ ರಾಜಕಾರಣದ ಪಾತ್ರ ಎಷ್ಟು ?
ಉ - ಯೋಜನೆಯನ್ನು ಯಾವ ಶಕ್ತಿಗಳು ತಡೆಯುತ್ತಿವೆ ಅನ್ನೋದು ಎಲ್ಲರಿಗೂ ಗೊತ್ತು . ಅರಣ್ಯ ಮಂತ್ರಿ ಕೆ.ಎಚ್‌. ರಂಗನಾಥ್‌, ಹಿರಿಯೂರು ರೈತರ ಹಿತರಕ್ಷಕ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಕೃಷಿ ಮಂತ್ರಿ ಜಯಚಂದ್ರ ಹೇಮಾವತಿಯ ಯಶಸ್ಸು ಪಡೆಯಲು ಹೊರಟಿದ್ದಾರೆ. ಆದರೆ, ಅವರಿಬ್ಬರೂ ಜನತೆಗೆ ಸುಳ್ಳು ಹೇಳುತ್ತಿದ್ದಾರೆ.

  • ಹೇಮಾವತಿ ನೀರು ಶಿರಾಕ್ಕೆ ಬಂದರೆ, ನಿಮ್ಮ ಈವರೆಗಿನ ಹೋರಾಟ ವ್ಯರ್ಥ ಅನ್ನಿಸೊಲ್ಲವೆ ? ಜಯಚಂದ್ರರ ಯಶಸ್ಸು ನಿಮ್ಮನ್ನು ರಾಜಕೀಯವಾಗಿ ಅಪ್ರಸ್ತುತರನ್ನಾಗಿಸುವುದಿಲ್ಲವೇ ?
ಉ- ಇಲ್ಲ . ಹೇಮಾವತಿ ಶಿರಾಕ್ಕೆ ಬರುವುದು ತಾಂತ್ರಿಕವಾಗಿ ಅಸಾಧ್ಯ. ಇದು ಜಯಚಂದ್ರರಿಗೂ ಗೊತ್ತು . ಮೊದಲು ಕಳ್ಳಂಬೆಳ್ಳ ಕೆರೆಗೆ ತಂದು, ಅಲ್ಲಿಂದ ಶಿರಾ ಕೆರೆಗೆ ತುಂಬಿಸಿಕೊಂಡು ಪಂಪ್‌ ಮಾಡುವ ವಿಷಯ ಸುಲಭದಲ್ಲ . ಈ ಯೋಜನೆಗೆ ಅಂದಾಜು 40 ಕೋಟಿ ರುಪಾಯಿ ಖರ್ಚಾಗುತ್ತದೆ. ಗಾಯತ್ರಿ ಯೋಜನೆಯ ಮೊತ್ತ 14 ಕೋಟಿ ಮಾತ್ರ. ಜನಕ್ಕೆ ಇದೆಲ್ಲಾ ಅರ್ಥವಾಗುತ್ತೆ . ತಮ್ಮ ಮಾತಿನಂತೆ ಹೇಮಾವತಿ ವಿಷಯದಲ್ಲಿ ಜಯಚಂದ್ರ ಯಶಸ್ವಿಯಾದರೆ, ಅವರ ಫೋಟೋವನ್ನ ಮನೇಲಿಟ್ಟುಕೊಂಡು ಪೂಜೆ ಮಾಡ್ತೀನಿ.

  • ಮಂತ್ರಿಯಾಗಿದ್ದಾಗ ನೀವು ಶಿರಾ ಕ್ಷೇತ್ರಕ್ಕಾಗಿ ಹಮ್ಮಿಕೊಂಡಿದ್ದ ಯೋಜನೆಗಳು ಈಗ ಯಾವ ಹಂತದಲ್ಲಿವೆ ?
ಉ - ಅವು ಯಾವ ಹಂತದಲ್ಲಿದ್ದವೋ ಅಲ್ಲಿಯೇ ಇವೆ.

  • ಹೇಮಾವತಿ ಶಿರಾಕ್ಕೆ ಬರದಿದ್ದರೆ, ಮುಂದೆ ಏನು ಮಾಡುತ್ತೀರಿ ?
ಉ- ಹೇಮಾವತಿ ಕಾಮಗಾರಿ ಆರಂಭಗೊಳಿಸಲು 3 ತಿಂಗಳು ಗಡುವು ನೀಡಿದ್ದೇನೆ. ಪ್ರಗತಿ ಕಾಣದಿದ್ದಲ್ಲಿ ಮತ್ತೆ ಹೋರಾಟ ಅನಿವಾರ್ಯ.

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+