ಟಾಸ್ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್, ಲಂಚ್ ಸ್ಕೋರ್ 140 ಕ್ಕೆ 2
ಚೆನ್ನೈ: ಭಾನುವಾರ ಇಲ್ಲಿನ ಎಂ. ಎ. ಚಿದಂಬರಂ ಕ್ರೀಡಾಂಗಣದಲ್ಲಿ ಆರಂಭವಾದ ಮೂರನೇ ಹಾಗೂ ಅಂತಿಮ ಕ್ರಿಕೆಟ್ ಟೆಸ್ಟ್ ಪಂದ್ಯ ಗೆಲ್ಲುವ ಮೂಲಕ ಸರಣಿಯನ್ನು ತಮ್ಮದಾಗಿಸಿಕೊಳ್ಳಲು ಆಸ್ಟ್ರೇಲಿಯಾ ಹಾಗೂ ಭಾರತ ತಂಡಗಳೆರಡೂ ಹಣಾಹಣಿ ಹೋರಾಟ ನಡೆಸಿವೆ.
ಸತತ 16 ಟೆಸ್ಟ್ ಗೆಲುವುಗಳ ನಂತರ ಭಾರತ ವಿರುದ್ಧ ಕೋಲ್ಕತ್ತಾ ಟೆಸ್ಟ್ನಲ್ಲಿ ಸೋಲುಂಡ ಆಸ್ಟ್ರೇಲಿಯಾ ಭಾರತ ವಿರುದ್ಧ ಸೇಡು ತೀರಿಸಿಕೊಳ್ಳುವ ಛಲದಲ್ಲಿದ್ದರೆ, ಸತತ 16 ಟೆಸ್ಟ್ ಗೆದ್ದಿದ್ದ ಬಲಿಷ್ಠ ತಂಡವನ್ನು 171ರನ್ಗಳಿಂದ ಮಣಿಸಿ, ಉತ್ಸಾಹದಿಂದ ಬೀಗುತ್ತಿರುವ ಭಾರತ ತಂಡ ಈ ಟೆಸ್ಟ್ ಅನ್ನೂ ಗೆದ್ದು ಸರಣಿ ತನ್ನದಾಗಿಸಿಕೊಳ್ಳುವ ಮಹದಾಸೆ ಹೊಂದಿದೆ.
ಭಾನುವಾರ ಬೆಳಗ್ಗೆ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಮೊದಲ ದಿನ ಬ್ಯಾಟಿಂಗ್ಗೆ ಸಹಕಾರಿ ಆಗಿರುವ ಪಿಚ್ನಲ್ಲಿ ಸಾಕಷ್ಟು ರನ್ ಪೇರಿಸಿ ಭಾರತದ ಮೇಲೆ ಒತ್ತಡ ಹೇರುವ ಅವರ ತಂತ್ರ ಬಹುತೇಕ ಫಲಿಸಿದಂತೆಯೇ ಆಗಿದೆ. ಮೊದಲ ದಿನವಾದ ಭಾನುವಾರ ಲಂಚ್ ವಿರಾಮಕ್ಕೆ ಆಸ್ಟ್ರೇಲಿಯಾ 2 ವಿಕೆಟ್ ಕಳೆದುಕೊಂಡು 140ರನ್ ಗಳಿಸಿತ್ತು. 59ರನ್ ಗಳಿಸಿರುವ ಹೆಡೆನ್ ಹಾಗೂ 25ರನ್ ಮಾಡಿರುವ ಮಾರ್ಕ್ ವಾ ಆಟವಾಡುತ್ತಿದ್ದಾರೆ.
ಭಾರತದ ವೇಗದ ಬೌಲರ್ ಜಡ್. ಖಾನ್ ಆಸ್ಟ್ರೇಲಿಯಾಕ್ಕೆ ಆರಂಭದಲ್ಲೇ ಆಘಾತ ನೀಡಿದರು. ಆಸ್ಟ್ರೇಲಿಯಾದ ಆರಂಭ ಆಟಗಾರ ಸ್ಲೇಟರ್ ಪಂದ್ಯದ ಮೊದಲ ಓವರ್ನಲ್ಲೇ ಜಾಹೀರ್ ಖಾನ್ ಬೌಲಿಂಗ್ನಲ್ಲಿ ಲಕ್ಷ್ಮಣ್ಗೆ ಕ್ಯಾಚಿತ್ತು ನಿರ್ಗಮಿಸಿದರು. ಆನಂತರ ಡ್ರಿಂಕ್ಸ್ ವಿರಾಮಕ್ಕೆ ಸ್ವಲ್ಪ ಮೊದಲು ಜಸ್ಟಿನ್ ಲಾಂಗರ್ (35) ಹರ್ಭಜನ್ ಸಿಂಗ್ ಬೌಲಿಂಗ್ನಲ್ಲಿ ರಾಹುಲ್ ಡ್ರಾವಿಡ್ಗೆ ಕ್ಯಾಚಿತ್ತು ಪೆವಿಲಿಯನ್ಗೆ ಮರಳಿದರು.
ಭಾರತಕ್ಕೂ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸುವ ಅವಕಾಶ ವಿತ್ತಾದರೂ ಎರಡು ಉತ್ತಮ ಅವಕಾಶಗಳನ್ನು ವ್ಯರ್ಥ ಮಾಡಿಕೊಂಡಿತು. ನಯನ್ ಮೊಂಗಿಯಾ ಸ್ಥಾನದಲ್ಲಿ ಭಾರತ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದು, ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿರುವ ಸಮೀರ್ ದಿಘ ಮ್ಯಾಥ್ಯು ಹೆಡನ್ ಅವರನ್ನು ರನ್ ಔಟ್ ಮಾಡುವ ಉತ್ತಮ ಅವಕಾಶವನ್ನು ಕೈಚೆಲ್ಲಿದ್ದಲ್ಲದೆ, ಮಾರ್ಕ್ ವಾ ಅವರನ್ನು ಸ್ಟಂಪ್ ಮಾಡುವ ಅತ್ಯುತ್ತಮ ಅವಕಾಶವನ್ನು ಹಾಳು ಮಾಡಿದರು.
ಭಾರತ ಮೂರನೇ ಟೆಸ್ಟ್ಗೆ ಮೂರು ಬದಲಾವಣೆಗಳನ್ನು ಮಾಡಿತು. ಮೊಂಗಿಯಾ ಬದಲು ದಿಘ ಸ್ಥಾನ ಪಡೆದರೆ, ವೆಂಕಟೇಶ್ ಪ್ರಸಾದ್ ಹಾಗೂ ವೆಂಕಟಪತಿ ರಾಜು ಬದಲು ಬಹುತಲೆ ಹಾಗೂ ನೀಲೇಶ್ ಕುಲಕರ್ಣಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಸಮೀರ್ ದಿಘ ಅವರಂತೂ ಕೆಟ್ಟ ಕೀಪಿಂಗ್ನಿಂದ 9 ರನ್ಗಳನ್ನು ಬೈಸ್ ಮೂಲಕವೇ ನೀಡಿದ್ದಾರೆ.
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications