ಗುಜರಾತಿನಲ್ಲಿ ಭೂಕಂಪದ ಗುಲ್ಲು,ಸಿದ್ಧವಾಗುತ್ತಿವೆ ಗಂಟೂಮೂಟೆಗಳು
ಗುಜರಾತ್ : ದೇಶದೆಲ್ಲೆಡೆ ರಂಗಿನಾಟಕ್ಕೆ ಜನ ಪಿಚಕಾರಿ ರೆಡಿ ಮಾಡಿಕಳ್ಳುತ್ತಿದ್ದರೆ ಗುಜರಾತ್ ಮಂದಿ ಹಬ್ಬದ ರಜೆಯನ್ನು ಪಡೆದು ವಲಸೆ ಹೋಗುತ್ತಿದ್ದಾರೆ. ಈಗ ಭೂಕಂಪದ ಸದ್ದು ಪೂರ್ಣವಾಗಿ ಉಡುಗಿಹೋಗಿದೆ ನಿಜ. ಆದರೂ ಮಾರ್ಚ್ 10ರ ಶನಿವಾರ ಮತ್ತೆ ಭೂಕಂಪ ಆಗುತ್ತದಂತೆ ಅನ್ನುವ ಗುಲ್ಲು ರಾಜ್ಯಾದ್ಯಂತ ಹಬ್ಬಿದ್ದು, ಬದುಕುಳಿದಿರುವ ಜನರನ್ನು ಭಯಗ್ರಸ್ತರಾಗಿಸಿದೆ.
ಭೂಕಂಪನದ ಮುನ್ಸೂಚನೆ ನೀಡುವ ವೆಬ್ಸೈಟೊಂದು ಪ್ರಕಟಿಸಿರುವ ಮಾಹಿತಿಯೇ ಇಷ್ಟಕ್ಕೆಲ್ಲಾ ಕಾರಣ. ಆ ವೆಬ್ಸೈಟ್ ಹೇಳುವಂತೆ ಗುಜರಾತಿನಲ್ಲಿ ಮಾರ್ಚ್ 10ರಂದು 6.6 ರಿಕ್ಟರ್ ತೀವ್ರತೆಯ ಮತ್ತೊಂದು ಭೂಕಂಪ ಸಂಭವಿಸಲಿದೆ. ಸ್ಥಳೀಯ ಆಡಳಿತ, ಹವಾಮಾನ ಇಲಾಖೆಯವರನ್ನು ಸಂಪರ್ಕಿಸಿ ಅದು ನಿಜವಲ್ಲ ಎಂಬುದನ್ನು ಖಾತ್ರಿ ಪಡಿಸಿಕೊಂಡಿದೆ. ಕಳೆದೆರಡು ದಿನಗಳಲ್ಲಿ 3.4 ರಿಕ್ಟರ್ ತೀವ್ರತೆಯ ಒಂದೇ ಒಂದು ಲಘು ಭೂಕಂಪ ಸಂಭವಿಸಿದ್ದು, ಈಗ ಪರಿಸ್ಥಿತಿ ತಣ್ಣಗಾಗಿದೆ. 3 ದಿನಗಳ ಕಾಲ ಸತತವಾಗಿ 4.5 ರಿಕ್ಟರ್ ತೀವ್ರತೆಯ ಒಂದೂ ಲಘು ಭೂಕಂಪ ಸಂಭವಿಸದಿದ್ದಲ್ಲಿ, ಭೂಮಿಯ ಒಳಪದರಿನ ದೋಷ ನಿವಾರಣೆಯಾಗಿದೆ ಎಂದೇ ಅರ್ಥ ಎನ್ನುತ್ತಾರೆ ಹವಾಮಾನ ಇಲಾಖೆಯವರು.
ದೊಡ್ಡ ಕಟ್ಟಡಗಳಲ್ಲಿ ವಾಸಿಸುವ ಜನ ಹೊರಗೆ ಟೆಂಟ್ ಹಾಕಿಕೊಳ್ಳುವ ತರಾತುರಿಯಲ್ಲಿದ್ದಾರೆ. ವಾರಾಂತ್ಯದ ರಜೆಗೆ ಹೋಳಿ ಹಬ್ಬದ ರಜೆಯನ್ನೂ ಸೇರಿಸಿಕೊಂಡು, ಬೇರೆ ಊರಿಗೆ ಮಂದಿ ಪೇರಿ ಕೀಳುತ್ತಿದ್ದಾರೆ; ಮಾರ್ಚ್ 10 ಕಳೆದ ನಂತರ ವಾಪಸ್ಸಾಗೋಣ ಎನ್ನುತ್ತಾ. ನಿರೀಕ್ಷಿತ ಭೂಕಂಪದ ಕೇಂದ್ರ ಕಛ್ ಎಂದೂ ವೆಬ್ಸೈಟ್ ಹೇಳುತ್ತದೆ. ವೆಬ್ಸೈಟ್ ಹೇಳುತ್ತಿರುವುದು ಸುಳ್ಳು. ಭೂಕಂಪ ಆಗೋದಿಲ್ಲ ಅಂತ ಸರ್ಕಾರ ಮಾಧ್ಯಮಗಳ ಮೂಲಕ ಜನರಿಗೆ ತಿಳಿಹೇಳುವ ಯತ್ನ ಮಾಡುತ್ತಿದೆ. ಜನಮನದಲ್ಲಿ ಬೇರೂರಿರುವ ಆತಂಕ ಅದ್ಯಾವುದಕ್ಕೂ ಕಿವಿಗೊಡುತ್ತಿಲ್ಲ. ನೋಡನೋಡುತ್ತಿರುವಂತೆಯೇ ಗಂಟೂಮೂಟೆಗಳು ಸಿದ್ಧವಾಗುತ್ತಿವೆ. (ಇನ್ಫೋ ವಾರ್ತೆ)
-
ರಿಷಬ್ ಸಮಯ ಬಂದಾಗ ಮಾತಾಡ್ತೀನಿ ಅಂದ: ಅನ್ಫಾಲೋ, ಗೆಳೆಯರಲ್ಲಿ ಬಿರುಕು ವದಂತಿ ಬಗ್ಗೆ ಪ್ರಮೋದ್ ಶೆಟ್ಟಿ ಪ್ರತಿಕ್ರಿಯೆ -
ಖೇಲೋ ಇಂಡಿಯಾ ಬುಡಕಟ್ಟು ಕ್ರೀಡಾಕೂಟ: 23 ಚಿನ್ನದ ಪದಕ ಗೆದ್ದು ಸಮಗ್ರ ಚಾಂಪಿಯನ್ ಪಟ್ಟ ಅಲಂಕರಿಸಿದ ಕರ್ನಾಟಕ -
ಏಪ್ರಿಲ್ 5ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
RCB vs CSK: ಆರ್ಸಿಬಿ ಕಡೆಯಿಂದ ಅಭಿಮಾನಿಗಳಿಗೆ ವಿಶೇಷ ಸಂದೇಶ: ಇಂದಿನ ಪಂದ್ಯಕ್ಕೂ ಮುನ್ನ ಇದು ಗಮನದಲ್ಲಿರಲಿ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್












Click it and Unblock the Notifications