ಚುಕ್ಕಿ ರಾಜ್ಯದ ರಾಜ ಯಾರಂತ ಹೇಳ್ತೀರಾ
ಟೀವಿ ಸ್ವಿಚ್ ಹಾಕಿದರೆ, ರೇಡಿಯೋ ಆನ್ ಮಾಡಿದರೆ... ಶಿವ ಭಕ್ತಿಯ ತರಂಗಗಳು. ಸುಮ್ಮನೇ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರೆ ಗುಡಿಯಾಂದರಿಂದ ಕೇಳುವ ಗಂಟೆಯ ಗುಂ ಗುಂ ಅಲೆ.... ಆ ಸದ್ದು ಇಳಿಯುತ್ತಲೇ ಮುಂದಿನ ಶಿವಾಲಯದಿಂದ ಕೇಳಿ ಬರುವ ಲಿಂಗಾಷ್ಟಕ... ವೈಷ್ಣವ, ಶೈವರೆಂಬ ಭೇದವಿಲ್ಲದ ಮಹಾಶಿವರಾತ್ರಿ ಸಾಗಿದೆ.
ಇದು ಜರತಾರಿ ಸೀರೆ ಉಟ್ಟು ಸರಬರ ಸದ್ದು ಮಾಡುವ ಹಬ್ಬ ಅಲ್ಲ. ತಲೆಗೆ ನೀರೆರೆದುಕೊಂಡು ಉಪವಾಸ ಇರುವ ಸರಳ ಹಬ್ಬ. ಅದೇ ನೋಡಿ, ಬಡವರ ದೇವರು ಎಂಬ ಕೀರ್ತಿ ಹೊತ್ತ ಶಿವನ ಹಬ್ಬಕ್ಕೆ ಖರ್ಚಿಲ್ಲ. ಮತ್ತೆ ನಿಮ್ಮ ಭಕ್ತಿಗನುಸಾರವಾಗಿ ಕ್ಷೀರಾಭಿಷೇಕ, ಎಳೆನೀರ ಅಭಿಷೇಕ... ಯಥಾನುಶಕ್ತಿ.
ಇದೆಲ್ಲದರಿಂದಾಚೆಗೆ ಹವೆಯಲ್ಲಿ ಏರು ಪೇರಿನ ಸುದ್ದಿ ಇಲ್ಲ . ಕರಾವಳಿಯಲ್ಲಿ ಹರಿವ ಬೆವರು, ಉತ್ತರ ಕರ್ನಾಟಕದಲ್ಲಿ ಒಣಗಿ ಬಿರುಕು ಬಿಡುವ ಮೈ, ಬೆಂಗಳೂರಿನಲ್ಲಿ ಪ್ರತಿದಿನ ಸ್ವಿಚ್ ಆನ್ ಆಗಿಯೇ ಇರುವ ಫ್ಯಾನ್.
ರಾತ್ರಿಯೆಲ್ಲ ಜಾಗರಣೆಯಿದ್ದರೆ ಬೆಳಿಗ್ಗೆ ಹೊತ್ತಿಗೆ ಗೀರು ಚಂದ್ರ ಕಂಡಾನು. ಟೇರೇಸಿನ ಮೇಲೆ ಹೋದರೆ, ಅಂಗಳದಲ್ಲಿ ನಿದ್ದೆ ಕಳೆಯಲೆಂದು ಅಡ್ಡಾಡುತ್ತಿದ್ದರೆ ಚುಕ್ಕಿಗಳ ರಾಜ್ಯದಲ್ಲಿ ರಾಜನಾರೆಂದು ಹುಡುಕುತ್ತೀರಾ ?
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications