ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹದೇಶ್ವರ ಬೆಟ್ಟದಲ್ಲಿ ಮಹಾ ಶಿವರಾತ್ರಿ ಜಾತ್ರೆ ಮಹೋತ್ಸವ

By Staff
|
Google Oneindia Kannada News

ಚಾಮರಾಜನಗರ : ಕಾಡುಗಳ್ಳ - ನರಹಂತಕ - ಅಪಹರಣಕಾರ ವೀರಪ್ಪನ್‌ ಹೆಸರಿನೊಂದಿಗೇ ತಳಕು ಹಾಕಿಕೊಂಡಿರುವ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಮಹದೇಶ್ವರ ಬೆಟ್ಟದಲ್ಲಿ ಈ ಹೊತ್ತು ಮಹಾಶಿವರಾತ್ರಿ ಹಾಗೂ ಯುಗಾದಿಯ ನಿಮಿತ್ತ ಜಾತ್ರಾ ಮಹೋತ್ಸವದ ಸಿದ್ಧತೆಗಳು ಭರದಿಂದ ಸಾಗಿವೆ.

ಬೆಟ್ಟದಲ್ಲಿ ನೆಲೆಸಿಹ ಶ್ರೀ ಮಲೈ ಮಹದೇಶ್ವರ ಸ್ವಾಮಿಯವರ ಉತ್ಸವದ ಅಂಗವಾಗಿ ಜಾತ್ರೆಯೂ ಸೇರಿದಂತೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಶಿವರಾತ್ರಿಯ (ಫೆ.21) ಮಹಾ ಮಜ್ಜನ ಸೇವೆ, ಜಾಗರಣೆ, 22ರಂದು ಅಮಾವಾಸ್ಯೆ ಉತ್ಸವ, 23ರಂದು ಬೆಟ್ಟದ ಅಮಾವಾಸ್ಯೆ, 24ರಂದು ಮಹಾರಥೋತ್ಸವ, ಕೊಂಡೋತ್ಸವ ನಡೆಯಲಿದೆ.

ಯುಗಾದಿ ಜಾತ್ರೆ ಮಹೋತ್ಸವದ ಅಂಗವಾಗಿ ಫೆ.23ರಿಂದ 25ರವರೆಗೆ ಮಹದೇಶ್ವರ ಸ್ವಾಮಿ ಅವರಿಗೆ ತೈಲ ಮಜ್ಜನ, ನಿತ್ಯ ಅನ್ನ ದಾಸೋಹ, ಅಭಿಷೇಕವೇ ಮೊದಲಾದ ಕಾರ್ಯಕ್ರಮಗಳೂ ನಡೆಯಲಿವೆ. ದೇವಾಲಯದಲ್ಲಿ ರಾಜಗೋಪುರ ನಿರ್ಮಾಣ ಕಾರ್ಯವೂ ಆರಂಭಗೊಂಡಿದೆ ಎಂದು ದೇವಾಲಯದ ಧರ್ಮದರ್ಶಿ ಮಂಡಳಿಯ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X