ಗುಜರಾತ್ ಭೂಕಂಪಕ್ಕೆ 1.25 ಲಕ್ಷ ಮಂದಿ ಬಲಿ - ವಿಕಾಸ್ ಟ್ರಸ್ಟ್
ಭುಜ್ : ಗುಜರಾತ್ನಲ್ಲಿ ಭೂಕಂಪದಿಂದಾಗಿ ಈವರೆಗೆ ಸತ್ತವರ ಸಂಖ್ಯೆ ಎಷ್ಟು ? ಈ ಸಂಖ್ಯೆ 20 ಸಾವಿರದಿಂದ 1.25 ಲಕ್ಷದವರೆಗೆ ಸುಳಿದಾಡುತ್ತಿದ್ದು ನಿಜವಾದ ಸಂಖ್ಯೆ ಇನ್ನೂ ಸ್ಪಷ್ಟವಾಗಿಲ್ಲ . ಸರ್ಕಾರದ ವಕ್ತಾರರು ಹೇಳುವಂತೆ ಈವರೆಗೆ ಸತ್ತಿರುವವರ ಸಂಖ್ಯೆ 20 ಸಾವಿರ. ರೆಡ್ಕ್ರಾಸ್ ಪ್ರಕಾರ ಭೂಕಂಪಕ್ಕೆ ಬಲಿಯಾದವರ ಸಂಖ್ಯೆ ಅರ್ಧಲಕ್ಷ . ರಕ್ಷಣಾ ಸಚಿವರು ಹೇಳುವಂತೆ ಈ ಸಂಖ್ಯೆ ಬರೋಬ್ಬರಿ ಲಕ್ಷ . ಇದೆಲ್ಲವನ್ನೂ ಮೀರುವಂತ ಸಂಖ್ಯೆಯಾಂದನ್ನು ಸ್ವಯಂ ಸೇವಾ ಸಂಸ್ಥೆಯಾಂದು ಮುಂದಿಟ್ಟಿದೆ. ಜ. 26 ರ ಕಂಪನದಿಂದ 1.25 ಲಕ್ಷ ಜನರು ಅಸು ನೀಗಿದ್ದಾರೆ ಎನ್ನುವುದು ಭೂಕಂಪ ಗ್ರಸ್ತರ ಪರಿಹಾರ ಕಾರ್ಯಗಳಲ್ಲಿ ತೊಡಗಿರುವ ಅತಿ ದೊಡ್ಡ ಎನ್ಜಿಒ ಕಛ್ ವಿಕಾಸ್ ಟ್ರಸ್ಟ್ ನ ಹೇಳಿಕೆ.
ಟ್ರಸ್ಟ್ ನ ಕಾರ್ಯಕರ್ತರು ಭೂಕಂಪದಿಂದ ನೆಲಕಚ್ಚಿರುವ ಸುಮಾರು 30 ಹಳ್ಳಿ ಮತ್ತು ನಗರಗಳಲ್ಲಿ ಕೆಲಸ ಮಾಡುತ್ತಿದ್ದು, ಅವರು ನೀಡಿದ ವರದಿಗಳ ಆಧಾರದ ಮೇಲೆ ಈ ಅಂದಾಜು ಮಾಡಲಾಗಿದೆ ಎಂದು ಟ್ರಸ್ಟ್ನ ಫಾ. ಜಾರ್ಜ್ ಕುನ್ನತ್ ಹೇಳಿದ್ದಾರೆ.
46,400 ಚದರ ಕಿ.ಮೀ. ವಿಸ್ತಾರವಾಗಿರುವ ಕಛ್ನ ಜನಸಂಖ್ಯೆ 15 ಲಕ್ಷ . ಕಛ್ನ ಪಂಚನಗರಗಳಾದ ಗಾಂಧಿ ಧಾಮ, ಭುಜ್, ಅಂಜಾರ್, ಮಾಂಡವಿ ಮತ್ತು ಮಂದಿರ್ ಪ್ರದೇಶಗಳಲ್ಲಿದ್ದ ಹೆಚ್ಚಿನ ನಗರಗಳು ನೆಲಸಮವಾಗಿವೆ. ಅಂದ ಮೇಲೆ ಸಂಖ್ಯೆ 20 ಸಾವಿರದ ಆಸು ಪಾಸಿನಲ್ಲಿರುವುದು ಸಾಧ್ಯವೇ ಇಲ್ಲ ಎನ್ನುವುದು ವಿಕಾಸ್ ಟ್ರಸ್ಟ್ನ ಲೆಕ್ಕಾಚಾರ.
ಸ್ವಯಂ ಸೇವಕರು ಮತ್ತು ಕಾರ್ಯಕರ್ತರು ಟ್ರಸ್ಟ್ಗೆ ಒಪ್ಪಿಸಿರುವ ವರದಿಗಳ ಪ್ರಕಾರ 25 ಸಾವಿರ ಜನಸಂಖ್ಯೆ ಇದ್ದ ಬಚಾವ್ ಪ್ರದೇಶದಲ್ಲಿ 20 ಸಾವಿರ ಸಾವು ಸಂಭವಿಸಿದೆ. ಅಲ್ಲದೆ, 35 ಸಾವಿರ ಜನಸಂಖ್ಯೆಯ ಅಂಜಾರ್ನಲ್ಲಿಯೂ 15 ಸಾವಿರ ಮಂದಿ, ರಾಪರ್ಲ್ಲಿ 20 ಸಾವಿರ ಮತ್ತು ಗಾಂಧಿಧಾಮದಲ್ಲಿ 30 ಸಾವಿರ ಮಂದಿ ಸತ್ತಿರುವ ಅಂದಾಜು ಟ್ರಸ್ಟಿನದು.
ಸತ್ತವರ ಸಂಖ್ಯೆಯ ಬಗೆಗಿನ ಗೊಂದಲ : ಗುಜರಾತ್ ಭೂಕಂಪದಲ್ಲಿ ಸತ್ತವರ ಸಂಖ್ಯೆ ಅಧಿಕೃತವಾಗಿ 20 ಸಾವಿರ ಮಾತ್ರ. ಆದರೆ ಭೂಕಂಪದ ಬಗ್ಗೆ ಭಾನುವಾರದಂದು, ಗುಜರಾತ್ ಮುಖ್ಯ ಮಂತ್ರಿ ಕೇಶುಭಾಯ್ ಪಟೇಲ್ ಸಾವಿನ ಸಂಖ್ಯೆ ಒಂದು ಲಕ್ಷಕ್ಕೇರಬಹುದು ಎಂಬ ಕಳವಳ ವ್ಯಕ್ತ ಪಡಿಸಿದ್ದರು.
ಅಂಜಾರ್ನಲ್ಲಿ ಸತ್ತಿರುವುದು 15 ಸಾವಿರ ಜನ ಎಂದು ವಿಕಾಸ್ ಸಂಸ್ಥೆ ಪ್ರಕಟಿಸಿರುವ ಬೆನ್ನಿಗೇ, ಅಂಜಾರ್ನಲ್ಲಿ ಯಾರೂ ಬದುಕುಳಿದಿಲ್ಲ ಎಂದು ಮಿಲಿಟರಿ ಮೂಲಗಳು ತಿಳಿಸಿವೆ.
ಈ ನಡುವೆ, ಗುಜರಾತ್ ಭೂಕಂಪದಲ್ಲಿ ಮೃತರಾಗಿರುವವರ ಸಂಖ್ಯೆ ಒಂದು ಲಕ್ಷ ಮೀರಬಹುದು ಎನ್ನುವ ತಮ್ಮ ಹೇಳಿಕೆಯನ್ನು ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಬುಧವಾರ ಸಮರ್ಥಿಸಿಕೊಂಡಿದ್ದಾರೆ. ನಾನು ಭೂಕಂಪ ವಾಗಿರುವ ಪ್ರದೇಶದಲ್ಲಿ ಖುದ್ದು ವೀಕ್ಷಣೆ ನಡೆಸಿದ್ದೇನೆ. ಅನೇಕ ಪ್ರದೇಶಗಳು ನಾಮಾವಶೇಷವಾಗಿವೆ. ಒಂದು ಲಕ್ಷ ಸಂಖ್ಯೆ ಉತ್ಪ್ರೇಕ್ಷೆಯಲ್ಲ ಎಂದು ಫರ್ನಾಂಡಿಸ್ ಹೇಳಿದರು. ಆದರೆ ಪ್ರಧಾನಿ ವಾಜಪೇಯಿ ಈ ಹೇಳಿಕೆ ಸಚಿವರ ವೈಯಕ್ತಿಕ ಅಭಿಪ್ರಾಯ ಎಂದು ಹೇಳಿರುವುದರಿಂದ ಅಧಿಕೃತ ವರದಿ ಸಾವಿನ ಸಂಖ್ಯೆ 20 ಸಾವಿರ ದಾಟಿರುವ ಬಗ್ಗೆ ಇದುವರೆಗೆ ಬಂದಿಲ್ಲ.
-
ರಿಷಬ್ ಸಮಯ ಬಂದಾಗ ಮಾತಾಡ್ತೀನಿ ಅಂದ: ಅನ್ಫಾಲೋ, ಗೆಳೆಯರಲ್ಲಿ ಬಿರುಕು ವದಂತಿ ಬಗ್ಗೆ ಪ್ರಮೋದ್ ಶೆಟ್ಟಿ ಪ್ರತಿಕ್ರಿಯೆ -
ಏಪ್ರಿಲ್ 5ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಖೇಲೋ ಇಂಡಿಯಾ ಬುಡಕಟ್ಟು ಕ್ರೀಡಾಕೂಟ: 23 ಚಿನ್ನದ ಪದಕ ಗೆದ್ದು ಸಮಗ್ರ ಚಾಂಪಿಯನ್ ಪಟ್ಟ ಅಲಂಕರಿಸಿದ ಕರ್ನಾಟಕ -
RCB vs CSK: ಆರ್ಸಿಬಿ ಕಡೆಯಿಂದ ಅಭಿಮಾನಿಗಳಿಗೆ ವಿಶೇಷ ಸಂದೇಶ: ಇಂದಿನ ಪಂದ್ಯಕ್ಕೂ ಮುನ್ನ ಇದು ಗಮನದಲ್ಲಿರಲಿ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್












Click it and Unblock the Notifications