ಎತ್ತರ ಸ್ಥಳದಿಂದ ಬಿದ್ದು ಪ್ರಾಣ ಕಳೆದುಕೊಳ್ಳಲು ನಿರ್ಧರಿಸಿದ್ದೆ : ರಾಜ್
ಬೆಂಗಳೂರು : ಏಕೀ ಯಾತನೆ ಅಂತ ಎತ್ತರದ ಸ್ಥಳಕ್ಕೆ ಹೋಗಿ ಮೇಲಿನಿಂದ ಕೆಳಕ್ಕೆ ಬಿದ್ದು ಪ್ರಾಣ ಅನ್ನುವ ಶಕ್ತಿ ಕಳೆದು ಕೊಳ್ಳುವ ನಿರ್ಧಾರ ಮಾಡಿದ್ದೆ, ಆದರೆ, ಕೆಳಗೆ ಬಿದ್ದಾಗ ಪ್ರಾಣ ಹೋಗದೆ ಕೈ ಕಾಲು ಮುರಿದರೆ ಮತ್ತಷ್ಟು ಯಾತನೆ ಪಡಬೇಕಲ್ಲಾ ಅಂತ ಮನಸ್ಸು ಕಲ್ಲು ಮಾಡಿಕೊಂಡೆ - ಇದು ವೀರಪ್ಪನ್ ಒತ್ತೆಯಲ್ಲಿ 108 ದಿನ ಕಳೆದ ರಾಜ್ಕುಮಾರ್ ಅವರ ಮನದಂತರಾಳದ ಮಾತುಗಳು.
108 ದಿನದ ವನವಾಸದ ನಂತರ ನಾಡಿಗೆ ಬಂದು ವಿಶ್ರಾಂತಿ ಪಡೆದ ಬಳಿಕ, ತಾವು ಕಾಡಿನಲ್ಲಿದ್ದಾಗ ತಮ್ಮ ಹಾಗೂ ತಮ್ಮ ಕುಟುಂಬದವರ ನಡುವೆ ಏಕೈಕ ಕೊಂಡಿಯಾಗಿದ್ದ ಆಕಾಶವಾಣಿಗೆ ನೀಡಿರುವ ಪ್ರಪ್ರಥಮ ಸಂದರ್ಶನದಲ್ಲಿ ರಾಜ್ಕುಮಾರ್ ಮನಬಿಚ್ಚಿ ಮಾತನಾಡಿದ್ದಾರೆ. ಬಾನುಲಿಯ ಶ್ರೋತೃಗಳೊಂದಿಗೆ ತಮ್ಮ ಕಾಡಿನ ಅನುಭವ ಹಂಚಿಕೊಂಡಿದ್ದಾರೆ.
ತಮ್ಮ ಅಗಲಿಕೆಯ ನೋವು ಅನುಭವಿಸಿದ ಪತ್ನಿಯ ಕಂಡಾಗ ಆದ ಅನುಭವ, ಗಡ್ಡಧಾರಿಗಳಾಗಿ ಸೊರಗಿದ್ದ ಮಕ್ಕಳನ್ನು ಕಂಡಾಗ ಆದ ನೋವು, ಮಕ್ಕಳು ಮೊಮ್ಮಕ್ಕಳನ್ನು ಕಲೆತ ನಂತರ ಆದ ಆನಂದ, ಇದೆಲ್ಲಕ್ಕೂ ಮಿಗಿಲಾಗಿ ಕಾಡಿನ ಆ ಕರಾಳ ರಾತ್ರಿಗಳ ಅನುಭವವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ.
ಈ ಸುದೀರ್ಘ ಸಂದರ್ಶನದಲ್ಲಿ ಅದೊಂದು ಮರೆಯಲಾಗದ, ನವಿರಾದ ಘಟನೆ ಎಂದಿರುವ ರಾಜ್, ಸಾಯಬೇಕೆಂದು ನಿರ್ಧರಿಸಿದ್ದು, ಆನೆಗಳನ್ನು ನೋಡಿದಾಗ ಆದ ಅನುಭವವ ಸ್ಮರಿಸುತ್ತಾ ಈಗಲೂ ಕಣ್ಮುಚ್ಚಿದರೆ ಕಾಡೇ ಕಣ್ಣಮುಂದೆ ಬರುತ್ತದೆ ಎಂದು ಹೇಳಿದ್ದಾರೆ. ಪತ್ನಿ, ಪುತ್ರರ ಧ್ವನಿಯನ್ನು ರೇಡಿಯೋದಲ್ಲಿ ಕೇಳಿದಾಗ ಕಣ್ಣಿರು ಬರುತ್ತಿತ್ತು ಎಂದಿರುವ ರಾಜ್ ತಾವು ಕಣ್ಣೀರು ಹಾಕುತ್ತಿದ್ದಾಗ ವೀರಪ್ಪನ್ ಸಹಚರರೇ ಸಮಾಧಾನ ಪಡಿಸುತ್ತಿದ್ದರು ಎಂದೂ ಹೇಳಿದ್ದಾರೆ.
ರೂಪಕ : ರಾಜ್ ಪತ್ನಿ, ಪುತ್ರರ ಪ್ರತಿಕ್ರಿಯೆ, ಆಯ್ದ ಅಭಿಮಾನಿಗಳ ಆನಂದದ ಮಾತುಗಳು, ರಾಜ್ಕುಮಾರ್ ಅನುಭವ, ಕಾಡಿನಿಂದ ಆಡಿದ ಕೆಲವು ಮಾತುಗಳ ತುಣುಕು ಹಾಗೂ ಅದಕ್ಕೆ ಪೂರಕವಾಗಿ ರಾಜ್ಕುಮಾರ್ ಹಾಡಿರುವ ಚಿತ್ರಗೀತೆಗಳನ್ನುಳ್ಳ ವಿಶೇಷ ರೂಪಕವನ್ನು ಆಕಾಶವಾಣಿ ಸಿದ್ಧಪಡಿಸಿದೆ. ಸುಮಾರು 100 ನಿಮಿಷಗಳ ಈ ಕಾರ್ಯಕ್ರಮ 10 ಕಂತುಗಳಲ್ಲಿ ನವೆಂಬರ್ 30ರ ಗುರುವಾರದಿಂದ 10 ದಿನಗಳ ಕಾಲ ಬೆಳಗ್ಗೆ 7-45ರಿಂದ 8 ಗಂಟೆವರೆಗೆ ಬಿತ್ತರವಾಗುತ್ತಿದೆ.
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications