ಶಾಂತಿ ಮೆರ-ವ-ಣಿ-ಗೆ ಆರಂಭ, ಮೊಳ-ಗಿ-ದ ಜಯ-ಕಾ-ರ- ಧಿಕ್ಕಾ-ರ
ಬೆಂಗ--ಳೂ-ರು : ಚಿತ್ರ ಕಲಾ-ವಿ-ದ-ರು, ನಿರ್ಮಾ-ಪ-ಕ-ರು, ನಿರ್ದೇ-ಶ-ಕ-ರು, ತಂತ್ರ-ಜ್ಞ-ರು ಸೇರಿ-ದಂ-ತೆ ಸುಮಾ-ರು 10 ಸಾವಿ-ರ ರಾಜ್ ಅಭಿ-ಮಾ-ನಿ-ಗ-ಳು ಕೆಂಪೇ-ಗೌ-ಡ ರಸ್ತೆ-ಯ ಬನಪ್ಪ ಪಾರ್ಕ್-ನಿಂ--ದ ಗುರು-ವಾ-ರ 11.30ರ ಸು-ಮಾ-ರಿ-ಗೆ ಶಾಂತಿ ಮೆರ-ವ-ಣಿ-ಗೆ -ಹೊ-ರ-ಟಿ-ದ್ದಾ-ರೆ.
ಕಾ-ರು, -ವ್ಯಾ-ನು ಹಾಗೂ ಬಸ್ಸು-ಗ-ಳ-ಲ್ಲಿ ತಂ-ಡೋಪ-ತಂ-ಡ-ವಾ-ಗಿ ಅಭಿ-ಮಾ-ನಿ-ಗ-ಳ ಮಹಾ-ಪೂ-ರ ಹರಿ-ದು ಬರು-ತ್ತಿ-ದ್ದು, ಮೆರ-ವ-ಣಿಗೆ ಭಾರೀ ಜೋರಾ-ಗಿ-ದೆ. ಎಲ್ಲಿ ನೋಡಿ-ದ-ರ--ಲ್ಲಿ ಬ್ಯಾನ-ರ್-ಗ-ಳು ಕಾಣು-ತ್ತಿ-ದ್ದು, ‘ರಾಜ್-ಕು-ಮಾ-ರ್-ಗೆ ಜಯ-ವಾ-ಗ-ಲಿ’, ‘ಅವ-ರು ಬೇಗ ಬರ-ಲಿ, ವೀರ-ಪ್ಪ-ನ್-ಗೆ ಧಿಕ್ಕಾ-ರ’ ಎಂಬ ಘೋಷ-ಣೆ-ಗ-ಳು ಕೇಳಿ-ಬ-ರು-ತ್ತಿ-ವೆ. ಚಿತ್ರ-ರಂ-ಗ-ದ -ಶಿ-ವ-ರಾಂ, ಸಾ.ರಾ.ಗೋವಿಂ-ದು, ರಮೇ-ಶ್, ಶಿವ-ರಾ-ಜ್ ಕುಮಾ-ರ್, ರಾಘ-ವೇಂ-ದ್ರ ರಾಜ್--ಕು-ಮಾ-ರ್, ಅಶೋ-ಕ್, ರಾಕ್-ಲೈ-ನ್ ವೆಂಕ-ಟೇ-ಶ್, ಕೆ.ಸಿ.ಎನ್. ಚಂದ್ರು, ಬಿ.ಸಿ. ಪಾಟೀ-ಲ್, ದೇವ-ರಾ-ಜ್, ಶ್ರೀಧ-ರ್, ರಾ-ಜೇ-ಶ್, ಜಯಂ--ತಿ, ಜಯ-ಮಾ-ಲ, ಎಸ್.ನಾರಾ-ಯ-ಣ್, -ಗಿ-ರಿ-ಜಾ ಲೋಕೇ-ಶ್, ಪೂಜಾ ಲೋಕೇ-ಶ್, ಕಾಶೀ-ನಾ-ಥ್, ಶೃತಿ, ನೆ.ಲ. ನರೇಂ-ದ್ರ ಬಾಬು ಮುಂತಾ-ದ-ವ-ರು ಮೆರ-ವ-ಣಿ-ಗೆ-ಯಲ್ಲಿ ಭಾಗ-ವ-ಹಿ-ಸಿದ್ದಾರೆ.
ಬನಪ್ಪ ಪಾರ್ಕಿ-ನ-ಲ್ಲಿ ವೀರ-ಪ್ಪ-ನ್ -ಪ್ರ-ತಿ-ಕೃ-ತಿ ದಹ-ನ ಮಾಡ-ಲಾ-ಯಿ-ತು. ನಂತ-ರ ಅಭಿ-ಮಾ-ನಿ-ಗ-ಳ-ನ್ನು-ದ್ದೇ-ಶಿ--ಸಿ ಮಾತ-ನಾ-ಡಿ-ದ ಹಿರಿ-ಯ ಕಲಾ-ವಿ-ದ ಶಿವ-ರಾಂ, ನಾವು ನಡೆ-ಸು-ತ್ತಿ-ರು-ವು-ದು ಮೌನ ಮೆರ-ವ-ಣಿ-ಗೆ ಎಂಬು-ದು ನೆನ-ಪಿ-ರ-ಲಿ. ಯಾರೂ ಘೋಷ-ಣೆ-ಗ-ಳ-ನ್ನು ಕೂಗ-ಕೂ-ಡ-ದು. ಶಾಂತಿಯಿಂದ ಇರ-ಬೇ-ಕು. ಪಾರ್ವ-ತ-ಮ್ಮ-ನ-ವ-ರು ಆಸ್ಪ-ತ್ರೆ-ಗೆ ಸೇರಿ--ರು-ವ ಈ ಸಂದ-ರ್ಭ-ದ-ಲ್ಲಿ ನಾವು ಶಾಂತಿ ಕಾಪಾ-ಡಿ-ಕೊಂ-ಡು ಬರ-ಬೇ-ಕಾ-ದು-ದು ಅತಿ ಮು-ಖ್ಯ ಎಂದ-ರು.
ಅಖಿ-ಲ ಕರ್ನಾ-ಟ-ಕ ರಾಜ್-ಕು-ಮಾ-ರ್ ಅಭಿ-ಮಾ-ನಿ-ಗ-ಳ ಸಂಘ-ದ ಅಧ್ಯ-ಕ್ಷ ಸಾ.ರಾ. ಗೋವಿಂ-ದು ಮಾತ-ನಾ-ಡಿ, ರಾಜ್ ಬಿಡು-ಗ-ಡೆ ವಿಷ-ಯ-ದ-ಲ್ಲಿ ಕೇಂದ್ರ ಮಧ್ಯೆ ಪ್ರ-ವೇ-ಶಿ-ಸಬೇಕು ಎಂದು ಹೇಳಿ-ದ-ರು.
ಕೆಂಪೇ-ಗೌ-ಡ ರಸ್ತೆ-ಯ-ಲ್ಲಿ ಬ-ಸ್ ಸಂಚಾ-ರ-ಕ್ಕೆ ತೊಂದ--ರೆ-ಯಾ-ಗಿ-ದೆ. ರಸ್ತೆ-ಯು-ದ್ದ-ಕ್ಕೂ ಬಿಗಿ ಪೊಲೀ-ಸ್ ಬಂದೋ-ಬ-ಸ್ತ್ ಮಾಡ-ಲಾ-ಗಿ-ದೆ. -ಬ-ನಪ್ಪ ಪಾರ್ಕ್-ನಿಂ-ದ ಶುರು-ವಾ-ಗಿರು-ವ ಮೆರ-ವ-ಣಿ-ಗೆ ರಾಜ-ಭ-ವ-ನ-ದವರೆ-ಗೆ ನಡೆ-ಯ-ಲಿ-ದ್ದು, ಅಲ್ಲಿ ಕಲಾ-ವಿ--ದ-ರು ರಾಜ್ ಬಿಡು-ಗ-ಡೆ-ಗೆ ಆಗ್ರ-ಹಿ-ಸಿ ರಾಜ್ಯ-ಪಾ-ಲ-ರಿ-ಗೆ ಮನ-ವಿ ಪತ್ರ ಸಲ್ಲಿ-ಸ-ಲಿ-ದ್ದಾ-ರೆ.
(ಇನ್ಫೋ
ವಾರ್ತೆ)
ಮುಖಪುಟ
/
ರಾಜ್
ಅಪಹರಣ