ದಾಂಡೇಲಿ ಅಣೆಕಟ್ಟು ಯೋಜನೆಗೆ ರೆಸಾರ್ಟ್ ಗ್ರೂಪ್ನ ವಿರೋಧ
ದಾಂಡೇಲಿ : ಜನಪ್ರಿಯವಾಗುತ್ತಿರುವ ಸಾಹಸ ಪ್ರವಾಸೋದ್ಯಮಕ್ಕೆ ಧಕ್ಕೆಯಾಗುವುದರಿಂದ ದಾಂಡೇಲಿ ಅಣೆಕಟ್ಟು ಯೋಜನೆಗೆ 'ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ಸ್ ಸಂಸ್ಥೆ "ಯ ದಾಂಡೇಲಿ ಘಟಕ ತನ್ನ ವಿರೋಧ ವ್ಯಕ್ತಪಡಿಸಿದೆ.
ಜಿಲ್ಲೆಯ ಹೊರ ಭಾಗದಲ್ಲಿ , ರೆಸಾರ್ಟ್ ತನ್ನ ಗ್ರಾಹಕರ ಮನೋರಂಜನೆಗಾಗಿ ಸಂರಕ್ಷಿಸಿಕೊಂಡು ಬಂದಿರುವ ಪುಟ್ಟ ಕಾನನ ಮತ್ತು ಕಾಳೀ ನದಿ ದಂಡೆಯಲ್ಲಿರುವ 'ಬೈಸನ್ ರಿವರ್ ರೆಸಾರ್ಟ್"ಗೆ ಈ ಅಣೆಕಟ್ಟು ಯೋಜನೆಯಿಂದಾಗಿ ಹಾನಿಯಾಗಲಿದೆ. ಸಂಸ್ಥೆಯು ವಿದೇಶಿ ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ಕಟ್ಟಿರುವ ಈ ರೆಸಾರ್ಟ್ಗೆ ಮೂರು ಕೋಟಿ ರೂಪಾ-ಯಿಗೂ ಹೆಚ್ಚು -ಹ-ಣ ಖ-ರ್ಚು ಮಾಡಲಾಗಿದೆ.
ಕಾಡಿನಲ್ಲಿ ವಿಹಾರ, ನದಿಯಲ್ಲಿ ಸಾಹಸೀ ಆಟಗಳು ಮತ್ತು ಅಪ್ರತಿಮ ನಿಸರ್ಗ ಸೌಂದರ್ಯವೇ ಈ ಪ್ರದೇಶದ ಆಕರ್ಷಣೆ. ದಾಂಡೇಲಿ ಅಣೆಕಟ್ಟು ಯೋಜ-ನೆ-ಯಿಂ-ದ ಈ ಆಕ-ರ್ಷ-ಣೆ-ಗ-ಳೆ-ಲ್ಲಾ ಹಾಳಾ-ಗಿ , ರೆಸಾರ್ಟ್- ನಷ್ಟ
ಅನು-ಭ-ವಿ-ಸ-ಬೇ-ಕಾ-ಗು-ತ್ತ-ದೆ. ಅಲ್ಲದೆ ರಾಜ್ಯ ಸರಕಾರದ ಪ್ರವಾಸೋದ್ಯಮ ಇಲಾಖೆಗೂ ನಷ್ಟವಾಗಲಿದೆ ಎಂದು ರೆಸಾರ್ಟ್ನ ಪ್ರಕಟಣೆ ತಿಳಿಸಿದೆ. (ಇನ್ಫೋ ವಾರ್ತೆ)