ಹಾಲು ಕೊಳ್ಳೀರೇ.. ನಗರದ ಬೀದಿಗಳಲ್ಲಿ ಅನುರಣನಗೊಳ್ಳುವ ಹಾಡುಪಾಡು
ರಾಯಚೂರು : ಸಂತ ಶಿಶುನಾಳ ಷರೀಫರ ಕೋಡಗನ ಕೋಳಿ ನುಂಗಿತ್ತಾ ... ಎಂಬ ಅರ್ಥಗರ್ಭಿತ ಹಾಡನ್ನು ನೆನಪಿಸುವ ಹೀಗೊಂದು ಕೃತಕ ಸೃಷ್ಟಿ ನಿಯಮ ಸದ್ದುಗದ್ದಲ ತುಂಬಿದ ನಗರದ ನೆರಳಿನಲ್ಲಿಯೇ ಚಾಚಿಕೊಂಡಿರುವ ಹಳ್ಳಿಗಳಲ್ಲಿ ಸದ್ದು ಗದ್ದಲವಿಲ್ಲದೇ ಪಾಲನೆಯಾಗುತ್ತಿದೆ.
ಬೆಳೆಯುತ್ತಿರುವ ರಾಯಚೂರು ನಗರದ ಆಸುಪಾಸಿನಲ್ಲಿ ಉಳಿದುಕೊಂಡಿರುವ ಮಲಿಯಾಬಾದ್, ಬಿಜನಗೇರಾ, ತುಂಟಾಪುರ, ಸಿದ್ರಾಂಪುರ, ಬೋಳಮ್ಮನ ದೊಡ್ಡಿ, ಯರಮರಸ್, ಅಸ್ಕಿಹಾಳ್, ಮುಂತಾದ ಹತ್ತಕ್ಕೂ ಹೆಚ್ಚು ಹಳ್ಳಿಗಳ ಹೈನುಗಾರಿಕೆ ಅವಲಂಬಿತ ಕುಟುಂಬಗಳಿಗೆ ನಗರದ ಮಧ್ಯಮ ವರ್ಗದ ಕುಟುಂಬಗಳು ಆಧಾರವಾಗಿವೆ. ಬೆಳಗಿನ ಸೂರ್ಯೋದಯದೊಂದಿಗೆ ತಲೆಯ ಮೇಲೆ ಬುಟ್ಟಿ ಹೊತ್ತು ಬರುವ ಮಹಿಳೆಯರು ಕಾಣುವುದು ಸಾಮಾನ್ಯ ದೃಶ್ಯ. ಹಣಕಾಸಿನ ಬಲಕ್ಕೆ ತಕ್ಕಂತೆ ಒಂದು ಅಥವಾ ಎರಡು ಎಮ್ಮೆ ಕಟ್ಟಿಕೊಂಡು ಮೊಸರು, ಬೆಣ್ಣೆ , ತುಪ್ಪ ಮಾರಾಟ ಮಾಡಿ ಜೀವನ ಸಾಗಿಸುವ ಮಹಿಳೆಯರತ್ತ ಸರಕಾರ ಮಹಿಳೆಯರಿಗೆಂದೇ ಜಾರಿಗೆ ತಂದಿರುವ ಹಲವು ಯೋಜನೆಗಳು ಸುಳಿದಾಡಿಲ್ಲ.
ನಗರದಲ್ಲಿ ಮೊಸರು, ಬೆಣ್ಣೆ, ತುಪ್ಪ ಮಾರಾಟದಿಂದ ಗಳಿಸುವ ಸರಿ ಸುಮಾರು 60 ರೂಪಾಯಿಗಳಲ್ಲಿ 10 ರೂಪಾಯಿ ಗಂಡನ ಕುಡಿತಕ್ಕೆ ಮುಡಿಪು. ಮಿಕ್ಕಿದ್ದು , ದಿನದ ಪ್ರಯಾಣದ ಖರ್ಚು. ಇದು ದಿನವಹಿ ಬಜೆಟ್ನ ಬಗ್ಗೆ ವಿವರಿಸುವ ಮಲಿಯಾಬಾದ್ ನರಸಮ್ಮ ಎಂಬ ಅನಕ್ಷರಸ್ಥೆಯ ಬದುಕು. ಇದೇ ರೀತಿಯ ಬದು-ಕು ಮೊಸರು, ಬೆಣ್ಣೆ ತುಪ್ಪ, ಮಾರಲು ಬರುವ ಇತರ ಹಳ್ಳಿಗಳ ಮಹಿಳೆಯರ-ದೂ. ಈ ಊರುಗಳಲ್ಲಿ ಆಗಾಗ್ಗೆ ಕೆಡುವ ಬೋರ್ ವೆಲ್ಗಳಿವೆ. ಕಣ್ಣಾ ಮುಚ್ಚಾಲೆಯಾಡುವ ಕರೆಂಟ್ ಇದೆ, ನೃತ್ಯ ಮಾಡಿಸುವ ರಸ್ತೆಗಳಿವೆ. ಮನಸುಬಂದಾಗೊಮ್ಮೆ ಬರುವ ಕೆಂಪು ಬಸ್ಸುಗಳ ಸೌಲಭ್ಯವಿದೆ. ಮೈ ಮುಖ ಕಾಣದಂತೆ ತುಂಬಿಕೊಂಡು ಓಡಾಡುವ ಆಟೋ ಜೀಪುಗಳಿವೆ. ಎಲ್ಲಾ ನಾಗರಿಕ ಸೌಲಭ್ಯಗಳಿದ್ದರೂ ಇಲ್ಲದಂತಿರುವ, ನಾಗರಿಕತೆಯ ಸೋಂಕಿದ್ದರೂ ಜನ ಸಾಮಾನ್ಯ ಬದುಕಿನಿಂದ ವಂಚಿತ ಈ ಮಹಿಳೆಯರಿಗೆ ಮನೆ ತುಂಬ ಮಕ್ಕಳಿವೆ, ವಿ-ದ್ಯೆಯಿಲ್ಲ. ಚುನಾವಣೆ ಬಂದಾಗೊಮ್ಮೆ ಈ ಜನರ ನೆನಪಾಗುವಂತೆ ಬೆಳಿಗ್ಗೆ ಎಲ್ಲಾ ದುಡಿದು ಬರುವ ಗಂಡಂದಿರು ಕುಟುಂಬದ ಖರ್ಚಿನಲ್ಲಿ ಪಾಲು ತೆಗೆದುಗೊಳ್ಳುವ ಬದಲು ಹೆಂಡತಿ ತಂದ ದುಡ್ಡಿನಲ್ಲಿ ಪಾಲು ನಡೆದು ನಶೆಯ ನಿಶೆ ಏರಿಸಿಕೊಳ್ಳಲು ಬಳಸುವುದು ಸರ್ವೇಸಾಮಾನ್ಯವಾಗಿದೆ.
-
ರಿಷಬ್ ಸಮಯ ಬಂದಾಗ ಮಾತಾಡ್ತೀನಿ ಅಂದ: ಅನ್ಫಾಲೋ, ಗೆಳೆಯರಲ್ಲಿ ಬಿರುಕು ವದಂತಿ ಬಗ್ಗೆ ಪ್ರಮೋದ್ ಶೆಟ್ಟಿ ಪ್ರತಿಕ್ರಿಯೆ -
ಖೇಲೋ ಇಂಡಿಯಾ ಬುಡಕಟ್ಟು ಕ್ರೀಡಾಕೂಟ: 23 ಚಿನ್ನದ ಪದಕ ಗೆದ್ದು ಸಮಗ್ರ ಚಾಂಪಿಯನ್ ಪಟ್ಟ ಅಲಂಕರಿಸಿದ ಕರ್ನಾಟಕ -
ಏಪ್ರಿಲ್ 5ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
RCB vs CSK: ಆರ್ಸಿಬಿ ಕಡೆಯಿಂದ ಅಭಿಮಾನಿಗಳಿಗೆ ವಿಶೇಷ ಸಂದೇಶ: ಇಂದಿನ ಪಂದ್ಯಕ್ಕೂ ಮುನ್ನ ಇದು ಗಮನದಲ್ಲಿರಲಿ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್












Click it and Unblock the Notifications