ಭಾರತ ಸೇರಿದಂತೆ 80 ದೇಶ ಸೈಕಲ್ ಮೇಲೆ ಸುತ್ತಿರುವ 71ರ 'ಯುವಕ'!
ಮೈಸೂರು, ಅಕ್ಟೋಬರ್ 27 : ಅರೇ ನಮಗೆ ವಯಸ್ಸಾಯಿತು. ಈ ಕಾಲದಲ್ಲಿ ಏನು ಮಾಡೋಕೆ ಆಗುತ್ತೇ ಹೇಳಿ? ಅಂತ ಗೊಣಗಿಕೊಂಡು ದೇವರು, ದೇವಸ್ಥಾನ ಅಥವಾ ಮನೆಯನ್ನು ಬಿಟ್ಟು ಎಲ್ಲಿಯೋ ಹೋಗದೇ ಕಾಲ ಕಳೆಯುವ ವೃದ್ಧರೇ ಹೆಚ್ಚು. ಒಂದಿಷ್ಟು ಜನ ಸಂಜೆ ಸೇರಿಕೊಂಡು ಹರಟೆ ಹೊಡೆದು ಮನೆ ದಾರಿ ಹಿಡಿಯುತ್ತಾರೆ.
ಆದರೆ ಇಲ್ಲೊಬ್ಬ ವ್ಯಕ್ತಿ ಇದ್ದಾರೆ. ಇವರ ವಯಸ್ಸು ಕೇವಲ 71. ಇದುವರೆಗೂ ಬರೋಬ್ಬರಿ 7 ಬಾರಿ ವಿಶ್ವ ಪರ್ಯಟನೆ ಮಾಡಿದ ಸಾಧಕ, ಯುವಕರಿಗೆ ಸ್ಫೂರ್ತಿಯ ಚಿಲುಮೆ. ಇದು ಯಾವುದರಲ್ಲಿ ಅಂತೀರಾ? ಸೈಕಲ್ ನಲ್ಲಿ ಎಂದರೆ ನಂಬ್ತೀರಾ? ನಂಬಲೇಬೇಕು, ಏಕೆಂದರೆ ಅದೇ ವಾಸ್ತವ.
ವಿದೇಶಿ ಪ್ರಜೆಯೊಬ್ಬರು ಸೈಕಲ್ ತುಳಿಯುತ್ತಾ ಏಳನೇ ಬಾರಿ ವಿಶ್ವ ಪರ್ಯಟನೆ ಮಾಡುತ್ತಿದ್ದಾರೆ. ಇತ್ತೀಚೆಗೆ ಕರ್ನಾಟಕ ಪ್ರವೇಶಿಸಿದ ಇವರು ನಾಲ್ಕನೇ ಬಾರಿಗೆ ಭಾರತಕ್ಕೆ ಬಂದಿದ್ದಾರೆ ಎಂಬುದು ಆಶ್ಚಯರ್ಕರ ವಿಚಾರ.
ಇಟಲಿಯ ಅರ್ಮಾಂಡೊ ಸೈಕಲ್ ಮೇಲೆ ಜಾಲಿಯಾಗಿ ವಿಶ್ವ ಪರ್ಯಟನೆಗೆ ಹೊರಟವರು. ಅವರು ಸದ್ಯ ಜರ್ಮನಿಯಲ್ಲಿ ವಾಸ ಮಾಡುತ್ತಿದ್ದಾರೆ. ಈಗಾಗಲೇ ಒಟ್ಟು 12.5 ಲಕ್ಷ ಕಿ.ಮೀ. ದೂರವನ್ನು ಸೈಕಲ್ ನಲ್ಲೇ ಕ್ರಮಿಸಿದ್ದಾರೆ. 35 ವರ್ಷಗಳಿಂದ ಪರ್ಯಟನೆ ಮಾಡುತ್ತಿರುವ ಅವರು, ಇಲ್ಲಿಯವರೆಗೆ 80 ದೇಶಗಳನ್ನು ಸುತ್ತಿ ಕೈಲಾಗದವನೆಂದು ಹೇಳುವವರ ಮೂಗಿನ ಬೆರಳೆಟ್ಟು ನೋಡಿಕೊಳ್ಳುವಂತೆ ಮಾಡಿದ್ದಾರೆ.

ಪಿಂಚಣಿ ಹಣದಲ್ಲಿಯೇ ಸೈಕಲ್ ಸವಾರಿ
ಅರ್ಮಾಂಡೊ ಪತ್ನಿ ಜಿಸೆಲಾ 2005ರಲ್ಲಿ ತೀರಿಕೊಂಡಳು. ಅವರ ಮಕ್ಕಳು, ಮೊಮ್ಮಕ್ಕಳು ಜರ್ಮನಿಯಲ್ಲೇ ವಾಸವಾಗಿದ್ದಾರೆ. ಅಷ್ಟೇ ಅಲ್ಲದೇ ಜರ್ಮನಿಯಲ್ಲಿ ಅರ್ಮಾಂಡೊಗೆ ಹೆಲ್ಲಾ ಎಂಬ ಹೆಸರಿನ ಪ್ರೇಯಸಿ ಸಹ ಇದ್ದಾರೆ. ನನಗೆ ವಯಸ್ಸಾಗಿರುವ ಕಾರಣ ಜರ್ಮನ್ ಸರ್ಕಾರದಿಂದ ಪಿಂಚಣಿ ಬರುತ್ತದೆ. ಅದೇ ಹಣದಿಂದ ಪ್ರವಾಸ ಮಾಡುತ್ತಿದ್ದಾರೆ. ಪ್ರತಿ ದಿನ 80ರಿಂದ 100 ಕಿ.ಮೀ. ಕ್ರಮಿಸುತ್ತಿದ್ದೇನೆ ಎನ್ನುತ್ತಾರೆ ಅರ್ಮಾಂಡೊ.

ಅರ್ಮಾಂಡೋ ಸ್ಫೂರ್ತಿಯ ಚಿಲುಮೆಯಾಗಿದ್ದಾರೆ
ಇನ್ನು ಒಂದು ದೇಶ ಸುತ್ತಾಡಿದ ಬಳಿಕ ಇನ್ನೊಂದು ದೇಶಕ್ಕೆ ವಿಮಾನದ ಮೂಲಕ ಹೊರಡುತ್ತಾರೆ. ಲಗೇಜ್ಗಳನ್ನೆಲ್ಲ ಪ್ಯಾಕ್ ಮಾಡಿ, ಅದರೊಟ್ಟಿಗೆ ವಿಮಾನದಲ್ಲಿ ಪ್ರಯಾಣಿಸುತ್ತಾರೆ. ಆ ದೇಶ ತಲುಪಿದ ಬಳಿಕ ಅಲ್ಲಿ ಮತ್ತೆ ವಾಪಸ್ ಅವುಗಳನ್ನು ಬಿಚ್ಚಿ ಎಂದಿನಂತೆ ಸೈಕ್ಲಿಂಗ್ ಮಾಡುತ್ತಾರೆ ಅರ್ಮಾಂಡೊ. ಜಾಗತಿಕ ತಾಪಮಾನ ಏರುತ್ತಿರುವ ಹೊತ್ತಿನಲ್ಲಿ ಸ್ವಂತ ವಾಹನ ಬಳಕೆಯನ್ನು ಕಡಿಮೆ ಮಾಡಿ ಸೈಕಲ್ ಬಳಸಬೇಕೆನ್ನುವವರಿಗೆ ಅರ್ಮಾಂಡೋ ಸ್ಫೂರ್ತಿಯ ಚಿಲುಮೆಯಾಗಿದ್ದಾರೆ. ಇಷ್ಟು ವಯಸ್ಸಾದವರೇ ಸೈಕಲ್ ಏರುತ್ತಿರುವಾಗ ನಮಗೇನು ಕಷ್ಟ?

ಮೊಬೈಲ್, ಲ್ಯಾಪ್ ಟಾಪ್ ಬಳಸಲ್ಲ, ಯಾವುದೇ ದುಶ್ಟಟ ಇಲ್ಲ
ಅರ್ಮಾಂಡೊ ಅವರು ಮೊಬೈಲ್, ಲ್ಯಾಪ್ ಟಾಪ್ ಗಳನ್ನು ಬಳಸುವುದಿಲ್ಲ. ಸೈಕ್ಲಿಂಗ್ ಬಗ್ಗೆ ಅವರೊಂದಿಗೆ ಮಾತಿಗೆ ಇಳಿಯುವರ ಬಳಿಯೇ ತಮ್ಮ ಫೋಟೊಗಳನ್ನು ತೆಗೆದು ಪುತ್ರನಿಗೆ ಇಮೈಲ್ ಮೂಲಕ ಕಳುಹಿಸುವಂತೆ ಅರ್ಮಾಂಡೊ ಕೇಳಿಕೊಳ್ಳುತ್ತಾರೆ. ಅಲ್ಲದೇ ತಾವಿರುವ ಜಾಗವನ್ನೂ ಉಲ್ಲೇಖಿಸುವಂತೆ ಅವರು ತಿಳಿಸುತ್ತಾರೆ. ಮಾರ್ಗಮಧ್ಯೆ ಸಿಗುವ ಹೋಟೆಲ್ಗಳಲ್ಲಿ ಊಟ, ತಿಂಡಿಯನ್ನು ಅವರು ಮಾಡುತ್ತಾರೆ. ಯಾವುದೇ ದುಷ್ಟಟವನ್ನು ಅವರು ಹೊಂದಿಲ್ಲ. ಅದೇ ಅವರ ಯಶಸ್ಸಿನ ಗುಟ್ಟು ಕೂಡ. ಪೆಟ್ರೋಲ್ ಬಂಕ್ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ರಾತ್ರಿ ಹೊತ್ತು ತಂಗಿ, ಬೆಳಿಗ್ಗೆ ಎಂದಿನಂತೆ ಅವರು ಸೈಕ್ಲಿಂಗ್ ಪ್ರಾರಂಭಿಸುತ್ತಾರೆ.

ಬೆನ್ನು ನೋವೇ ಇವರ ಸೈಕ್ಲಿಂಗ್ ಗೆ ಮೂಲ ಕಾರಣ
ಈ ಸೈಕಲ್ ಯಾತ್ರೆಗೆ ಕಾರಣವೇನೆಂದು ಕೇಳಿದಾಗ ಅವರು ನಗುತ್ತಲೇ ಉತ್ತರಿಸುತ್ತಾರೆ. 1983ರ ಸಮಯ. ಕಟ್ಟಡವೊಂದರಲ್ಲಿ ಕೆಲಸ ಮಾಡುತ್ತಿದ್ದಾಗ ಅಕಸ್ಮಾತ್ ಆಗಿ ಬಿದ್ದು ಬೆನ್ನು ನೋವು ಕಾಣಿಸಿಕೊಂಡಿತು. ಇದರಿಂದಾಗಿ ವೈದ್ಯರು ಯಾವುದಾದರೂ ಕ್ರೀಡೆಯಲ್ಲಿ ಭಾಗಿಯಾಗುವಂತೆ ಸಲಹೆ ನೀಡಿದರು. ನನಗೆ ಸೈಕ್ಲಿಂಗ್ ಅಚ್ಚುಮೆಚ್ಚು. ಹೀಗಾಗಿ ಅದನ್ನೇ ಆಯ್ದುಕೊಂಡು, ಅಂದಿನಿಂದ ವಿಶ್ವಪರ್ಯಟನೆ ಶುರು ಮಾಡಿದೆ ಎಂದು ಹೇಳುತ್ತಾರೆ ಅರ್ಮಾಂಡೋ. ತಮ್ಮ ಅನಾರೋಗ್ಯವನ್ನು ಮೆಟ್ಟಿನಿಂತು, ಜೀವನವನ್ನು ಸಾವಲಾಗಿ ಸ್ವೀಕರಿಸಿ, ಸೈಕ್ಲಿಂಗ್ ಅನ್ನೇ ಸವಾಲಾಗಿ ಸ್ವೀಕರಿಸಿ ಬದುಕಿನಲ್ಲಿ ವಿಶಿಷ್ಟ ಬಗೆಯ ಸಾಧನೆ ಮಾಡಿದ್ದಾರೆ ಅರ್ಮಾಂಡೋ.

ಇದುವರೆಗೂ 80 ದೇಶಗಳನ್ನು ಸುತ್ತಿರುವ ಅರ್ಮಾಂಡೊ
ಇದೇ 2018ರ ಜೂನ್ 25ರಂದು ಜರ್ಮನಿಯಿಂದ ಏಳನೇ ವಿಶ್ವ ಪರ್ಯಟನೆ ಪ್ರಾರಂಭಿಸಿದ ಅವರು, ಸೆ.23ರಂದು ಭಾರತ ಪ್ರವೇಶಿಸಿದರು. ಅಮೃತ್ಸರ, ಆಗ್ರಾ, ಕೋಲ್ಕತ್ತ, ಚೆನ್ನೈ, ಕನ್ಯಾಕುಮಾರಿಗೆ ಭೇಟಿ ನೀಡಿ, ಕೇರಳ ಮಾರ್ಗವಾಗಿ ರಾಜ್ಯವನ್ನು ಪ್ರವೇಶಿಸಿದ್ದಾರೆ. ಅರ್ಮಾಂಡೊ ಅವರಿಗೆ ಕಲೆ ಹಾಗೂ ಸಂಸ್ಕೃತಿಗಳ ಬಗ್ಗೆ ಹೆಚ್ಚಿನ ಕುತೂಹಲ ಹೊಂದಿದ್ದಾರೆ. ಅವರು ಭೇಟಿ ನೀಡುವ ಎಲ್ಲ ದೇಶಗಳಲ್ಲಿಯೂ ಅಲ್ಲಿನ ವಿಶೇಷತೆಗಳನ್ನು ಸ್ಥಳೀಯರಿಂದ ಕೇಳಿ ತಿಳಿದುಕೊಳ್ಳುತ್ತಾರೆ. ಅರ್ಮಾಂಡೊ ಇದುವರೆಗೂ 80 ದೇಶಗಳನ್ನು ತಮ್ಮ ಸೈಕಲ್ ಪರ್ಯಟನೆಯಲ್ಲಿ ಸುತ್ತಿದ್ದಾರೆ. ಅಲ್ಲದೇ ಭಾರತಕ್ಕೆ ಬಂದಾಗ ಇಲ್ಲಿನ ಜನರೊಂದಿಗೆ ವ್ಯವಹರಿಸುವ ಸಲುವಾಗಿ ಹಿಂದಿಯನ್ನು ಸಹ ಕಲಿತಿರುವುದು ವಿಶೇಷವೇ ಸರಿ.
-
ಶಾಲಾ ಮಕ್ಕಳ ಮೊಬೈಲ್ ಬಳಕೆ ನಿರ್ಬಂಧ: 'ಡಿಜಿಟಲ್ ಕರಡು ನೀತಿ' ಬಿಡುಗಡೆಗೊಳಿಸಿದ ರಾಜ್ಯ ಸರ್ಕಾರ -
Vastu Tips for Kitchen: ವಾಸ್ತು ಪ್ರಕಾರ ಅಡುಗೆ ಮನೆಯಲ್ಲಿ ಇವು ಇರಬಾರದು.. ಒಮ್ಮೆ ನೋಡಿ! -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ












Click it and Unblock the Notifications