'ಶುಭಸಂಕಲ್ಪ' ಸಣ್ಣಕಥಾ ಸ್ಪರ್ಧೆ ಫಲಿತಾಂಶ ಪ್ರಕಟ

ಕಥೆ ಬರೆಯುವುದು ಕೆಲವರಿಗೆ ಎಷ್ಟು ಸುಲಭವೋ, ಹೃದಯಕ್ಕೆ ಮುಟ್ಟುವಂತಹ, ಸ್ಫೂರ್ತಿಯ ಸೆಲೆಯುಕ್ಕಿಸುವಂತಹ, ಹಂಗಿಲ್ಲದ ನದಿಯ ನೀರಿನಂತೆ ಓದಿಸಿಕೊಂಡು ಹೋಗುವಂತಹ, ತೂಕಡಿಕೆಯನ್ನು ಒದ್ದೋಡಿಸುವಂತಹ, ಕನ್ನಡತನವನ್ನು ಬಡಿದೆಬ್ಬಿಸುವಂತಹ ಕಥೆಯನ್ನು ಹೆಣೆಯುವುದು ಬಲು ಕಷ್ಟದ ಕೆಲಸ. ಅನುಭವದ ಮೂಸೆಯಿಂದ ಬಂದರೆ ಮಾತ್ರ ಮನಕ್ಕೆ ತಟ್ಟುವಂತಹ ಸ್ಫೂರ್ತಿದಾಯಕ ಕಥೆ ಬರೆಯಲು ಸಾಧ್ಯ. ಇಂಥದೊಂದು ವಿಶಿಷ್ಟವಾದ ಪ್ರಯತ್ನ ಮತ್ತು ಪ್ರಯೋಗ ಇಲ್ಲಿದೆ.
"ಶುಭಸಂಕಲ್ಪ" ಅಂಕಣಕ್ಕೆ ನಿಮ್ಮಲ್ಲಿ, ನಿಮ್ಮ ಬದುಕಲ್ಲಿ ಸ್ಪೂರ್ತಿ ತುಂಬಿದ ಕಥೆಗಳನ್ನು ಮತ್ತು ಕನ್ನಡ ಭಾಷೆಯ ಬಗ್ಗೆ ಅಭಿಮಾನ ಉಕ್ಕಿಸಿದ ಕಥೆಗಳನ್ನು ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಆಹ್ವಾನಿಸಿದ್ದೆವು. ಈ ಸ್ಪರ್ಧೆಯಲ್ಲಿ ಮೂವತ್ತಕ್ಕೂ ಹೆಚ್ಚು ಸೃಜನಶೀಲ ಕಥೆಗಾರರು ಸ್ಪಂದಿಸಿದ್ದಾರೆ. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಅಭಿನಂದನೆಗಳು. ತುಂಬಾ ಕುತೂಹಲದಿಂದ ಕೂಡಿದ ಉತ್ತಮ ಕಥೆಗಳನ್ನು ಓದುಗರು ಹಂಚಿಕೊಂಡಿದ್ದಾರೆ. ಅದರಲ್ಲಿ ಸ್ಪರ್ಧೆಯ ಆಶಯಕ್ಕೆ ಹತ್ತಿರವಾದ ಮೂರು ಕಥೆಗಳನ್ನು ಆರಿಸಿದ್ದೇವೆ. ವಿಜೇತರಿಗೆ ಅಭಿನಂದನೆಗಳು.
ಸ್ಪರ್ಧೆಯ ವಿಜೇತರು
* ಪ್ರದೀಪ್ ಪರಮೇಶ್ವರ, ಭದ್ರಾವತಿ [ಕಡ್ಲೇಕಾಯಿ ವೃದ್ಧ ಮತ್ತು ಒಣಗಿದ್ದ ಟೀ ಗ್ಲಾಸ್]
* ವಿನಾಯಕ ಭಟ್ [ನನ್ನ ಕನ್ನಡದ ಭಾವ, ಕನ್ನಡದ ಅಜ್ಜ!]
* ಸಾವಿತ್ರಿ ವೆಂ. ಹಟ್ಟಿ, ಲಕ್ಕುಂಡಿ, ಗದಗ
ತೀರ್ಪುಗಾರರ ಮೆಚ್ಚುಗೆ ಪಡೆದ ಕತೆಗಾರರು:
* ಸುರೇಶ ಭಟ್ಟ, ಸಿಂಗಪುರ
ಶಿವು ಮೊರಿಗೆರಿ, ಚೇತನ್ ಪಿಲಿಕುಳ, ಶಿವಕುಮಾರ್ ಹೊಸಂಗಡಿ ಮತ್ತು ವೆಂಕಟೇಶ ಜನಾದ್ರಿಯವರ ಕತೆಗಳು ಚೆನ್ನಾಗಿದ್ದರೂ, ಸ್ಪರ್ಧೆಯ ಮೂಲ ಆಶಯಕ್ಕೆ ಕೊಂಚ ದೂರವಾಗಿದ್ದವು. ಆದರೆ ಅವರ ಪ್ರಯತ್ನಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ಕಥೆ ಹೆಣೆಯುವ ನಿಮ್ಮ ಪ್ರವೃತ್ತಿ ಹೀಗೇ ಮುಂದುವರಿಯಲಿ.
ಬರೆಯುವುದು, ಓದುವುದು ಕಡಿಮೆಯಾಗುತ್ತಿರುವ ಈ ದಿನಗಳಲ್ಲಿ, ನಿಮ್ಮೆಲ್ಲರ ಪ್ರತಿಕ್ರಿಯೆ ನಮಗೆ ತುಂಬಾ ಸಂತಸ ತಂದಿದೆ. ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ನಿಮ್ಮಲ್ಲರ ಪ್ರೀತಿಗೆ ನಾವು ಋಣಿ. [ಶುಭಸಂಕಲ್ಪ ಅಂಕಣಕ್ಕೆ ಬರೆದ ಎಲ್ಲ ಲೇಖನಗಳನ್ನು ಇಲ್ಲಿ ಓದಿರಿ.]
ಪ್ರೀತಿಯಿಂದ,
ಗುಣಮುಖ
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications