ಶುಭಸಂಕಲ್ಪ ಅಂಕಣಕ್ಕೆ ಹಾಸನದ ವಿಶ್ವ ಬರೆದ ಪತ್ರ

ಇದೆ ಪ್ರಶ್ನೆ ಕೇಳಿ ಹಾಸನದಿಂದ ವಿಶ್ವರವರ ಪ್ರಾತಿನಿಧಿಕ ಪತ್ರ ಈ ರೀತಿ ಇದೆ :
"ನಮಸ್ಕಾರ ಸಾರ್, ನನ್ನ ಹೆಸರು ವಿಶ್ವ, ನಾನು ಹಾಸನ್ನಲ್ಲಿ ವಾಸವಾಗಿದ್ದೀನಿ. ಸಾರ್ ನಾನು ನೀವು ಒನ್ಇಂಡಿಯಾ-ಕನ್ನಡದಲ್ಲಿ ಪ್ರಕಟವಾದ ’ಪ್ರೀತಿಯನ್ನು ಗುರುತಿಸುವ ಮನಸ್ಸು ಕೊಡಪ್ಪಾ ದೇವರೆ!’ ಎಂಬ ಕಥೆ ಓದಿದೆ. ನನಗೆ ಇಷ್ಟವಾಯಿತು. ಏಕೆಂದರೆ ಪ್ರೀತಿ ಇಲ್ಲದವರು ಪ್ರೀತಿ ಬೇಕು ಎಂದು ಎಷ್ಟೋ ಸಾರಿ ದೇವರ ಹತ್ತಿರ ಕೇಳಿಕೊಳ್ಳುತ್ತಿರುತ್ತಾರೆ. ಆದರೆ ಇರುವ ಸಂಬಂಧಗಳಲ್ಲಿ ನಿಜವಾದ ಪ್ರೀತಿ ಯಾರಿಗೂ ಕಾಣುವುದಿಲ್ಲ, ಅರ್ಥಮಾಡಿಕೊಳ್ಳುವುದೂ ಇಲ್ಲ. ಆದರೆ ನೀವು ಈ ಕಥೆಯಲ್ಲಿ ಬ್ರೆಡ್ಡಿನ ವಿಚಾರಕ್ಕೆ ವಿಚ್ಛೇದನ ಕೇಳಿ ರೋಸಿ ಕೋರ್ಟಿಗೆ ಹೋದಳು ಎಂದು ತಿಳಿಸಿದ್ದೀರಿ. 25 ವರ್ಷಗಳಿಂದ ಬೇರೆಯವರಿಗೆ ಆದರ್ಶ ದಂಪತಿಗಳಾಗಿದ್ದ ಇವರಿಗೆ ಅವರವರ ಇಷ್ಟಪಡುವ ಆಹಾರ ವಸ್ತುಗಳ ಬಗ್ಗೆ ಗೊತ್ತಿರಲಿಲ್ಲವೇ? ಎಂಬುದು ನನಗೆ ಅರ್ಥವಾಗದ ವಿಷಯವಾಗಿದೆ, ಇದರ ಬಗ್ಗೆ ವಿವರಿಸಿ. 25 ವರ್ಷಗಳಿಂದ ಹೆಂಡತಿಗೆ ಡ್ಯಾನಿ ನನಗೆ ಬ್ರೆಡ್ನ ಗಟ್ಟಿಯಾದ ಭಾಗ ಇಷ್ಟ ಅಂತ ಯಾವತ್ತು ಹೇಳಿರಲಿಲ್ಲವೇ? ಏಕೆ? ಆದರ್ಶ ದಂಪತಿಗಳು ಎಂದರೆ ಒಬ್ಬರ ಬಗ್ಗೆ ಒಬ್ಬರ ಅರ್ಥಮಾಡಿಕೊಂಡಿರಬೇಕು ಅಲ್ಲವೇ?"
ಎಲ್ಲಾ ಓದುಗರು ಕೇಳಿದ ಪ್ರಶ್ನೆ ತಾರ್ಕಿಕವಾಗಿ ಸರಿಯಾಗಿಯೇ ಇದೆ. ಆದರೆ ನೋಡಿ, ಎಷ್ಟೋ ಸಂಬಂಧಗಳು ಚಿಕ್ಕ ಪುಟ್ಟ ವಿಷಯಗಳಿಗೆ ಹಳಸಿ ಹೋಗುತ್ತವೆ. ನಾವು ಪ್ರಯತ್ನ ಪಡದಿದ್ದರೆ ನಮ್ಮ ಪಕ್ಕದಲ್ಲಿರುವ ವ್ಯಕ್ತಿಯ ಬಗ್ಗೆ ಹಲವು ವರ್ಷಗಳ ನಂತರವೂ ನಮಗೆ ಎಷ್ಟೊಂದು ವಿಷಯಗಳ ಬಗ್ಗೆ, ಅವರ ಇಷ್ಟ-ಕಷ್ಟಗಳ ಬಗ್ಗೆ ತಿಳಿಯುವುದೇ ಇಲ್ಲ. ಶೇಕಡ 90ರಷ್ಟು ವಿಚ್ಛೇದನಗಳು ಚಿಕ್ಕ ಪುಟ್ಟ ವಿಷಯಗಳಿಗೆ ಕೋರ್ಟ್ನ ಮೆಟ್ಟಿಲೇರಿವೆ ಮತ್ತು ಏರುತ್ತಲಿವೆ.
ನೀವು ಒಂದು ಬುದ್ಧಿಮತ್ತೆಯ ಕಸರತ್ತು ಮಾಡಿ, ನಿಮ್ಮ ತುಂಬಾ ಹತ್ತಿರದ ಸಂಬಂಧದ (ಅಂದರೆ ತಂದೆ, ತಾಯಿ, ಅಣ್ಣ, ಅಕ್ಕ, ಹೆಂಡತಿ, ತಮ್ಮ, ಸ್ನೇಹಿತ, ಗೆಳತಿ ಇತ್ಯಾದಿ) ಹೆಸರನ್ನು ಒಂದು ಕಾಗದದಲ್ಲಿ ಬರೆದು, ಅವರ ಇಷ್ಟ-ಕಷ್ಟಗಳ (ಉದಾಹರಣೆಗೆ ಅವರ ಇಷ್ಟದ ಬಣ್ಣ, ತಿಂಡಿ, ಸಿಹಿ, ಹವ್ಯಾಸ... ಇತ್ಯಾದಿ) ಪಟ್ಟಿ ಮಾಡಿ... ಚಿಕ್ಕ ಪಟ್ಟಿ ನಿಮಗೆ ಗಾಬರಿಪಡಿಸಬಹುದು. ಆಗ ನಿಮಗೆ ಕತೆಯ ಭಾವಾರ್ಥ ತಿಳಿದೀತು. ದೂರದ ಅಮೆರಿಕಾದ ಬಗ್ಗೆ, ಚಂದ್ರನ ಬಗ್ಗೆ, ಮಂಗಳ ಗ್ರಹದ ಬಗ್ಗೆ ಎಷ್ಟೊಂದು ತಿಳಿದಿರುವ ನಾವು, ನಮ್ಮ ಪಕ್ಕದಲ್ಲಿರುವ, ನಮ್ಮೊಂದಿಗೆ ಜೀವಿಸುತ್ತಿರುವ ವ್ಯಕ್ತಿಯ ಬಗ್ಗೆ ಹಲವು ಬಾರಿ ತಿಳಿದಿರುವುದೇ ಇಲ್ಲ.
'ಶುಭಸಂಕಲ್ಪ' ಅಂಕಣದ ಕತೆಗಳು ತರ್ಕದ ಕತೆಗಳಲ್ಲ, ಸ್ಪೂರ್ತಿಯ ಕತೆಗಳು. ನಿಮ್ಮಲ್ಲಿ ಜೀವನ ಸ್ಪೂರ್ತಿಯ ಸೆಲೆ ಉಕ್ಕಿಸಲಿ ಎಂದು ಆಶಿಸುತ್ತಾ, ಇದಕ್ಕೆ ಸಂಬಂಧ ಪಟ್ಟ ಒಂದು ಕತೆಯನ್ನು ಈ ವಾರ ಹಂಚಿಕೊಳ್ಳುತ್ತೇನೆ. ದಯವಿಟ್ಟು ಗಮನಿಸಿ ಇದು ಕಾಲ್ಪನಿಕ ಕತೆಯಲ್ಲ, ನೈಜ ಘಟನೆಯನ್ನು ಆಧರಿಸಿದ ಕತೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications