ಶುಭಸಂಕಲ್ಪ ಅಂಕಣಕ್ಕೆ ಹಾಸನದ ವಿಶ್ವ ಬರೆದ ಪತ್ರ

ಇದೆ ಪ್ರಶ್ನೆ ಕೇಳಿ ಹಾಸನದಿಂದ ವಿಶ್ವರವರ ಪ್ರಾತಿನಿಧಿಕ ಪತ್ರ ಈ ರೀತಿ ಇದೆ :
"ನಮಸ್ಕಾರ ಸಾರ್, ನನ್ನ ಹೆಸರು ವಿಶ್ವ, ನಾನು ಹಾಸನ್ನಲ್ಲಿ ವಾಸವಾಗಿದ್ದೀನಿ. ಸಾರ್ ನಾನು ನೀವು ಒನ್ಇಂಡಿಯಾ-ಕನ್ನಡದಲ್ಲಿ ಪ್ರಕಟವಾದ ’ಪ್ರೀತಿಯನ್ನು ಗುರುತಿಸುವ ಮನಸ್ಸು ಕೊಡಪ್ಪಾ ದೇವರೆ!’ ಎಂಬ ಕಥೆ ಓದಿದೆ. ನನಗೆ ಇಷ್ಟವಾಯಿತು. ಏಕೆಂದರೆ ಪ್ರೀತಿ ಇಲ್ಲದವರು ಪ್ರೀತಿ ಬೇಕು ಎಂದು ಎಷ್ಟೋ ಸಾರಿ ದೇವರ ಹತ್ತಿರ ಕೇಳಿಕೊಳ್ಳುತ್ತಿರುತ್ತಾರೆ. ಆದರೆ ಇರುವ ಸಂಬಂಧಗಳಲ್ಲಿ ನಿಜವಾದ ಪ್ರೀತಿ ಯಾರಿಗೂ ಕಾಣುವುದಿಲ್ಲ, ಅರ್ಥಮಾಡಿಕೊಳ್ಳುವುದೂ ಇಲ್ಲ. ಆದರೆ ನೀವು ಈ ಕಥೆಯಲ್ಲಿ ಬ್ರೆಡ್ಡಿನ ವಿಚಾರಕ್ಕೆ ವಿಚ್ಛೇದನ ಕೇಳಿ ರೋಸಿ ಕೋರ್ಟಿಗೆ ಹೋದಳು ಎಂದು ತಿಳಿಸಿದ್ದೀರಿ. 25 ವರ್ಷಗಳಿಂದ ಬೇರೆಯವರಿಗೆ ಆದರ್ಶ ದಂಪತಿಗಳಾಗಿದ್ದ ಇವರಿಗೆ ಅವರವರ ಇಷ್ಟಪಡುವ ಆಹಾರ ವಸ್ತುಗಳ ಬಗ್ಗೆ ಗೊತ್ತಿರಲಿಲ್ಲವೇ? ಎಂಬುದು ನನಗೆ ಅರ್ಥವಾಗದ ವಿಷಯವಾಗಿದೆ, ಇದರ ಬಗ್ಗೆ ವಿವರಿಸಿ. 25 ವರ್ಷಗಳಿಂದ ಹೆಂಡತಿಗೆ ಡ್ಯಾನಿ ನನಗೆ ಬ್ರೆಡ್ನ ಗಟ್ಟಿಯಾದ ಭಾಗ ಇಷ್ಟ ಅಂತ ಯಾವತ್ತು ಹೇಳಿರಲಿಲ್ಲವೇ? ಏಕೆ? ಆದರ್ಶ ದಂಪತಿಗಳು ಎಂದರೆ ಒಬ್ಬರ ಬಗ್ಗೆ ಒಬ್ಬರ ಅರ್ಥಮಾಡಿಕೊಂಡಿರಬೇಕು ಅಲ್ಲವೇ?"
ಎಲ್ಲಾ ಓದುಗರು ಕೇಳಿದ ಪ್ರಶ್ನೆ ತಾರ್ಕಿಕವಾಗಿ ಸರಿಯಾಗಿಯೇ ಇದೆ. ಆದರೆ ನೋಡಿ, ಎಷ್ಟೋ ಸಂಬಂಧಗಳು ಚಿಕ್ಕ ಪುಟ್ಟ ವಿಷಯಗಳಿಗೆ ಹಳಸಿ ಹೋಗುತ್ತವೆ. ನಾವು ಪ್ರಯತ್ನ ಪಡದಿದ್ದರೆ ನಮ್ಮ ಪಕ್ಕದಲ್ಲಿರುವ ವ್ಯಕ್ತಿಯ ಬಗ್ಗೆ ಹಲವು ವರ್ಷಗಳ ನಂತರವೂ ನಮಗೆ ಎಷ್ಟೊಂದು ವಿಷಯಗಳ ಬಗ್ಗೆ, ಅವರ ಇಷ್ಟ-ಕಷ್ಟಗಳ ಬಗ್ಗೆ ತಿಳಿಯುವುದೇ ಇಲ್ಲ. ಶೇಕಡ 90ರಷ್ಟು ವಿಚ್ಛೇದನಗಳು ಚಿಕ್ಕ ಪುಟ್ಟ ವಿಷಯಗಳಿಗೆ ಕೋರ್ಟ್ನ ಮೆಟ್ಟಿಲೇರಿವೆ ಮತ್ತು ಏರುತ್ತಲಿವೆ.
ನೀವು ಒಂದು ಬುದ್ಧಿಮತ್ತೆಯ ಕಸರತ್ತು ಮಾಡಿ, ನಿಮ್ಮ ತುಂಬಾ ಹತ್ತಿರದ ಸಂಬಂಧದ (ಅಂದರೆ ತಂದೆ, ತಾಯಿ, ಅಣ್ಣ, ಅಕ್ಕ, ಹೆಂಡತಿ, ತಮ್ಮ, ಸ್ನೇಹಿತ, ಗೆಳತಿ ಇತ್ಯಾದಿ) ಹೆಸರನ್ನು ಒಂದು ಕಾಗದದಲ್ಲಿ ಬರೆದು, ಅವರ ಇಷ್ಟ-ಕಷ್ಟಗಳ (ಉದಾಹರಣೆಗೆ ಅವರ ಇಷ್ಟದ ಬಣ್ಣ, ತಿಂಡಿ, ಸಿಹಿ, ಹವ್ಯಾಸ... ಇತ್ಯಾದಿ) ಪಟ್ಟಿ ಮಾಡಿ... ಚಿಕ್ಕ ಪಟ್ಟಿ ನಿಮಗೆ ಗಾಬರಿಪಡಿಸಬಹುದು. ಆಗ ನಿಮಗೆ ಕತೆಯ ಭಾವಾರ್ಥ ತಿಳಿದೀತು. ದೂರದ ಅಮೆರಿಕಾದ ಬಗ್ಗೆ, ಚಂದ್ರನ ಬಗ್ಗೆ, ಮಂಗಳ ಗ್ರಹದ ಬಗ್ಗೆ ಎಷ್ಟೊಂದು ತಿಳಿದಿರುವ ನಾವು, ನಮ್ಮ ಪಕ್ಕದಲ್ಲಿರುವ, ನಮ್ಮೊಂದಿಗೆ ಜೀವಿಸುತ್ತಿರುವ ವ್ಯಕ್ತಿಯ ಬಗ್ಗೆ ಹಲವು ಬಾರಿ ತಿಳಿದಿರುವುದೇ ಇಲ್ಲ.
'ಶುಭಸಂಕಲ್ಪ' ಅಂಕಣದ ಕತೆಗಳು ತರ್ಕದ ಕತೆಗಳಲ್ಲ, ಸ್ಪೂರ್ತಿಯ ಕತೆಗಳು. ನಿಮ್ಮಲ್ಲಿ ಜೀವನ ಸ್ಪೂರ್ತಿಯ ಸೆಲೆ ಉಕ್ಕಿಸಲಿ ಎಂದು ಆಶಿಸುತ್ತಾ, ಇದಕ್ಕೆ ಸಂಬಂಧ ಪಟ್ಟ ಒಂದು ಕತೆಯನ್ನು ಈ ವಾರ ಹಂಚಿಕೊಳ್ಳುತ್ತೇನೆ. ದಯವಿಟ್ಟು ಗಮನಿಸಿ ಇದು ಕಾಲ್ಪನಿಕ ಕತೆಯಲ್ಲ, ನೈಜ ಘಟನೆಯನ್ನು ಆಧರಿಸಿದ ಕತೆ.
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications