ಅವಳ ಕಂಗಳು : ಹವ್ಯಾಸಿ ಲೇಖಕ ಬರೆದ ಪ್ರೇಮ ಕವನ
ಭೂ ಲೋಕಕೆ ಬಂದೆಯಾ ಅಪ್ಸರೆ
ನನ್ನ ಪ್ರೀತಿಯಲ್ಲಿ ಮಾಡ್ತೀನಿ ನಿನ್ನ ಸೆರೆ
ಎಲ್ಲೂ ಹೋಗದಿರು ನನ್ನ ಬಿಟ್ಟು
ಹೋಗುವುದಾದರೆ ಹೋಗು ನನ್ನ ಸುಟ್ಟು
ನೀ ನಡೆದರೆ ಜಿಂಕೆಯಂತೆ
ನೀ ಕುಣಿದರೆ ನವಿಲಿನಂತೆ
ನೀ ನುಡಿದರೆ ಕೋಗಿಲೆಯಂತೆ
ನೀ ನನಗಂತ ಬರೆದಾಗಿದೆಯಂತೆ
ನಿನ್ನ ಕಂಗಳು ಪ್ರಶಾಂತ ಸಾಗರದಂತೆ
ಆ ನಿನ್ನ ನೋಟ ಬೆಳದಿಂಗಳ ಚಂದ್ರನಂತೆ
ಈ ಕಂಗಳೇ ನನಗೆ ದಾರಿ ದೀಪದಂತೆ
ನೀ ಜೊತೆಗೆ ಇರು ನೆರಳಿನಂತೆ [ಪ್ರೇಮಕೆ ಹುಟ್ಟೂ ಇಲ್ಲ, ಹೇಳಿಕೊಡಲು ಗುರುವೂ ಬೇಕಾಗಿಲ್ಲ!]

ನಿನ್ನ ಕಣ್ಣಲಿದೆ ಏನೋ ಆಕರ್ಷಣೆ
ಇದ ನಂಬು ನೀ ನನ್ನಾಣೆ
ನಿನ್ನ ಕಂಗಳಿಗಿಲ್ಲ ಸರಿಸಾಟಿ
ಅವು ಕೊಡುತಾವೆ ರಂಭೆ ಉರ್ವಶಿಗೂ ಪೈಪೋಟಿ
ನಿನ್ನ ಕಣ್ಣಲ್ಲಿ ಕಾಣ್ತಿದೆ ಮೂರು ಲೋಕ
ನಂಬು ನಾ ಮಾಡ್ತಿಲ್ಲ ಯಾವದೇ ನಾಟಕ
ನಿನ್ನ ಕಂಗಳ ನೋಡಿದ ಯಾವದೋ ಜಿಂಕೆ
ತಲೆ ತಗ್ಗಿಸಿದೆ ಮೂಡಿ ಸೋತೆನೆಂಬ ಶಂಕೆ
ನಿನ್ನ ಕಂಗಳು ಹೊಳೆಯುತಿವೆ ಲಕ-ಲಕ
ಅದನ್ನ ನೋಡಿ ಮಂಕಾದಳು ಮೇನಕ
ಅವಳಿಗೆ ನಿನ್ನ ಕಂಡರೆ ಹೊಟ್ಟೆ ಕಿಚ್ಚು
ಯಾಕೆಂದರೆ ನೀನೆ ಅವಳಿಗಿಂತ ಹೆಚ್ಚು
ನಿನ್ನ ಕಂಗಳ ಹೊಳಪೇ ಸಾಕು
ತರುತ್ತದೆ ಕತ್ತಲೆಯಲು ಬೆಳಕು
ಮಾಡೋಣ ಸ್ವಲ್ಪ ವಿದ್ಯುತ್ ಉಳಿತಾಯ
ನೀ ಮಾಡು ವಿದ್ಯುತ್ ಉಳಿಸಲು ಸಹಾಯ
ನಿನ್ನ ಕಂಗಳ ನೋಡಿದಾಗಿನಿಂದ
ನಿಂತಲೇ ನಿಲ್ಲಲಾಗುತ್ತಿಲ್ಲ ನನ್ನಿಂದ
ಕೇಳುತ್ತಿನಿ ಒಂದು ಸಹಾಯ ನಿನ್ನಿಂದ
ಕೈ ಹಿಡಿದು ಮೇಲೆತ್ತು ಈ ಪ್ರಪಾತದಿಂದ
ನಿನ್ನ ಕಣ್ಣಲಿದೆ ಏನೋ ಸೆಳೆತ
ಕಾಡುತಿದೆ ನನ್ನ ಸತತ
ಕಿತ್ತು ಕೊಳ್ಳಲ್ಲೇ ಆ ನಿನ್ನ ಕಂಗಳನ್ನ
ಚಿನ್ನದ ಮೊಟ್ಟೆಗೆ ಸಾಯಿಸಬಾರದು ಕೋಳಿಯನ್ನ
ನಿನ್ನ ಅಂದ ನೋಡಿದ ನವಿಲು
ನಿಂತಿದೆ ಬಡಿದಂತೆ ಸಿಡಿಲು
ನಿನ್ನ ಚೆಂದ ನೋಡಿದ ಹೂವುಗಳು
ನಿನ್ನಂತೆ ಕಾಣಲು ಮಾಡಿವೆ ಮೇಕ್ಅಪ್-ಗಳು
ನೀ ಬಿಟ್ಕೊಂಡ್ ಬಂದಾಗ ಕೂದಲು
ನಿನ್ನ ನೋಡಲು ನೂಕು ನುಗಲು
ನಿನ್ನ ನೋಡಲು ಕಂಗಳ ಕಾತುರ
ಯಾವಾಗಲು ಇರುವೆಯಾ ನಂಗೆ ಹತ್ತಿರಾ?
ಇನ್ನು ನಿನ್ನ ಹೊಗಳಲೇ
ಅಥವಾ ಸುಮ್ಮನೆ ಇದ್ದು ಬಿಡಲೇ
ತಿಳಿಯುತ್ತಿಲ್ಲ ಏನೊಂದು
ಹೇಳಬಾರದೆ ನೀನೆ ಬಂದು
ನಿನ್ನ ಕಂಗಳ್ಯಾಕೆ ಇಷ್ಟು ಪ್ರಕಾಶ
ಮಾಡಲೇ ಉತ್ತರ ಹುಡುಕುವ ಸಾಹಸ
ಆ ಕಂಗಳ ಪ್ರಕಾಶಕ್ಕೆ ಕಾರಣ
ಅಲ್ಲಿರುವ ಯಾವ್ದೋ ಒಂದು ಬಿಂಬ
ಸರಿಯಾಗಿ ನೋಡಿದಾಗ ತಿಳಿಯಿತು
ವಾಹ್! ಅದು ನನ್ನದೇ ಪ್ರತಿಬಿಂಬ
ಓಹ್ ಆ ಕಂಗಳ ಚೆಲುವಿಗೆ ಕಾರಣ ನಾನಾ
ನಂಗೆ ಗೊತ್ತೇ ಇರಲಿಲ್ಲ ಇದು ಇಷ್ಟು ದಿನ
ಈಗ ತಿಳಿಯಿತು ಆ ಸಿಹಿಯಾದ ನಿಜ
ನನಗೋ ಮಜಾನೋ ಮಜಾ
-
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ -
Nuwan Thushara: ಆರ್ಸಿಬಿಗಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವಿರುದ್ಧವೇ ತಿರುಗಿ ಬಿದ್ದ ಸ್ಟಾರ್ ಆಟಗಾರ ನುವಾನ್ ತುಷಾರ












Click it and Unblock the Notifications