ಪ್ರೊಗ್ರಾಮುಗಳ ಲೆಕ್ಕವಿಲ್ಲದ ಅಜ್ಜಿಯ ಐಟಿ ಕ್ಯಾಬಿನ್

ನಿನ್ನ ಆಫೀಸಿನ ಹೊಸ ಕ್ಯಾಬಿನ್ನನ್ನು
ಸೆಮಿನಾರು ಹಾಲ್, ಎಲ್.ಸಿ.ಡಿ ಪರದೆಗಳು
ಕೆಂಪು ನೆಲಹಾಸು ಕನ್ನಡಿಯ ಗೋಡೆಗಳು
ನಡುವೆ ಮಂದಸ್ಮಿತೆ ಎಂ.ಡಿ ನೀನು!
ನಾನೂ ಕುಶಲವಿಲ್ಲಿ ನನ್ನದೇ ಕ್ಯಾಬಿನ್ನಿನಲ್ಲಿ
ನಗಬೇಡವೇ ಪುಟ್ಟಿ ಹಳೆಯದೆಂದು
ನನ್ನ ಮದರ್ ಬೋರ್ಡಿಗೆ ಎಂದಿಗೂ ಅಮರತ್ವ
ಫೈಲುಗಳ ಡೌನ್ಲೋಡು ಅಪ್ಡೇಟ್ಗಳ ಹಂಗಿಲ್ಲ
ನನ್ನ ಐಕಾನುಗಳು ಎಲ್ಲಕಾಲಕು ಹೊಸತು
ಹಳೆಯ ಇ-ಸ್ಕ್ಯಾನಿದೆ ಓಡಿಸಲು ವೈರಸ್ಸು
ಸೊಳ್ಳೆ ಚಿಗಟಗಳಿಲ್ಲ ಜಿರಲೆ ಜೇಡಗಳೂ ಇಲ್ಲ
ಪಿಪಿಪಿ ವೈರಸ್ಸು ತ್ರೋಜನ್ನು ಸುಳಿಯುವುದೆ ಇಲ್ಲ
ನನ್ನಜ್ಜಿಯದೇ ಸಾಫ್ಟ್ ವೇರು ಹುಸಿಯದಲ್ಲ
ನನ್ನ ಸಿಪಿಯುವಿನಲ್ಲಿ ಮೆಮೊರಿಚಿಪ್ಪುಗಳು ಸಾವಿರಾರು
ಡಬ್ಬಿ ತೆರೆದರೆ ಸಾಕು ದಿಬ್ಬಣದ ಸಾಲು ಸಾಲು
ಸಿಡಿಯದ ಸಾಸಿವೆ ಹಂಜಕ್ಕಿಯನ್ನ ಉಪ್ಪುಮಯವೇ ಆದ ಸೊಪ್ಪುಸಾರು
ಹೆಜ್ಜೆಹೆಜ್ಜೆಗೆ ಎರರ್ರು ಕರೆಪ್ಟಿನದೇ ಜೋರು ನನಗಾಗ ವರುಷ ಹದಿನಾರು
ಈಗ ಹಾಗೇನಿಲ್ಲ ಎಲ್ಲ ಠಾಕುಠೀಕು
ಬಿದ್ದರೂ ಐವತ್ತು ಎಲೆಗಳ ಸಾಲು
ನನ್ನ ಸೌಟೆಂಬ ಮೌಸಿಗೆ ಇಲ್ಲ ಸೋಲು
ಹೋಳಿಗೆಯ ರುಚಿಯನರಸಿ ಬರುತಾಳೆ ಗೌರಿ
ಗಣಪನೋ ಅನಂತನೋ ಬೀಗರೋ ನೆಂಟರೋ
ಎಲ್ಲ ಒಂದೆ ನನ್ನ ಕ್ಯಾಬಿನ್ನಿಗೆ
ನೋಡಿಲ್ಲಿ ಬಂಗಾರಿ ಕ್ಯಾಬಿನ್ನು ಮಾಸಿಲ್ಲ
ಬರೆದ ಪ್ರೋಗ್ರಾಮುಗಳ ಲೆಕ್ಕವಿಲ್ಲ
ಕರಿದದ್ದು ಬೆಂದದ್ದು ಅರಳಿದ್ದು ಹುರಿದಿದ್ದು
ಹೊತ್ತು ಹೆತ್ತದ್ದು ತಿನಿಸಿ ಬೆಳೆಸಿದ್ದು ಕರೆದು ಕಳಿಸಿದ್ದು
ಎಲ್ಲವೂ ಇತಿಹಾಸ ಶೂನ್ಯದಲ್ಲಿ
ನಿನ್ನಂತೆ ಪರದಾಡಬೇಕಿಲ್ಲ ಗಾರ್ಬೇಜು ವಿತರಣೆಗೆ
ನನ್ನಂಗಳದ ಪಾರಿಜಾತ ಸೀಬೆ
ಪಾತಿಗಳೆ ಸುಸ್ಥಾನ ನನ್ನ ಕ್ಯಾಬಿನ್ನ ಕಸಗಳಿಗೆ
ಹೂ ಅರಳಿ ನಕ್ಕಾಗ ನಿನ್ನದೇ ನೆನಪು ನನಗೆ
ನನ್ನ ತೊಡೆಗಳು ಕಾಯುತ್ತಿವೆ ನಿನ್ನ ಲ್ಯಾಪ್ಟಾಪಿಗಾಗಿ
ಚಂದದರಳೆಲೆಯನ್ನು ಎಂದು ಕೊಡುವೆಯೇ ಹುಡುಗಿ
ಹುಟ್ಟಿಸಿ ಬಿಡಬೇಡ ತಾಯಿ ಹೊಟ್ಟೆಯಿಲ್ಲದ ಶಿಶುವನ್ನ
ತಾಳಲಾರದು ನನ್ನ ಕ್ಯಾಬಿನ್ನು ಇಂಥ ಅವಮಾನವನ್ನ
ವಿಸೂ: ಅಜ್ಜಿಯ ಐಟಿ (ಇಂಡಿಯನ್ ತಿನಿಸಿನ) ಕ್ಯಾಬಿನ್
-
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Ajith Kumar: ನಟ ಅಜಿತ್ ಕುಮಾರ್ಗೆ ಮಹೀಂದ್ರಾದಿಂದ ರೇಸಿಂಗ್ ಕಾರ್ ಗಿಫ್ಟ್; ಇದರ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಿ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ -
Viral Video: ಮಗನ ಸಾಧನೆ ಕಂಡು ಭಾವುಕರಾದ ಪೋಷಕರು; ಕ್ಯೂಟ್ ವಿಡಿಯೋ ವೈರಲ್ -
ಸರ್ಕಾರಿ ಜಮೀನು ಒತ್ತುವರಿ ತಡೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಸ್ಥಳಕ್ಕೆ ಭೇಟಿ ನೀಡುತ್ತಿರಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ -
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ -
Trisha Krishnan: ದಳಪತಿ ವಿಜಯ್ ಜೊತೆಗಿನ ಸಂಬಂಧ, ಡಿವೋರ್ಸ್ ಬಗ್ಗೆ ಮಾಧ್ಯಮಗಳ ಪ್ರಶ್ನೆ: ನಟಿ ತ್ರಿಶಾ ಕೊಟ್ಟ ಉತ್ತರವೇನು? -
92,00,00,000 ರೂಪಾಯಿ ಬಹುಮಾನ, ಈತನ ಬಗ್ಗೆ ಸುಳಿವು ನೀಡಿದರೆ ನಿಮಗೂ ಸಿಗಲಿದೆ ಹಣ... Mojtaba Khamenei -
Shri Gandhada Gudi Serial: "ಶ್ರೀಗಂಧದಗುಡಿ" ಸೀರಿಯಲ್ಗೆ ಗುಡ್ಬೈ ಹೇಳಿದ ಸಂಜನಾ ಬುರ್ಲಿ, ಕಾರಣ ಇಲ್ಲಿದೆ












Click it and Unblock the Notifications